ಬ್ರೇಕಿಂಗ್ ನ್ಯೂಸ್
08-10-23 04:24 pm Mangalore Correspondent ಕ್ರೈಂ
ಉಳ್ಳಾಲ, ಅ.8: ಜೇಬಲ್ಲಿ ಕವಡೆ ಕಾಸು ಇಲ್ಲದಿದ್ದರೂ ಕೊರಳಿಗೆ ಹೊಳೆಯುವ ಚೈನು, ಕೈಯಲ್ಲಿ ಐಫೋನ್ ಒಂದನ್ನ ಹಿಡಿದರೆ ಸಾಕು.. ಅದೆಲ್ಲ ಅಸಲಿಯೆಂದೇ ಗ್ರಹಿಸಿ ಎಂಥವರೂ ಯಾಮಾರುತ್ತಾರೆ ಎಂಬುದಕ್ಕೆ ತೊಕ್ಕೊಟ್ಟಿನಲ್ಲಿ ಶನಿವಾರ ರಾತ್ರಿ ನಡೆದ ಘಟನೆಯೇ ಸಾಕ್ಷಿಯಾಗಿದೆ.
ಶನಿವಾರ ಸಂಜೆ 7 ಗಂಟೆ ಸುಮಾರಿಗೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಸ್ಸು ತಂಗುದಾಣದ ಬಳಿಯಿರುವ ಅಯ್ಯಂಗಾರ್ ಬೇಕರಿಗೆ ಗ್ರಾಹಕನ ಸೋಗಲ್ಲಿ ಬಂದ ಆಸಾಮಿಯೋರ್ವ ಬೇಕರಿ ಮಾಲೀಕನನ್ನ ಯಾಮಾರಿಸಿ ತುಪ್ಪ, ಸಿಹಿ ತಿಂಡಿಗಳನ್ನ ಸಾಲವಾಗಿ ಖರೀದಿಸಿದ್ದಲ್ಲದೆ, ರವೆ ಲಾಡನ್ನ ಎಗರಿಸಿದ್ದಾನೆ.
ಕೈಯಲ್ಲಿ ಎರಡೆರಡು ಬ್ರೇಸ್ ಲೇಟ್, ಕುತ್ತಿಗೆಯಲ್ಲಿ ದಪ್ಪದ ಎರಡು ಮೂರು ಚೈನ್ ಗಳನ್ನ ಧರಿಸಿ ಬೈಕಲ್ಲಿ ಬಂದಿದ್ದ ಮಧ್ಯ ವಯಸ್ಕ ವ್ಯಕ್ತಿ ಜಾಕೆಟ್ ಹಾಕಿ ಹೆಲ್ಮೆಟನ್ನೂ ತೆಗೆಯದೆ ಬೇಕರಿಯೊಳಗೆ ಸಣ್ಣ ಮೊಬೈಲಲ್ಲಿ ಯಾರಲ್ಲೋ ಮಾತನಾಡುತ್ತಿದ್ದಂತೆ ನಟಿಸಿ ಸುಮಾರು 1,400 ರೂಪಾಯಿಗಳ ತಿಂಡಿ, ತಿನಿಸುಗಳನ್ನ ಖರೀದಿಸಿದ್ದ. ತನ್ನ ಹೆಸರನ್ನು ನಿತಿನ್ ಶೆಟ್ಟಿ ಎಂದು ಬೇಕರಿ ಮಾಲಕ ನವೀನ್ ಅವರಲ್ಲಿ ಪರಿಚಯಿಸಿಕೊಂಡಿದ್ದಾನೆ. ತನ್ನಲ್ಲಿ ಕ್ಯಾಷ್ ಇಲ್ಲ, ಗೂಗಲ್ ಪೇ ಮಾಡಲು ಐಫೋನ್ ಆಫ್ ಆಗಿದೆ. ಈಗಲೇ ಹಣ ತಂದು ಕೊಡುವುದಾಗಿ ಹೇಳಿ ಮೊಬೈಲ್ ನಂಬರನ್ನ ನೀಡಿದ್ದಾನೆ. ಆಸಾಮಿಯನ್ನ ನಂಬಿದ ಮಾಲಕ ಸಿಹಿತಿಂಡಿಗಳನ್ನ ನೀಡಿದ್ದಾರೆ.
ಬೇಕರಿಯಿಂದ ಹೊರಟ ಆಸಾಮಿ ಪಕ್ಕದ ಸಣ್ಣ ದಿನಸಿ ಅಂಗಡಿಗೂ ಹೋಗಿದ್ದು ಮಾಲಕಿ ಪೂರ್ಣಿಮ ಅವರಲ್ಲಿ ತುಪ್ಪ, ತೆಂಗಿನಕಾಯಿ ಸೇರಿದಂತೆ 850 ರೂ. ದಿನಸಿ ಸಾಮಾನನ್ನು ಖರೀದಿಸಿದ್ದಾನೆ. ತನ್ನಲ್ಲಿದ್ದ 1,500 ರೂ. ಹಣವನ್ನ ಬೇಕರಿಗೆ ನೀಡಿದೆ. ಐಫೋನ್ ಆಫ್ ಆಗಿದೆ ಎಂದು ಹೇಳಿದ ಅಪರಿಚಿತ ವ್ಯಕ್ತಿ ಇಲ್ಲಿಯೂ ಮಾಲಕಿಯನ್ನ ಯಾಮಾರಿಸಿ ಮೊಬೈಲ್ ನಂಬರ್ ನೀಡಿ ಕಾಲ್ಕಿತ್ತಿದ್ದಾನೆ. ಅಪರಿಚಿತನ ಮೈಯಲ್ಲಿದ್ದ ಬಂಗಾರ, ಕೈಯಲ್ಲಿದ್ದ ಐಪೋನ್ ನಂಬಿ ಸಾಲ ನೀಡಿದ್ದ ಮಹಿಳೆ ಆತ ನೀಡಿದ್ದ ನಂಬರಿಗೆ ರಾತ್ರಿ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ತಕ್ಷಣ ಪಕ್ಕದ ಬೇಕರಿಗೆ ಬಂದು ಸಾಮಾನು ಖರೀದಿಸಿದ ವ್ಯಕ್ತಿ ಪರಿಚಯದವರೇ ಎಂದು ಮಾಲೀಕರಲ್ಲಿ ಕೇಳಿದಾಗ ಅಲ್ಲಿಯೂ ಯಾಮಾರಿಸಿದ ವಿಷಯ ತಿಳಿದುಬಂದಿತ್ತು. ಅಂಗಡಿ ಹಾಗೂ ಬೇಕರಿ ಮಾಲೀಕರಿಗೆ ತಾವು ಮೋಸ ಹೋಗಿರುವುದು ಮನವರಿಕೆ ಆಗಿದೆ.
ಬೇಕರಿಯ ಸಿಸಿಟಿವಿಯಲ್ಲಿ ಅಪರಿಚಿತ ವ್ಯಕ್ತಿ ರವೆ ಲಾಡು ಎಗರಿಸಿದ ದೃಶ್ಯ ರೆಕಾರ್ಡ್ ಆಗಿದ್ದು ಹೆಲ್ಮೆಟ್ ಧರಿಸಿದ್ದ ಕಾರಣ ಗುರುತು ಪತ್ತೆ ಕಷ್ಟವಾಗಿದೆ. ಹೀಗಾಗಿ ಅಪರಿಚಿತ ವ್ಯಕ್ತಿಗಳಲ್ಲಿ ವ್ಯವಹರಿಸುವಾಗ ಅಂಗಡಿ ಮಾಲೀಕರು ಜಾಗರೂಕರಾಗಿದ್ದರೆ ಒಳ್ಳೆಯದು ಎನ್ನುವ ಸಂದೇಶ ಇದರಿಂದ ಸಿಕ್ಕಿದೆ.
Ullal Bakery owner cheated by Man posing as rich man with iphone and gold of 1400 Rs in Mangalore.
24-09-25 03:55 pm
Bangalore Correspondent
ಕರ್ನಾಟಕ ಜನಸಂದಣಿ ನಿಯಂತ್ರಣ ಕಾಯ್ದೆ ರೆಡಿ ; ಏಳು ವರ...
23-09-25 07:26 pm
Karnataka High court, Caste census: ಜಾತಿ ಗಣತಿ...
22-09-25 07:07 pm
ಚಾಮುಂಡೇಶ್ವರಿ ಹೆಣ್ಣಿನ ಶಕ್ತಿಯ ಪ್ರತೀಕ, ದಸರಾ ನ್ಯಾ...
22-09-25 03:31 pm
ಬಿಜೆಪಿ ವಿರೋಧ ನಡುವೆಯೇ ಚಾಮುಂಡಿ ತಾಯಿಗೆ ಕೈಮುಗಿದು...
22-09-25 10:54 am
24-09-25 01:07 pm
HK News Desk
ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ ನಿಲ್ಲಿಸಿದರೆ ಟ್ರಂ...
24-09-25 12:20 pm
Narendra Modi, Xi Jinping: ಭಾರತದಲ್ಲಿ ಸರ್ಕಾರ ಬ...
23-09-25 08:29 pm
ಕೋಲ್ಕತ್ತಾದಲ್ಲಿ ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ಐವ...
23-09-25 11:05 am
Pakistans Khyber Pakhtunkhwa: ಪಾಕಿಸ್ತಾನದ ಖೈಬರ...
22-09-25 06:58 pm
24-09-25 10:48 pm
Mangalore Correspondent
ಖಾಸಗಿ ಜಮೀನಲ್ಲಿ ಅಕ್ರಮ ಹೆದ್ದಾರಿ ನಿರ್ಮಿಸಿದ್ದ ಪಿಡ...
24-09-25 08:46 pm
Priyank Kharge, Dharmasthala SIT: ಅಕ್ರಮ ಎಷ್ಟೇ...
24-09-25 07:38 pm
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಪೀಕರ್ ಧ್ವನಿಯಡಗಿಸಿದ್...
24-09-25 06:55 pm
ಚಿನ್ನಯ್ಯ ಮತ್ತೆ ಬೆಳ್ತಂಗಡಿ ಕೋರ್ಟಿಗೆ ಹಾಜರು, ದೂರು...
23-09-25 11:01 pm
23-09-25 11:01 am
HK News Desk
ಮುಂಬೈನಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ; ಎ...
22-09-25 08:16 pm
IAS Officer Manivannan, Cyber Fraud: ಹಿರಿಯ ಐಎ...
21-09-25 02:30 pm
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am