ಬ್ರೇಕಿಂಗ್ ನ್ಯೂಸ್
15-05-24 02:56 pm Bangalore Correspondent ಕ್ರೈಂ
ಬೆಂಗಳೂರು, ಮೇ.15: ರಾಜಧಾನಿ ಬೆಂಗಳೂರಿನ ಕೆಂಗೇರಿ ಠಾಣಾ ವ್ಯಾಪ್ತಿಯ ಒಂಟಿ ಮಹಿಳೆ ಕೊಲೆ ಪ್ರಕರಣವನ್ನ ಕೊನೆಗೂ ಪೊಲೀಸರು ಭೇದಿಸಿದ್ದಾರೆ.
24 ವರ್ಷದ ಮೋನಿಕಾ ಬಂಧಿತ ಆರೋಪಿಯಾಗಿದ್ದು, ಮೇ10 ರಂದು ಕೆಂಗೇರಿಯ ಕೋನಸಂದ್ರದಲ್ಲಿ ಬರ್ಬರ ಕೊಲೆ ನಡೆದಿತ್ತು. ಮೃತ ಮಹಿಳೆಯನ್ನು ದಿವ್ಯಾ ಎಂದು ಗುರುತಿಸಲಾಗಿದೆ.
ಸಲೂನ್ ಶಾಪ್ ಹೊಂದಿರುವ ಗುರುರಾಜ್, ಪತ್ನಿ ದಿವ್ಯಾ ಜತೆ ಕೋನಸಂದ್ರದಲ್ಲಿ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರು. ಮೇ10 ಮಧ್ಯಾಹ್ನ 1.30ರ ಸುಮಾರಿಗೆ ದಿವ್ಯಾ ಕತ್ತುಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದರು. ವಿವಿಧ ಆಯಾಮದಲ್ಲಿ ತನಿಖೆ ನಡೆಸಿದ ಪೊಲೀಸರು ದಿವ್ಯಾ ಅವರ ಮನೆಯ ಮೇಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ಮೋನಿಕಾ ಎಂಬ ಕಳ್ಳಿಯನ್ನ ಬಂಧಿಸಿದ್ದಾರೆ.
ಕೋಲಾರ ಮೂಲದ ಮೋನಿಕಾ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದು, ಕಳೆದ ಮೂರು ತಿಂಗಳಿಂದ ಮೃತೆ ದಿವ್ಯಾ ಮನೆಯಲ್ಲಿ ಬಾಡಿಗೆಯಿದ್ದಳು. ಕಂಪನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದು ಇತ್ತೀಚೆಗೆ ಕೆಲಸ ತೊರೆದಿದ್ದಳು. ಬಳಿಕ ಸಾಲ ತೀರಿಸಲು ಹಾಗೂ ಶೋಕಿ ಜೀವನ ನಡೆಸಲು ಈ ಕೃತ್ಯ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಮೋನಿಕಾ ಲವರ್ ಟಾಟಾ ಎಸಿ ವಾಹನ ಖರೀದಿಗೆ ಹಣದ ಮುಗ್ಗಟ್ಟು ಎದುರಿಸಿದ್ದ. ಜೊತೆ ಈಕೆಯ ಮೇಲಿನ ಸಾಲ ಒತ್ತಡ ಸೃಷ್ಟಿಸಿತ್ತು. ಮನೆ ಮಾಲಕಿ ದಿವ್ಯಾ ಮೈ ಮೇಲಿದ್ದ ಒಡವೆ ಮೇಲೆ ಮೋನಿಕಾಳ ಕಣ್ಣು ಕುಕ್ಕಿಸಿತ್ತು. ಸಲುಗೆ ಬೆಳೆಸಿಕೊಂಡು ಮನೆ ಮಾಲೀಕರ ಚಲನಾವಲನಾಗಳ ಗಮನಿಸಿ ಯುವತಿ ಹತ್ಯೆಗೆ ಸಂಚು ರೂಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿವ್ಯಾ ಗಂಡ ಗುರುಮೂರ್ತಿ ಎಂದಿನಂತೆ ಕೆಲಸಕ್ಕಾಗಿ ಹೋಗಿದ್ದ ವೇಳೆ ದಿವ್ಯಾ ಒಬ್ಬಂಟಿಯಾಗಿರುವುದನ್ನ ಅರಿತಿದ್ದ ಮೋನಿಕಾ, ಮನೆಗೆ ಹೋಗಿ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾಳೆ. ಬಳಿಕ ಆಕೆ ಮೈಮೇಲಿದ್ದ 36 ಗ್ರಾಂ ಚಿನ್ನದ ಸರ ಕಸಿದು ಎಸ್ಕೇಪ್ ಆಗಿದ್ಲು. ಕದ್ದ ಚಿನ್ನದ ಸರವನ್ನ ಗಿರವಿ ಇಟ್ಟು ಬಂದ ದುಡ್ಡಿನಲ್ಲಿ ಮೋಜು ಮಸ್ತಿ ಮಾಡಿದ್ದಾಳೆ . ಇನ್ನು ಅದೇ ಮನೆಯಲ್ಲೇ ಉಳಿದುಕೊಂಡು ಏನು ಮಾಡಿಲ್ಲವೆಂಬಂತೆ ನಾಟಕವಾಡುತ್ತಿದ್ದಳು. ತನಿಖೆ ಕೈಗೊಂಡ ಇನ್ ಸ್ಪೆಕ್ಟರ್ ಕೊಟ್ರೇಶಿ ನೇತೃತ್ವದ ತಂಡವು ಅನುಮಾನದ ಮೇರೆಗೆ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಸಂಗತಿ ಬಾಯ್ಬಿಟ್ಟಿದ್ದಾಳೆ. ಸದ್ಯ ಆಕೆಯನ್ನ ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
24 year old girl arrested for killing house owner over gold chain in Bangalore. The arrested has been identified as Monica. The deceased has been identified as Divya. The murder took place on May 10.
17-10-24 05:29 pm
HK News Desk
ಮುಸ್ಲಿಂ ವಿವಾಹ ನೋಂದಣಿ ಅಧಿಕಾರ ವಕ್ಪ್ ಇಲಾಖೆಗೆ ; ಹ...
17-10-24 03:36 pm
2026 ರಲ್ಲಿ ಕೆಎಫ್ಡಿ ಲಸಿಕೆ ಲಭ್ಯ ; ಐಸಿಎಂಆರ್ ನಿರ...
17-10-24 12:37 pm
Eshwarappa, Mallikarjun Kharge: ಹಿಂದುಳಿದ, ದಲಿ...
16-10-24 10:19 pm
ಜೈಶ್ರೀರಾಮ್ ಘೋಷಣೆ ಕೂಗಿದ ಮಾತ್ರಕ್ಕೆ ಧಾರ್ಮಿಕ ಭಾವನ...
16-10-24 05:08 pm
17-10-24 11:16 am
HK News Desk
Mumbai Road Rage Video; ಮುಂಬೈ ; ಕಾರಿಗೆ ಆಟೋ ರಿ...
15-10-24 03:51 pm
ಡಿ ಕಂಪನಿ ಹಾದಿಯಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್...
14-10-24 10:12 pm
Actor Sanjay Dutt Mangalore,Baba Siddique; ಬಾ...
13-10-24 06:13 pm
ಮೈಸೂರು ದರ್ಭಾಂಗ್ ಬಾಗಮತಿ ಎಕ್ಸ್ ಪ್ರೆಸ್ ರೈಲು ಅಪಘಾ...
13-10-24 03:48 pm
17-10-24 10:29 pm
Mangalore Correspondent
Ullal News, Mangalore, Satish Kumpala: ಪೊಲೀಸ್...
17-10-24 07:56 pm
CM Siddaramaiah, Valmiki, Nagendra, Brijesh...
17-10-24 04:34 pm
Hadrian Vegas, Swimming, Mangalore: ಈಜುಕೊಳದಲ್...
17-10-24 12:34 pm
Mangalore crime, Ullal, Fight: ಉಳ್ಳಾಲ ಠಾಣೆ ಇನ...
17-10-24 10:57 am
17-10-24 11:03 pm
Mangalore Correspondent
Bangalore crime, Double Murder, Illecit affai...
17-10-24 08:02 pm
Fake Aadhar, Mangalore Fraud, Crime: ಹತ್ತು ಸಾ...
16-10-24 02:44 pm
Chikkamagaluru, Online Fraud: ಹಣ ಡಬಲ್ ಆಸೆಗೆ...
15-10-24 09:56 pm
Mangalore, Murder, crime: ಬಸ್ ನಿಲ್ದಾಣದಲ್ಲಿ ಕಂ...
15-10-24 09:49 pm