ಬ್ರೇಕಿಂಗ್ ನ್ಯೂಸ್
04-08-22 07:00 pm Source: one india ಉದ್ಯೋಗ
ನವದೆಹಲಿ,ಆಗಸ್ಟ್ 4: ಅಗ್ನಿಪಥ್ ಯೋಜನೆಯಡಿ ಭಾರತೀಯ ನೌಕಾಪಡೆಯು ಮಹಿಳಾ ಅಭ್ಯರ್ಥಿಗಳಿಂದ 80,000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಿರಿಯ ಮಾಧ್ಯಮಿಕ ನೇಮಕಾತಿ (ಎಸ್ಎಸ್ಆರ್) ಮತ್ತು ಮೆಟ್ರಿಕ್ ನೇಮಕಾತಿ (ಎಂಆರ್) ನೋಂದಣಿ ಬುಧವಾರ ಮುಕ್ತಾಯಗೊಂಡಿದ್ದು, ಮಹಿಳಾ ಅಭ್ಯರ್ಥಿಗಳನ್ನು ನೇಮಕಾತಿಯನ್ನು ಅಗ್ನಿಪಥ್ ಯೋಜನೆಯಡಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ನೌಕಾಪಡೆಯ ಎಸ್ಎಸ್ಆರ್ (ಸೀನಿಯರ್ ಸೆಕೆಂಡರಿ ನೇಮಕಾತಿ) ಮತ್ತು ಎಂಆರ್ (ಮೆಟ್ರಿಕ್ ನೇಮಕಾತಿ) ನೋಂದಣಿ ಪ್ರಕ್ರಿಯೆಯು ಅಗ್ನಿಪತ್ ನೇಮಕಾತಿ ಯೋಜನೆಗೆ ಪೂರ್ಣಗೊಂಡಿದೆ. 82,000 ಮಹಿಳಾ ಆಕಾಂಕ್ಷಿಗಳು ಸೇರಿದಂತೆ 9.55 ಲಕ್ಷ ಅಗ್ನಿವೀರ್ ಅರ್ಜಿದಾರರು ಈಗ ನೋಂದಾಯಿಸಿಕೊಂಡಿದ್ದಾರೆ ಎಂದು ಭಾರತೀಯ ನೌಕಾಪಡೆಯು ಟ್ವೀಟ್ ಮಾಡಿದೆ.
ತನ್ನ ಎಲ್ಲಾ ವಿಭಾಗಗಳಲ್ಲಿ ಲಿಂಗ-ತಟಸ್ಥತೆಯ ಮೇಲೆ ಕೇಂದ್ರೀಕರಿಸಿದ ಭಾರತೀಯ ನೌಕಾಪಡೆಯು ಜೂನ್ 20 ರಂದು ಹೊಸದಾಗಿ ಜಾರಿಯಾದ ಅಗ್ನಿಪಥ್ ನೇಮಕಾತಿ ಯೋಜನೆಯ ಮೂಲಕ ಮಹಿಳಾ ನಾವಿಕರನ್ನು ನೇಮಿಸಿಕೊಳ್ಳುವ ನಿರ್ಧಾರವನ್ನು ಪ್ರಕಟಿಸಿತು. ಎಲ್ಲಾ ಮೂರು ಸೇವೆಗಳು - ಭೂಸೇನೆ, ವಾಯುಪಡೆ ಮತ್ತು ನೌಕಾಪಡೆ - ಮಹಿಳಾ ಅಧಿಕಾರಿಗಳನ್ನು ಹೊಂದಿದ್ದು, ಅಧಿಕಾರಿಗಳ ಶ್ರೇಣಿಯ ನಂತರದ ಸಿಬ್ಬಂದಿ ಹುದ್ದೆಗಳು ಮಹಿಳೆಯರಿಗೆ ಮುಕ್ತವಾಗಿರುವುದು ಇದೇ ಮೊದಲು.
ಅಗ್ನಿಪಥ್ ಯೋಜನೆಯ ಮೂಲಕ ನೇಮಕಗೊಳ್ಳುವ ಮಹಿಳಾ ಅಭ್ಯರ್ಥಿಗಳ ನಿಖರ ಸಂಖ್ಯೆಯನ್ನು ನಾವು ಇನ್ನೂ ಲೆಕ್ಕಹಾಕುತ್ತಿದ್ದೇವೆ ಎಂದು ಸಿಬ್ಬಂದಿ ಮುಖ್ಯಸ್ಥ ವೈಸ್ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ರಕ್ಷಣಾ ಸಚಿವಾಲಯದಲ್ಲಿ ತ್ರಿಸೇನಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ವರ್ಷದ ನವೆಂಬರ್ನಲ್ಲಿ ಅಗ್ನಿವೀರ್ಗಳ ಮೊದಲ ಬ್ಯಾಚ್ ಪ್ರಾರಂಭವಾಗಲಿದೆ.
ಭಾರತೀಯ ನೌಕಾಪಡೆಯು ಪ್ರಸ್ತುತ ವಿವಿಧ ಹಡಗುಗಳಲ್ಲಿ ನೌಕಾಯಾನ ಮಾಡುತ್ತಿದೆ. 30 ಮಹಿಳಾ ಅಧಿಕಾರಿಗಳನ್ನು ಹೊಂದಿದೆ. ನಾವು ಅಗ್ನಿಪಥ್ ಯೋಜನೆಯಡಿಯಲ್ಲಿ ಮಹಿಳೆಯರನ್ನು ಸಹ ನೇಮಕ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಅವರನ್ನು ಯುದ್ಧನೌಕೆಗಳಲ್ಲಿ ನಿಯೋಜಿಸಲಾಗುವುದು. ಒಡಿಶಾದ ಐಎನ್ಎಸ್ ಚಿಲ್ಕಾದಲ್ಲಿ ಭಾರತೀಯ ನೌಕಾಪಡೆಯ ಮೂಲ ತರಬೇತಿ ಸಂಸ್ಥೆಯಾಗಿದ್ದು, ಮಹಿಳಾ ನಾವಿಕರಿಗೆ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ವರ್ಷದ ನವೆಂಬರ್ 21 ರಿಂದ ಮೊದಲ ನೌಕಾಪಡೆ ಅಗ್ನಿವೀರ್ಗಳು ಒಡಿಶಾದ ಐಎನ್ಎಸ್ ಚಿಲ್ಕಾದ ತರಬೇತಿ ಸಂಸ್ಥೆಯನ್ನು ತಲುಪಲು ಪ್ರಾರಂಭಿಸುತ್ತದೆ. ಹೆಣ್ಣು ಮತ್ತು ಪುರುಷ ಅಗ್ನಿವೀರ್ಗಳನ್ನು ಇದಕ್ಕಾಗಿ ನಿಯೀಜಿಸಲಾಗಿದೆ ಎಂದು ತ್ರಿಪಾಠಿ ಹೇಳಿದರು.
Agnipath; More than 80,000 women applied for the Navy.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
14-09-25 10:55 pm
Mangalore Correspondent
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm