ಸಾಗರ ; ಮಂಗಗಳನ್ನು ಕೊಂದು ಕಾಡಿಗೆಸೆಯಲು ಬಂದು ಸಿಕ್ಕಿಬಿದ್ದರು..!

01-10-20 01:44 pm       Headline Karnataka News Network   ಕರ್ನಾಟಕ

33 ಕ್ಕೂ ಹೆಚ್ಚು ಮಂಗಗಳಿಗೆ ವಿಷ ಹಾಕಿ ಕೊಂದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕಾಸ್ಪಡಿ ಬಳಿ ನಡೆದಿದೆ. ಅರಣ್ಯ ಇಲಾಖೆಯವರು 5 ಜನರನ್ನು ಬಂಧಿಸಿದ್ದಾರೆ.

ಸಾಗರ, ಅಕ್ಟೋಬರ್ 1: 33 ಕ್ಕೂ ಹೆಚ್ಚು ಮಂಗಗಳಿಗೆ ವಿಷ ಹಾಕಿ ಕೊಂದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕಾಸ್ಪಡಿ ಬಳಿ ನಡೆದಿದೆ.

ಸಾಗರ ತಾಲೂಕಿನ ತ್ಯಾಗರ್ತಿ ಸಮೀಪದ ಲ್ಯಾವಿಗೆರೆಯಿಂದ 36 ಮಂಗಗಳನ್ನು ಕೊಂದು ಸಾಗರದ ನೇದರವಳ್ಳಿ ಬಳಿಯ ಕಾಡಿನಲ್ಲಿ ಮಂಗಗಳನ್ನು ಬಿಸಾಡಲು ಬಂದಾಗ ಅರಣ್ಯ ಇಲಾಖೆಯವರು 5 ಜನರನ್ನು ಬಂಧಿಸಿದ್ದಾರೆ.

ಲ್ಯಾವಿಗೆರೆಯ ಅಭಿಷೇಕ್, ಲಂಬೂದರ್, ತ್ಯಾಗರ್ತಿಯ ದಸ್ತಗಿರ್, ವಿಶ್ವನಾಥ್ ಹಾಗೂ ದಾವಣಗೆರೆಯ ಸಂಜೀವ್ ಬಂಧಿತ ಆರೋಪಿಗಳು. ಟಾಟಾ ಏಸ್ ವಾಹನದಲ್ಲಿ ಸತ್ತ ಮಂಗಗಳನ್ನು ಎಸೆಯಲು ಬಂದಾಗ ಅರಣ್ಯ ಇಲಾಖೆ ಸಿಬ್ಬಂದಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. 
33 ಮಂಗಗಳು ಸಾವನ್ನಪ್ಪಿದ್ದು, 3 ಮಂಗಗಳು ಅಸ್ವಸ್ಥಗೊಂಡಿದ್ದವು. ತಕ್ಷಣ ಚೋರಡಿ ಅರಣ್ಯ ವಲಯದವರು ಕೇಸು ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ. ವನ್ಯಜೀವಿ ವೈದ್ಯ ಡಾ.ವಿನಯ್ ನೇತೃತ್ವದಲ್ಲಿ ಸತ್ತ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಅಸ್ವಸ್ಥಗೊಂಡ ಮಂಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಒಂದು ಆಡಿ ಕಾರನ್ನು ಹಾಗೂ ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.