ಬ್ರೇಕಿಂಗ್ ನ್ಯೂಸ್
03-10-24 03:36 pm HK News Desk ಕರ್ನಾಟಕ
ಮೈಸೂರು, ಅ.3: ಮೈಸೂರು ದಸರಾ ಉದ್ಘಾಟನೆ ಸಮಾರಂಭದಲ್ಲಿ ಜೆಡಿಎಸ್ ಹಿರಿಯ ಶಾಸಕ ಜಿ.ಟಿ. ದೇವೇಗೌಡ ಅವರು ಸಿಎಂ ಸಿದ್ದರಾಮಯ್ಯ ಪರವಾಗಿ ಬ್ಯಾಟ್ ಬೀಸಿದ್ದು ಆಮೂಲಕ ಸಿದ್ದರಾಮಯ್ಯ ವಿರುದ್ಧ ಬೀದಿಗಿಳಿದಿರುವ ಪಕ್ಷದ ನಾಯಕ, ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧವೇ ಟಾಂಗ್ ನೀಡಿದ್ದಾರೆ. ಎಲ್ಲ ಸಿದ್ದರಾಮಯ್ಯ ಅವ್ರ ರಾಜೀನಾಮೆ ಕೇಳ್ತಿದ್ದಾರೆ. ತಾಕತ್ ಇದ್ರೆ ಎಫ್ಐಆರ್ ಆದವರೆಲ್ಲ ರಾಜೀನಾಮೆ ಕೊಡಿ. ಆಮೇಲೆ ಮಾತಾಡಿ ಎಂದು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಚಾಮುಂಡಿ ದೇವಿಯ ವರಪುತ್ರ. ಚಾಮುಂಡೇಶ್ವರಿ ಕ್ಷೇತ್ರದಿಂದ ರಾಜಕೀಯ ಆರಂಭಿಸಿ ಇಲ್ಲಿಯವರೆಗೆ ಬೆಳೆದಿದ್ದಾರೆ. ಚಾಮುಂಡಿ ದೇವಿಯ ಆಶೀರ್ವಾದ ಮತ್ತು ಜನರ ಆಶೀರ್ವಾದದಿಂದ ಎರಡು ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಇಬ್ಬರು ಸೇರಿ ಅವರನ್ನು ಸೋಲಿಸಲು ಯತ್ನಿಸಿದೆವು. ಆದರೆ, ಚಾಮುಂಡಿ ಆಶೀರ್ವಾದದಿಂದ ಸಿದ್ದರಾಮಯ್ಯ ಅವತ್ತು ಗೆದ್ದರು. ಜೋಡೆತ್ತಿನ ರೀತಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ದುಡಿದು ಸರಕಾರ ತಂದಿದ್ದಾರೆ ಎಂದು ಜಿಟಿ ದೇವೇಗೌಡ ಹೇಳಿದಾಗ, ಸಿಎಂ ಸಿದ್ದರಾಮಯ್ಯ ಫುಲ್ ಖುಷ್ ಆಗಿದ್ದಾರೆ.
ಮುಡಾ ಹಗರಣ ವಿಚಾರದಲ್ಲೂ ಸಿಎಂ ಸಿದ್ದರಾಮಯ್ಯ ಪರವಾಗಿ ಜಿಟಿಡಿ ಬ್ಯಾಟ್ ಬೀಸಿದ್ದಾರೆ. ಸಿಎಂ ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡ್ಬೇಕು. ಎಫ್ಐಆರ್ ಆಗಿದೆ ಅಂತ ಕುಮಾರಸ್ವಾಮಿ ಈಗ ರಾಜೀನಾಮೆ ಕೊಡ್ತಾರಾ ? ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ - ಜೆಡಿಎಸ್ ದೋಸ್ತಿ ನಾಯಕರಿಗೆ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ಯಾವತ್ತೂ ಕುಟುಂಬ ನೋಡಿದವರಲ್ಲ. ಈಗ ಎಲ್ಲಾ ಗಾಜಿನ ಮನೆಯಲ್ಲಿ ಕೂತಿದ್ದಾರೆ. ಎಫ್ ಐ ಆರ್ ಆದವರು ರಾಜೀನಾಮೆ ಕೊಡಬೇಕಾಗಿದ್ದರೆ ಜೆಡಿಎಸ್ ನಲ್ಲಿ ಇರೋರು ಎಲ್ಲ ಮನೆಗೆ ಹೋಗಬೇಕು. ಹಾಗೇನಾದರೂ ರಾಜೀನಾಮೆ ಕೊಡಲು ನ್ಯಾಯಾಲಯ ಹೇಳಿದ್ಯಾ. ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡ್ವಾ? ಕುಮಾರಸ್ವಾಮಿ ಅವರಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ? 136 ಸ್ಥಾನ ಗೆದ್ದು ಸಿಎಂ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಆಗುತ್ತಾ?ರಾಜೀನಾಮೆ ಕೊಡಿ, ರಾಜೀನಾಮೆ ಕೊಡಿ ಅಂದರೆ ಕೊಡುವುದಕ್ಕೆ ಆಗುತ್ತಾ? ಒಂದು ಅತ್ಯಾಚಾರ, ಕೊಲೆಯನ್ನು ಮೂರು ತಿಂಗಳು ಮಾಧ್ಯಮ ತೋರಿಸುತ್ತೆ. ಒಂದು ಎಫ್ ಐ ಆರ್ ಅನ್ನು ಎಷ್ಟು ದಿನ ತೋರಿಸುತ್ತಿರಾ? ಯಾರ ಯಾರ ಮೇಲೆ ಎಫ್ ಐ ಆರ್ ಆಗಿದ್ಯಾ? ಎಲ್ಲರೂ ರಾಜೀನಾಮೆ ಕೊಡಿ. ಎಲ್ಲಾ ವಿಧಾನಸೌಧದ ಮುಂದೆ ನಿಂತುಕೊಳ್ಳಿ. ಬನ್ನಿ ನೋಡೋಣ. ಕೇಂದ್ರದಿಂದ ರಾಜ್ಯಕ್ಕೆ ಏನು ತರಬೇಕೋ ಅದನ್ನು ನೋಡಿ. ಅದನ್ನು ಬಿಟ್ಟು ಬರೀ ರಾಜೀನಾಮೆ ಕೇಳುತ್ತಾ ಕೂತರೆ ಹೇಗೆ? ಎಂದು ತನ್ನದೇ ಪಕ್ಷದ ನಾಯಕನಿಗೆ ಚಾಟಿ ಬೀಸಿದ್ದಾರೆ.
JD(S) MLA G.T. Deve Gowda has challenged the opposition leaders demanding Chief Minister Siddaramaiah's resignation. Speaking at the inauguration of the Mysuru Dasara celebrations at Chamundi Hills, Gowda questioned whether JD(S) leader H.D. Kumaraswamy and others facing cases would also step down.
03-10-24 05:01 pm
Bangalore Correspondent
ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಜೆಡಿಎಸ್ ನಾಯಕ...
03-10-24 03:36 pm
Mysuru Dasara 2024, Prathap simha: ಮೈಸೂರು ದಸರ...
03-10-24 02:52 pm
Mysuru Dasara 2024: ವಿಶ್ವವಿಖ್ಯಾತ ಮೈಸೂರು ದಸರಾಗ...
03-10-24 01:25 pm
ಮುಡಾ ಪ್ರಕರಣ ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ ;...
03-10-24 12:00 pm
02-10-24 02:10 pm
HK News Desk
Israel-Iran war: ಇಸ್ರೇಲ್ ಮೇಲೆ ಮುಗಿಬಿದ್ದ ಇರಾನ್...
02-10-24 11:43 am
Fire in Thailand: ಥಾಯ್ಲೆಂಡ್ ; ಸ್ಕೂಲ್ ಬಸ್ ಟಯರ...
01-10-24 07:36 pm
Sadhguru, Madras High Court: ಹೆಣ್ಣು ಮಕ್ಕಳಿಗೆ...
01-10-24 03:09 pm
500 ರೂ. ನೋಟಿನಲ್ಲಿ ಗಾಂಧೀಜಿ ಬದಲು ನಟ ಅನುಪಮ್ ಖೇರ್...
30-09-24 11:03 pm
03-10-24 05:50 pm
Mangalore Correspondent
Mangalore Kishor kumar Puttur, Raju Poojary:...
03-10-24 05:13 pm
Beltangady Accident, Mangalore: ಬೆಳ್ತಂಗಡಿ ; ತ...
03-10-24 02:20 pm
Mangalore, Brijesh Chowta MP: ವಾಲ್ಮೀಕಿ ಹಗರಣ ರ...
02-10-24 11:04 pm
Raju poojari, vidhana parishad, Mangalore: ದಕ...
02-10-24 10:06 pm
02-10-24 05:44 pm
Bangalore Correspondent
CCB Mangalore Police, Drugs: ತಲಪಾಡಿ ಗಡಿಭಾಗದಲ್...
02-10-24 04:45 pm
Vardhman Group, Digital Arrest, Fraud; ವರ್ಧಮಾ...
02-10-24 04:03 pm
Cyber fraud, Mangalore crime: ಪಾರ್ಸೇಲ್ ನಲ್ಲಿ...
01-10-24 11:18 pm
Muneer Goods Muneer, Fraud, Mangalore: ಶೋಕಿಲಾ...
01-10-24 10:00 pm