ಬ್ರೇಕಿಂಗ್ ನ್ಯೂಸ್
10-10-24 08:19 pm HK News Desk ಕರ್ನಾಟಕ
ಮೈಸೂರು, ಅ.10: ಬೈಕ್ ಗ್ಯಾರೇಜ್ ನಡೆಸುತ್ತಿದ್ದ ಮೆಕ್ಯಾನಿಕ್ ಒಬ್ಬನಿಗೆ ಕೇರಳದ ಲಾಟರಿ ಹೊಡೆದಿದ್ದು ರಾತ್ರೋರಾತ್ರಿ ಸಾಮಾನ್ಯ ಮನುಷ್ಯ ಕೋಟ್ಯಾಧಿಪತಿ ಆಗಿದ್ದಾನೆ. ಕೇರಳ ಲಾಟರಿಯಲ್ಲಿ ಪಾಂಡವಪುರ ಮೂಲದ ಅಲ್ತಾಫ್ ಪಾಷಾ ಎಂಬ ಯುವಕ 25 ಕೋಟಿ ರೂ. ಬಹುಮಾನ ಗೆದ್ದಿದ್ದು ಎಲ್ಲರ ಗಮನಸೆಳೆದಿದೆ.
ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿರುವ ಅಲ್ತಾಫ್, 15 ವರ್ಷಗಳಿಂದ ಲಾಟರಿ ಖರೀದಿಸುವ ಖಯಾಲಿ ಹೊಂದಿದ್ದ. ಇತ್ತೀಚೆಗೆ ಕೇರಳಕ್ಕೆ ಹೋಗಿದ್ದಾಗ ಓಣಂ ಬಂಪರ್ ಲಾಟರಿಯನ್ನು 500 ರೂ. ಕೊಟ್ಟು ಖರೀದಿ ಮಾಡಿದ್ದ. ಬಹುಮಾನ ಬಂದಿರುವ ವಿಚಾರವನ್ನು ಮೊದಲಿಗೆ ನಂಬುವುದಕ್ಕೂ ಅಲ್ತಾಫ್ ಕುಟುಂಬ ತಯಾರಿರಲಿಲ್ಲ. ಮಾಧ್ಯಮದ ಜೊತೆಗೆ ಅಲ್ತಾಫ್ ಪತ್ನಿ ಸೀಮಾ ಬಾನು ಮತ್ತು ಮಗಳು ತನಲ್ ಸಂತಸ ಹಂಚಿಕೊಂಡಿದ್ದಾರೆ.
ಮೊದಲಿಗೆ ನಾವು ಲಾಟರಿಯಲ್ಲಿ ಬಹುಮಾನ ಬಂದಿದೆ ಎಂದು ನಂಬಿರಲಿಲ್ಲ. ಇಂದು ಬೆಳಗ್ಗೆ ಪರಿಶೀಲನೆ ಬಳಿಕ ನಮಗೆ ನಂಬಿಕೆ ಬಂದಿತ್ತು. 15 ವರ್ಷದಿಂದ ಲಾಟರಿ ತೆಗೆದುಕೊಳ್ಳುತ್ತಿದ್ದರು. ಲಾಟರಿ ತೆಗೆದುಕೊಳ್ಳುವುದಕ್ಕೇ ಕೇರಳಕ್ಕೆ ಹೋಗುತ್ತಿದ್ದರು. 15 ವರ್ಷದಿಂದ ಯಾವುದೇ ಲಾಟರಿ ಗೆದ್ದಿರಲಿಲ್ಲ. ಈಗಲು ಅಷ್ಟೇ ನಮಗೆ ಬಂದಿಲ್ಲ ಅಂತನೇ ಅಂದುಕೊಂಡಿದ್ದೆವು. ಈ ಸಲ ಎರಡು ಲಾಟರಿ ಟಿಕೆಟ್ ತಂದಿದ್ದರು. ಒಂದನ್ನು ಯಾರಿಗಾದ್ರು ಕೊಟ್ಟುಬಿಡುತ್ತೇನೆ ಅಂದಿದ್ರು. ಆದ್ರೆ ಅದೇ ಗೆದ್ದುಬಿಟ್ಟರೆ ಅಂತ ಹೇಳಿದ್ದಕ್ಕೆ ಆ ಲಾಟರಿಯನ್ನೂ ಇಟ್ಟುಕೊಂಡಿದ್ದರು. ನೋಡಿದ್ರೆ ಅದೇ ಲಾಟರಿಗೆ 25 ಕೋಟಿ ಬಹುಮಾನ ಬಂದಿದೆ ಎಂದು ಸೀಮಾ ಬಾನು ಹೇಳಿದ್ದಾರೆ.
ಮೊದಲಿಗೆ ನಮಗೆ ನಂಬಿಕೆಯೆ ಇರಲಿಲ್ಲ. ಇಷ್ಟು ವರ್ಷ ಲಾಟರಿ ತೆಗೆದುಕೊಳ್ಳುವ ವಿಚಾರಕ್ಕೆ ಮನೆಯಲ್ಲಿ ಗಲಾಟೆಯೂ ಆಗಿತ್ತು. ಲಾಟರಿ ತೆಗೆದುಕೊಳ್ಳುವುದು ಬೇಡ ಅಂತ ಹೇಳುತ್ತಿದ್ದೆವು. ಇದೀಗ ಲಾಟರಿ ಗೆದ್ದಿರುವುದು ಖುಷಿಯಾಗಿದೆ. ಸ್ವಲ್ಪ ಸಾಲ ಇದೆ, ಅದನ್ನು ತೀರಿಸಿ ಮನೆ ತೆಗೆದುಕೊಳ್ಳಬೇಕೆಂಬ ಆಸೆ ಇದೆ ಎಂದು ಸೀಮಾ ಹೇಳಿದ್ದಾರೆ. ಅಲ್ತಾಫ್ ಲಾಟರಿ ಬಹುಮಾನ ಪಡೆಯುವುದಕ್ಕಾಗಿ ಕೇರಳಕ್ಕೆ ತೆರಳಿದ್ದಾರೆ. 25 ಕೋಟಿ ಮೊತ್ತದಲ್ಲಿ ತೆರಿಗೆ ಕಳೆದು 17.5 ಕೋಟಿ ಮೊತ್ತ ಅಲ್ತಾಫ್ ಕೈಸೇರಲಿದೆ.
Mandya youth gets bumper lottery of 25 crores, gets 12 crore after tax deduction. Altaf who had been to kerala had purchased two lotteries out of which he has been found the winner of 25 crores.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
20-09-26 02:16 pm
HK News Staffer
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm