ಬ್ರೇಕಿಂಗ್ ನ್ಯೂಸ್
12-11-24 10:31 pm HK News Desk ಕರ್ನಾಟಕ
ಕಾರವಾರ, ನ.12: ಕಾರವಾರ ನಗರದಲ್ಲಿ ಪತ್ತೆಯಾದ ದೊಡ್ಡ ಜಾತಿಯ ರಣಹದ್ದು ಜನಸಾಮಾನ್ಯರನ್ನು ಬೆಚ್ಚಿಬೀಳಿಸಿತ್ತು. ಹದ್ದಿನ ಕಾಲಿನಲ್ಲಿ ಜಿಪಿಎಸ್ ಹಾಗೂ ಕ್ಯಾಮೆರಾ ಹೊಂದಿದ್ದನ್ನು ನೋಡಿದ ಸ್ಥಳೀಯರು ಗಾಬರಿಗೀಡಾಗಿದ್ದರು. ಭದ್ರತಾ ಸಿಬಂದಿಗೂ ಆತಂಕ ಎದುರಾಗಿತ್ತು.
ಕಳೆದ ಮೂರು ದಿನಗಳಿಂದ ಕಾರವಾರದ ಕೋಡಿಭಾಗ ಬಳಿಯ ನದಿ ಆಸುಪಾಸಿನಲ್ಲಿ ಹದ್ದಿನ ಹಾರಾಟ ಗಮನಿಸಿದ ಜನ, ಗೂಢಚಾರಿಕೆ ನಡೆಸಲು ಶತ್ರುಗಳು ಹದ್ದಿನಲ್ಲಿ ಕ್ಯಾಮರಾ ಅಳವಡಿಸಿ ಹಾರಲು ಬಿಟ್ಟಿದ್ದಾರೆ ಎಂಬ ಅನುಮಾನ ಪಟ್ಟಿದ್ದರು. ಹದ್ದಿನ ಕಾಲಿಗೆ ಇಲೆಕ್ಟ್ರಾನಿಕ್ ಚಿಪ್ ಅಳವಡಿಸಲಾಗಿತ್ತು. ಎರಡೂ ಕಾಲುಗಳಿಗೆ ಬಿಳಿ ಬಣ್ಣದ ಸ್ಟಿಕ್ಕರ್ ಹಾಕಲಾಗಿತ್ತು. ಪಕ್ಷಿಯ ಬೆನ್ನಿನಲ್ಲಿ ಸೋಲಾರ್ ಪ್ಲೇಟ್ ರೀತಿ ಕಾಣುವ ಚಿಪ್ ಕಂಡುಬಂದಿತ್ತು. ಇದೆಲ್ಲ ನೋಡಿದ ಜನರಿಗೆ ಅನುಮಾನ ಬಂದಿತ್ತು. ಕೈಗಾ ಅಣು ವಿದ್ಯುತ್ ಸ್ಥಾವರ, ಕದಂಬ ನೌಕಾನೆಲೆ ಇರುವುದರಿಂದ ರಹಸ್ಯ ಕಾರ್ಯಾಚರಣೆ ಬಗ್ಗೆ ಅನುಮಾನ ಮೂಡಿತ್ತು. ವಿಚಾರ ತಿಳಿಯುತ್ತಿದ್ದಂತೆ ಪಕ್ಷಿಯ ಮೇಲೆ ಅಧಿಕಾರಿಗಳು ತನಿಖೆ ನಡೆಸಿ ಅಸಲಿ ಸತ್ಯವನ್ನು ಹೊರ ತೆಗೆದಿದ್ದಾರೆ.
ಅರಣ್ಯ ಇಲಾಖೆಯವರೊಂದಿಗೆ ಸ್ಥಳಕ್ಕೆ ಹೋಗಿ ಬೈನಾಕ್ಯುಲರ್ ಮತ್ತು ಫೋಟೋಗ್ರಫಿ ಮೂಲಕ ಹದ್ದನ್ನು ಪರಿಶೀಲಿಸಲಾಗಿದೆ. ಹದ್ದಿಗೆ ಒಂದು ಲೇಬಲ್ ಅಂಟಿಸಲಾಗಿದ್ದು ಅದರಲ್ಲಿ ಇಂಗ್ಲಿಷನಲ್ಲಿ ‘If Found please contact ccffdtadobaz@mahaforest.gov.in OT10-4G s/n:245671 5033 2 ಎಂದು ಬರೆದಿರುತ್ತದೆ. ಇದು Himalayan Griffon Vulture ಜಾತಿಯ ದೊಡ್ಡ ರಣಹದ್ದಾಗಿದೆ. ಅಳಿವಿನ ಅಂಚಿನಲ್ಲಿರುವ ವಲಸೆ ಹಕ್ಕಿ. ಮಹಾರಾಷ್ಟ್ರ ಅರಣ್ಯ ಇಲಾಖೆಯವರು ರಕ್ಷಿಸಿ ಪೋಷಿಸುತ್ತಿದ್ದು ಹಾಗೂ ಮೇಲ್ವಿಚಾರಣೆ ಮಾಡುತ್ತಿದ್ದು ಪ್ರತಿ ವರ್ಷ ಇದು ಎಲ್ಲೆಲ್ಲಿ ವಲಸೆ ಹೋಗುತ್ತದೆ ಎಂದು ಅಧ್ಯಯನ ಮಾಡಲು ಜಿಪಿಎಸ್ ಅಳವಡಿಸಿರುತ್ತಾರೆ.
ರಣಹದ್ದು ಯಾವುದೇ ರೀತಿಯ ಗೂಢಚರ್ಯಕ್ಕೆ ಅಥವಾ ಇನ್ಯಾವುದೇ ಕುಕೃತ್ಯ ಕೆಲಸಕ್ಕೆ ಬಳಸಿದ್ದು ಅಲ್ಲ. ರಣಹದ್ದಿನ ಮೇಲೆ ಅರಣ್ಯ ಇಲಾಖೆಯವರು ನಿಗಾ ವಹಿಸಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಕಾರವಾರ ಪೊಲೀಸ್ ಇಲಾಖೆ ವಿನಂತಿಸಿದೆ.
Karwar, Uttara Kannada dist: An electronic device, attached to the back of a White-rumped vulture, created curiosity and concerns alike among the people at Nadivada near Kodibagh here.
09-08-25 08:00 pm
HK Staff
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವ...
08-08-25 06:23 pm
09-08-25 07:38 pm
HK Staff
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
09-08-25 08:10 pm
Mangalore Correspondent
Father Muller Medical College, Hospital, Mang...
09-08-25 04:22 pm
Dharmasthala,16th Spot at Bahubali Hill: ಧರ್ಮ...
09-08-25 02:16 pm
Udupi, Talaq; ವರದಕ್ಷಿಣೆ ಕಿರುಕುಳ ; ವಿದೇಶದಿಂದ ಮ...
09-08-25 11:36 am
Roshan Saldanha, ED Raid, Mangalore, Fraud: ರ...
08-08-25 11:10 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm