ಬ್ರೇಕಿಂಗ್ ನ್ಯೂಸ್
14-03-21 08:21 pm Headline Karnataka News Network ಕರ್ನಾಟಕ
ಹೊಸಕೋಟೆ, ಮಾ 14: ಪಟ್ಟಣದ ಎಂ ವಿ ಬಡಾವಣೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ತುಮಕೂರು ಜಿಲ್ಲೆ ಕೊರಟಗೆರೆಯ ಅಶ್ವಿನಿ (23) ಮೃತ ಯುವತಿ. ಮೂರು ದಿನಗಳ ಹಿಂದೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗ್ತಿದೆ. ಎರಡು ವರ್ಷಗಳ ಹಿಂದೆ ಅಶ್ವಿನಿಗೆ ಫೇಸ್ಬುಕ್ನಲ್ಲಿ ಆಟೋ ಚಾಲಕ ಸುರೇಶ್ ಎಂಬಾತನ ಪರಿಚಯವಾಗಿತ್ತು. ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದ ಅಶ್ವಿನಿ ಕೆಲಸಕ್ಕೆ ಹೋಗುವಾಗ ಆಟೋ ಚಾಲಕ ಸುರೇಶ್, ದಿನಾಲು ಆಕೆಯನ್ನು ಡ್ರಾಪ್ ಮಾಡುತ್ತಿದ್ದ.
ಈ ವೇಳೆ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಎರಡು ತಿಂಗಳ ಹಿಂದೆ ಸುರೇಶ್ ಅಶ್ವಿನಿಯನ್ನು ಹೊಸಕೋಟೆಯಲ್ಲಿರುವ ತನ್ನ ಬಾಡಿಗೆ ಮನೆಗೆ ಕರೆತಂದು ಆಕೆಯ ಜೊತೆಗೆ ವಾಸವಿದ್ದ ಎಂದು ತಿಳಿದು ಬಂದಿದೆ.
ಬಾಡಿಗೆ ಮನೆಯಲ್ಲಿ ವಾಸವಿದ್ದ ಅಶ್ವಿನಿ ಮತ್ತು ಸುರೇಶ್ ಇಬ್ಬರೂ ಅನ್ಯೋನ್ಯವಾಗಿದ್ದರು. ಇತ್ತೀಚೆಗೆ ಸುರೇಶ್ ತನಗೆ ವಂಚಿಸಿರುವುದಾಗಿ ಅಶ್ವಿನಿ ಸೂಲಿಬೆಲೆ ಪೊಲೀಸರ ಮೊರೆ ಹೋಗಿದ್ದಳು. ಈ ವೇಳೆ ಅಶ್ವಿನಿ ಮತ್ತು ಸುರೇಶ್ ಅನ್ನು ಕರೆದು ಮಾತನಾಡಿಸಿದ ಪೊಲೀಸರು, ಇಬ್ಬರ ನಡುವೆ ರಾಜಿ ಮಾಡಿ ಕಳಿಸಿದ್ದರು.
ಆದರೆ, ಇದೀಗ ಅಶ್ವಿನಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೀಗಾಗಿ, ಅಶ್ವಿನಿಯನ್ನು ಸುರೇಶ್ ಕೊಲೆ ಮಾಡಿದ್ದಾನೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸುರೇಶ್ಗಾಗಿ ಹುಡುಕಾಡುತ್ತಿದ್ದಾರೆ.
ಮೃತ ಅಶ್ವಿನಿಯ ಚಿಕ್ಕಮ್ಮ ಅಂಬಿಕಾ ಮಾತನಾಡಿ, ಸುರೇಶ್ ದುಡ್ಡಿಗಾಗಿ ಅಶ್ವಿನಿಯನ್ನು ಪೀಡಿಸುತ್ತಿದ್ದ. 35 ಸಾವಿರ ತೆಗೆದುಕೊಂಡು ಬರುವಂತೆ ಒತ್ತಾಯಿಸುತ್ತಿದ್ದ. ಹಣ ತಂದರೆ ಮಾತ್ರ ಮನೆಗೆ ಬಾ, ಇಲ್ಲದಿದ್ದರೆ ಸತ್ತು ಹೋಗು ಎಂದು ಗಲಾಟೆ ಮಾಡಿದ್ದ. ಇದನ್ನು ಸಾಯುವ ಮುನ್ನ ಅಶ್ವಿನಿ ಹೇಳಿಕೊಂಡಿದ್ದಾಳೆ.
ನಮ್ಮ ಮಗುವನ್ನು ಸುರೇಶ್ ಮೋಸ ಮಾಡಿ ಕರೆತಂದು, ಕೊಲೆ ಮಾಡಿದ್ದಾನೆ. ಈ ಮೊದಲು ಅಶ್ವಿನಿಗೆ ಮದುವೆಯಾಗಿದ್ದು, ಗಂಡನಿಂದ ದೂರವಾಗಿದ್ದಳು. ಆಕೆಗೆ ಒಂದು ಮಗು ಕೂಡ ಇದೆ. ಫೇಸ್ಬುಕ್ನಲ್ಲಿ ಪರಿಚಯವಾಗಿ, ಕಳೆದ 2 ತಿಂಗಳ ಹಿಂದೆ ಮದುವೆಯಾಗದೆ ಒಂದೇ ಮನೆಯಲ್ಲಿ ವಾಸವಿದ್ದರು. ದುಡ್ಡಿಗಾಗಿ ಪೀಡಿಸಿ ಕೊಲೆ ಮಾಡಿ ಪರಾರಿ ಆಗಿದ್ದಾನೆ ಎಂದು ಆರೋಪಿಸಿದ್ದಾರೆ.
Boyfriend whose a auto driver by profession is alleged of Killing his girlfriend for the sake of money in Tumkur.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm