ಬ್ರೇಕಿಂಗ್ ನ್ಯೂಸ್
01-06-22 10:26 pm HK News Desk ದೇಶ - ವಿದೇಶ
ಮುಂಬೈ, ಜೂನ್ 1: ತನ್ನ ನಟನೆಯ ಸಾಮ್ರಾಟ್ ಪೃಥ್ವಿರಾಜ್ ಚಿತ್ರ ತೆರೆಗೆ ಬರಲು ಇನ್ನೆರಡು ದಿನ ಇರುವಾಗ ನಟ ಅಕ್ಷಯ್ ಕುಮಾರ್, ಇತಿಹಾಸ ಪುಸ್ತಕಗಳ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ. ಮಕ್ಕಳ ಇತಿಹಾಸ ಪುಸ್ತಕಗಳಲ್ಲಿ ದಾಳಿಕೋರ ಮೊಘಲರ ಬಗ್ಗೆ ಪಠ್ಯ ಹೆಚ್ಚಿದೆಯೇ ವಿನಾ ಪೃಥ್ವಿರಾಜ್ ಚೌಹಾಣ್ ಬಗ್ಗೆ ಒಂದೆರಡು ಗೆರೆಗಳಷ್ಟೇ ಇವೆ ಎಂದು ಹೇಳಿದ್ದಾರೆ. ಇತಿಹಾಸ ಪುಸ್ತಕದ ಬಗ್ಗೆ ಅಕ್ಷಯ್ ಕುಮಾರ್ ತೆಗಳಿಕೆ ಟ್ವಿಟರ್ ನಲ್ಲಿ ವೈರಲ್ ಆಗಿದ್ದು, ಕೆಲವರು ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಎಎಎನ್ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದ ಅಕ್ಷಯ್ ಕುಮಾರ್, ದುರಾದೃಷ್ಟ ಅಂದರೆ, ನಮ್ಮ ಇತಿಹಾಸ ಪುಸ್ತಕಗಳಲ್ಲಿ ಕೆಲವು ಸಾಲುಗಳನ್ನಷ್ಟೇ ಪೃಥ್ವಿರಾಜ್ ಬಗ್ಗೆ ಕೊಡಲಾಗಿದೆ. ನಮ್ಮ ರಾಜರ ಬದಲಿಗೆ ದಾಳಿಕೋರರ ಬಗ್ಗೆಯೇ ಹೆಚ್ಚಿನದನ್ನು ಕೊಡಲಾಗಿದೆ. ನಮ್ಮ ರಾಜರು, ನಮ್ಮ ಸಂಸ್ಕೃತಿ ಬಗ್ಗೆ ಪುಸ್ತಕಗಳಲ್ಲಿ ಕೊಟ್ಟಿಲ್ಲ. ನಮ್ಮ ನೈಜ ಇತಿಹಾಸವನ್ನು ಪುಸ್ತಕದಲ್ಲಿ ಬರೆದಿಲ್ಲ. ಈ ಬಗ್ಗೆ ಶಿಕ್ಷಣ ಸಚಿವರಿಗೆ ಮನವಿ ಮಾಡುತ್ತೇನೆ. ಸಾಧ್ಯವಾದರೆ, ಎರಡೂ ಕಡೆಯ ಇತಿಹಾಸವನ್ನು ಬ್ಯಾಲೆನ್ಸ್ ಆಗಿ ಪುಸ್ತಕದಲ್ಲಿ ಕೊಡಿ. ಮೊಘಲರಷ್ಟೇ ನಮ್ಮ ರಾಜರ ಬಗ್ಗೆಯೂ ಮಕ್ಕಳು ತಿಳಿದುಕೊಳ್ಳಬೇಕು. ನಮ್ಮಲ್ಲೂ ಬಹಳ ದೊಡ್ಡ ರಾಜರುಗಳು ಇದ್ದರು ಎಂದು ಹೇಳಿದ್ದಾರೆ.
ಅಕ್ಷಯ್ ಕುಮಾರ್ ಮಾತುಗಳು ಟ್ವಿಟರ್ ನಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ಖಾರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಒಬ್ಬರಂತೂ ಸಿಬಿಎಸ್ಇ ಏಳನೇ ತರಗತಿಯ ಪುಸ್ತಕದಲ್ಲಿ ಪೃಥ್ವಿರಾಜ್ ಬಗ್ಗೆ ಎರಡು ಪುಟಗಳಿವೆ ಎಂದು ಅದರ ಫೋಟೋ ಹಾಕಿದ್ದಾರೆ. ಕೆಲವರು ಮೊಘಲರು ಯಾವಾಗ ಬಂದಿದ್ದು, ಪೃಥ್ವಿರಾಜ್ ಆಡಳಿತ ಯಾವಾಗ ಇದ್ದಿದ್ದು ಅಂತ ಇವರಿಗೆ ಗೊತ್ತಾ ಎಂದು ಕಾಲೆಳೆದಿದ್ದಾರೆ. ಇನ್ನು ಕೆಲವರು ಸಾಮ್ರಾಟ್ ಪೃಥ್ವಿರಾಜ್ ಚಿತ್ರವನ್ನು ನೋಡಿ. ಇತಿಹಾಸ ತಿಳಿದುಕೊಳ್ಳಿ ಎಂದು ಸಲಹೆ ಮಾಡಿದ್ದಾರೆ.
Just two more days and Akshay Kumar’s Samrat Prithviraj will finally hit the theatres. The actor, who has been all up and about promoting his upcoming film, received flak for his recent statement on history books. Akshay said that children’s history textbooks are filled with information on invaders but hardly have any lines on Samrat Prithviraj Chauhan.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm