ಬಿಜೆಪಿ ನಾಯಕಿ ನೂಪುರ್ ಶರ್ಮಾ ಹೇಳಿಕೆ ಸಂಚಲನ ; ಜಗತ್ತಿನೆಲ್ಲೆಡೆ ಮುಸ್ಲಿಂ ರಾಷ್ಟ್ರಗಳ ಆಕ್ರೋಶ, ಕ್ರಮಕ್ಕೆ ಒತ್ತಾಯ

06-06-22 03:15 pm       HK News Desk   ದೇಶ - ವಿದೇಶ

ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವಹೇಳನಕಾರಿ ಹೇಳಿಕೆ ನೀಡಿದ್ದ ವಿಚಾರ ಜಗತ್ತಿನ ಮುಸ್ಲಿಂ ರಾಷ್ಟ್ರಗಳ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ನವದೆಹಲಿ, ಜೂನ್ 6 : ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವಹೇಳನಕಾರಿ ಹೇಳಿಕೆ ನೀಡಿದ್ದ ವಿಚಾರ ಜಗತ್ತಿನ ಮುಸ್ಲಿಂ ರಾಷ್ಟ್ರಗಳ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸೌದಿ ಅರೇಬಿಯಾ, ಪಾಕಿಸ್ತಾನ, ಕತಾರ್, ಕುವೈಟ್, ಇರಾನ್ ಸೇರಿದಂತೆ ಹಲವು ರಾಷ್ಟ್ರಗಳು ಭಾರತೀಯ ರಾಯಭಾರ ಕಚೇರಿಗೆ ನೋಟೀಸ್ ರವಾನಿಸಿದ್ದು, ಈ ಬಗ್ಗೆ ಭಾರತ ಸರಕಾರ ಸ್ಪಷ್ಟನೆ ನೀಡುವಂತೆ ಕೇಳಿಕೊಂಡಿದ್ದವು. ಇದರ ಬೆನ್ನಲ್ಲೇ ಬಿಜೆಪಿಯಿಂದ ನೂಪುರ್ ಶರ್ಮಾ ಅವರನ್ನು ಅಮಾನತು ಮಾಡಿದ್ದಲ್ಲದೆ, ಇದು ಆಕೆಯ ವೈಯಕ್ತಿಕ ಹೇಳಿಕೆ. ಪಕ್ಷದ ಅಥವಾ ಸರಕಾರದ ನಿಲುವಲ್ಲ. ನಾವು ಎಲ್ಲ ಧರ್ಮಗಳನ್ನು ಸಮಾನವಾಗಿ ನೋಡುತ್ತೇವೆ, ಗೌರವಿಸುತ್ತೇವೆ ಎಂದು ಸ್ಪಷ್ಟನೆ ನೀಡಿದೆ.

ತೈಲ ಸಮೃದ್ಧ ಮತ್ತು ಭಾರತದ ಜೊತೆಗೆ ಸುದೀರ್ಘ ವ್ಯಾಪಾರ ಸಂಬಂಧ ಹೊಂದಿರುವ ಸೌದಿ ಅರೇಬಿಯಾ, ಭಾರತ ಸರಕಾರದ ಸ್ಪಷ್ಟನೆಯನ್ನು ಸ್ವಾಗತಿಸಿದೆ.  ಅದರ ಜೊತೆಗೆ, ಭಾರತದಲ್ಲಿ ಆಡಳಿತ ಪಕ್ಷದ ವಕ್ತಾರರೊಬ್ಬರು ಒಂದು ಧರ್ಮವನ್ನು ಕೀಳಾಗಿ ಕಂಡಿದ್ದಲ್ಲದೆ, ಅವಹೇಳನ ಮಾಡುವುದನ್ನು ನಾವು ಸಹಿಸಲ್ಲ. ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಆ ರೀತಿಯ ಹೇಳಿಕೆ ಕೊಡುವುದನ್ನು ಖಂಡಿಸುತ್ತೇವೆ. ತೀವ್ರ ಆಕ್ಷೇಪವನ್ನು ಸಲ್ಲಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ಪುನರುಚ್ಚರಿಸಿದೆ.

Outrage in Gulf over BJP leaders' hate remarks, party acts against them |  India News,The Indian Express

ಕತಾರ್ ದೇಶದ ವಿದೇಶಾಂಗ ಸಚಿವ ಹೇಳಿಕೆ ನೀಡಿ, ಭಾರತದ ಆಡಳಿತ ಪಕ್ಷದ ನಾಯಕರ ಈ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಈ ರೀತಿಯ ಹೇಳಿಕೆ ನೀಡಿದ್ದಕ್ಕಾಗಿ ಭಾರತವು ಜಗತ್ತಿನ ಮುಸ್ಲಿಮರ ಎದುರು ಬಹಿರಂಗ ಕ್ಷಮೆ ಯಾಚಿಸಬೇಕು ಎಂದಿದ್ದಾರೆ. ಈ ರೀತಿ ಹೇಳಿಕೆ ಕೊಟ್ಟವರ ಬಗ್ಗೆ ಶಿಕ್ಷೆ ನೀಡದೇ ಇರುವುದು ಗಂಭೀರ ಪ್ರಮಾದಕ್ಕೆ ಕಾರಣವಾಗುತ್ತದೆ. ಈ ರೀತಿ ಮುಂದುವರಿದರೆ ಮಾನವ ಹಕ್ಕುಗಳ ರಕ್ಷಣೆ ಕಷ್ಟ ಆಗಬಹುದು. ಇಂತಹ ಪೂರ್ವಾಗ್ರಹ ಪೀಡಿತ ಮನಸ್ಸುಗಳಿಂದ ಭವಿಷ್ಯದಲ್ಲಿ ಹಿಂಸೆಗೆ ದಾರಿಯಾಗುತ್ತದೆ ಎಂದು ಹೇಳಿದ್ದಾರೆ.

Shehbaz Sharif, former Leader of Opposition, sworn in as Pakistan's 23rd prime  minister - World News

ಕುವೈತ್ ವಿದೇಶಾಂಗ ಇಲಾಖೆಯ ಹೇಳಿಕೆಯಲ್ಲಿ ಆಡಳಿತ ಪಕ್ಷದ ನಾಯಕರು ಈ ರೀತಿ ಹೇಳಿಕೆ ಕೊಡುವುದರಿಂದ ಪ್ರತ್ಯೇಕತಾವಾದ, ದ್ವೇಷ ಹರಡಲು ಕಾರಣವಾಗುತ್ತದೆ. ಕೂಡಲೇ ಇಂಥವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪಾಕಿಸ್ಥಾನದ ಪ್ರಧಾನಿ ಶೆಹಬಾದ್ ಶರೀಫ್ ಬಿಜೆಪಿ ನಾಯಕಿಯ ಹೇಳಿಕೆಯನ್ನು ಖಂಡಿಸಿದ್ದು, ಟ್ವಿಟರ್ ನಲ್ಲಿ ಕಠಿಣ ಪದಗಳಲ್ಲಿ ಟೀಕಿಸಿದ್ದಾರೆ. ಮೋದಿ ನೇತೃತ್ವದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹತ್ತಿಕ್ಕುವುದು, ಮುಸ್ಲಿಮರನ್ನು ತುಚ್ಛವಾಗಿ ಕಾಣುತ್ತಿರುವುದಕ್ಕೆ ಇದು ಸಾಕ್ಷಿ. ಜಗತ್ತು ಈ ರೀತಿಯ ನಡೆಯನ್ನು ಗಂಭೀರವಾಗಿ ತೆಗೆದುಕೊಂಡು ಭಾರತಕ್ಕೆ ಎಚ್ಚರಿಕೆ ಕೊಡಬೇಕು. ಎಲ್ಲ ಮುಸ್ಲಿಮರು ಪವಿತ್ರ ಪ್ರವಾದಿಗಾಗಿ ತ್ಯಾಗ ಮಾಡುತ್ತಾರೆ. ನಮಗೆ ಪ್ರವಾದಿಯೇ ಪರಮೋಚ್ಛರು ಎಂದು ಹೇಳಿದ್ದಾರೆ.

ಇರಾನ್, ಟೆಹ್ರಾನ್ ದೇಶಗಳು ಕೂಡ ಭಾರತದ ಆಡಳಿತ ಪಕ್ಷದ ನಾಯಕಿಯ ಹೇಳಿಕೆಯನ್ನು ಖಂಡಿಸಿದ್ದು, ರಾಯಭಾರ ಕಚೇರಿಗೆ ನೋಟೀಸ್ ರವಾನಿಸಿದೆ. ಅಲ್ಲದೆ, ಹಲವು ರಾಷ್ಟ್ರಗಳಲ್ಲಿ ಭಾರತದ ವಿರುದ್ಧ ಪ್ರತಿಭಟನೆಯನ್ನೂ ಮಾಡಲಾಗಿದೆ.

#Statement | The Ministry of Foreign Affairs expresses its condemnation and denunciation of the statements made by the spokeswoman of the #Indian Bharatiya Janata Party (#BJP), insulting the Prophet Muhammad peace be upon him. pic.twitter.com/VLQwdXuPuq

— Foreign Ministry 🇸🇦 (@KSAmofaEN) June 5, 2022

Even as the BJP suspended its spokesperson Nupur Sharma and expelled another leader Naveen Kumar over their communal comments, the global outrage over the controversy has not died down. After Qatar and Kuwait, Saudi Arabia, Afghanistan, Pakistan, and Bahrain have reacted to the comments by the leaders In a tweet, the Foreign Ministry of Saudi Arabia said, ”The Ministry of Foreign Affairs expresses its condemnation and denunciation of the statements made by the spokeswoman of the #Indian Bharatiya Janata Party [#BJP], insulting the Prophet Muhammad peace be upon him.”