ಬ್ರೇಕಿಂಗ್ ನ್ಯೂಸ್
07-06-22 04:54 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 7: ಪ್ರವಾದಿ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆಯಿಂದಾಗಿ ಮುಸ್ಲಿಂ ರಾಷ್ಟ್ರಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿರುದ್ಧ ಇಸ್ಲಾಂ ಉಗ್ರವಾದಿ ಸಂಘಟನೆಯೊಂದು ಜೀವ ಬೆದರಿಕೆ ಹಾಕಿದ್ದು, ದೆಹಲಿ ಪೊಲೀಸರು ಆಕೆ ಮತ್ತು ಆಕೆಯ ಕುಟುಂಬಕ್ಕೆ ಭದ್ರತೆ ಒದಗಿಸಿದ್ದಾರೆ.
ನೂಪುರ್ ಶರ್ಮಾ ತನ್ನ ಹೇಳಿಕೆಯನ್ನು ಬೇಷರತ್ತಾಗಿ ಹಿಂದೆಗೆದುಕೊಳ್ಳುವುದರ ಜೊತೆಗೆ ಜಗತ್ತಿನ ಮುಸ್ಲಿಮರಲ್ಲಿ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಪ್ರವಾದಿಯನ್ನು ನಿಂದಿಸಿದವರಿಗೆ ಏನು ಶಿಕ್ಷೆ ಕೊಡುತ್ತೇವೋ ಅದನ್ನು ಮಾಡುತ್ತೇವೆ ಎಂದು ಮುಜಾಹಿದೀನ್ ಗಜ್ವಾತುಲ್ ಹಿಂದ್ ಎನ್ನುವ ಉಗ್ರವಾದಿ ಸಂಘಟನೆ ಹೇಳಿಕೆಯಲ್ಲಿ ಬೆದರಿಕೆ ಹಾಕಿದೆ.

ಈ ಉಗ್ರವಾದಿ ಸಂಘಟನೆಯ ಸದಸ್ಯರು ಜಮ್ಮು ಕಾಶ್ಮೀರದಲ್ಲಿ ಸಕ್ರಿಯ ಆಗಿದ್ದಾರೆ ಎನ್ನಲಾಗುತ್ತಿದ್ದು ಕಳೆದ ಜನವರಿಯಲ್ಲಿ ದೆಹಲಿಯ ಗಾಜಿಪುರ್ ಹೂವಿನ ಮಾರ್ಕೆಟ್ ನಲ್ಲಿ ಐಇಡಿ ಸ್ಫೋಟ ಪ್ರಕರಣದಲ್ಲಿ ಈ ಸಂಘಟನೆಯ ಕೈವಾಡ ಕಂಡುಬಂದಿತ್ತು. ಇದೀಗ ನೂಪುರ್ ಶರ್ಮಾ ತನ್ನ ಹೇಳಿಕೆ ಹಿಂಪಡೆದು ಕ್ಷಮೆ ಕೋರಿದ್ದರೂ, ಆಕೆಯ ವಿರುದ್ಧ ಬೆದರಿಕೆ ಹಾಕಿದೆ. ನೂಪುರ್ ಶರ್ಮಾ ಈ ಮೊದಲು ಇನ್ಸಲ್ಟ್ ಮಾಡಿದ್ರು, ಈಗ ಕ್ಷಮೆ ಕೋರಿದ್ರು. ಆದರೆ ಇದು ಬಿಜೆಪಿಯ ಚಾಣಕ್ಯ ನೀತಿಯಾಗಿದ್ದು, ದ್ವಂದ್ವ ನಡೆಯಾಗಿರುತ್ತದೆ. ಬಿಜೆಪಿ ನಾಯಕರು ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಆರೆಸ್ಸೆಸ್, ಬಜರಂಗದಳ, ಶ್ರೀರಾಮ ಸೇನೆ, ಶಿವಸೇನೆ ನಾಯಕರು ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ದ್ವೇಷದ ಭಾಷಣ ಮುಂದುವರಿಸಿದ್ದಾರೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ತನಗೆ ಬರುತ್ತಿರುವ ಕರೆಗಳು, ಜಾಲತಾಣದಲ್ಲಿ ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ನೂಪುರ್ ಶರ್ಮಾ ದೆಹಲಿ ಪೊಲೀಸರಿಗೆ ಪ್ರಾಭ ಭಯ ಇದೆಯೆಂದು ದೂರು ನೀಡಿದ್ದು, ಪೊಲೀಸರು ಕುಟುಂಬಕ್ಕೆ ರಕ್ಷಣೆ ನೀಡಿದ್ದಾರೆ. ಇತ್ತೀಚೆಗೆ ಜ್ಞಾನವಾಪಿ ಮಸೀದಿಯ ಪ್ರಕರಣದಲ್ಲಿ ಟಿವಿ ವಾಹಿನಿಯ ಚರ್ಚೆ ಒಂದರಲ್ಲಿ ಶಿವಲಿಂಗವನ್ನು ನೀವು ಅವಹೇಳನ ಮಾಡುವುದಾದರೆ, ಪೈಗಂಬರ್ ಹಿನ್ನೆಲೆಯ ಬಗ್ಗೆ ಪ್ರಶ್ನೆ ಎತ್ತಬೇಕಾಗುತ್ತದೆ ಎಂದು ಹೇಳಿ ಪುಸ್ತಕದಲ್ಲಿದ್ದ ಕೆಲವು ವಿಚಾರಗಳನ್ನು ಓದಿ ಹೇಳಿದ್ದರು. ಈ ವಿಚಾರ ಮುಸ್ಲಿಮ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು, ಅದೇ ವಿಚಾರ ಮುಂದಿಟ್ಟು ಜಗತ್ತಿನ 14 ಮುಸ್ಲಿಂ ರಾಷ್ಟ್ರಗಳು ಭಾರತದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರದ ಬಗ್ಗೆ ಕಿಡಿಕಾರಿದ್ದವು. ಇದರ ಬೆನ್ನಲ್ಲೇ ಬಿಜೆಪಿ ನೂಪುರ್ ಶರ್ಮಾರನ್ನು ಪಕ್ಷದಿಂದ ಅಮಾನತು ಮಾಡಿತ್ತು.
Terror outfit Mujahideen Ghazwatul Hind has threatened BJP leader Nupur Sharma with dire consequences unless she tenders an unconditional apology for her controversial remarks on Prophet Muhammad.“We instruct Nupur Sharma to take back her statement and apologise to the whole world, otherwise we will do what is done to those who dare to insult the Prophet,” Mujahideen Ghazwatul Hind said in a statement posted on Telegram.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm