ಬ್ರೇಕಿಂಗ್ ನ್ಯೂಸ್
08-06-22 10:58 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 8 : ಮಾರಣಾಂತಿಕ ಎಂದೇ ಪರಿಗಣಿಸಲ್ಪಟ್ಟ ಕ್ಯಾನ್ಸರ್ ಕಾಯಿಲೆಗೆ ಅಮೆರಿಕದಲ್ಲಿ ಹೊಸ ಔಷಧಿ ಕಂಡುಹಿಡಿಯಲಾಗಿದೆ. ಹೊಸ ಔಷಧಿಯನ್ನು ನೀಡುವ ಮೂಲಕ ಕ್ಯಾನ್ಸರ್ ಪೀಡಿತರನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಗುಣಪಡಿಸಲಾಗಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.
ಅಮೆರಿಕದ ವಿಜ್ಞಾನಿಗಳು ಡೋಸ್ಟಾರ್ಲಿಮಾಬ್ ಎನ್ನುವ ಏಂಟಿ ಬಯಾಟಿಕ್ ಔಷಧಿಯನ್ನು ನೀಡುವ ಮೂಲಕ ಕ್ಯಾನ್ಸರ್ ಗಡ್ಡೆಯನ್ನು ನಿವಾರಣೆ ಮಾಡಿದ್ದಾರೆ. ಈ ಹೊಸ ಔಷಧಿಯನ್ನು ನ್ಯೂಯಾರ್ಕ್ನ ಮೆಮೋರಿಯಲ್ ಸ್ಲೋನ್ ಕ್ಯಾಟರಿಂಗ್ ಸೆಂಟರ್ ನಲ್ಲಿ 12 ರೋಗಿಗಳಿಗೆ ಪ್ರಯೋಗ ಮಾಡಲಾಗಿದ್ದು ಯಶಸ್ಸು ಪಡೆದಿದ್ದಾರೆ.
ಒಬ್ಬ ಭಾರತ ಮೂಲದ ವ್ಯಕ್ತಿ ಸೇರಿ 12 ಮಂದಿ ಗುದನಾಳದ ಕ್ಯಾನ್ಸರ್ ಇದ್ದ ರೋಗಿಗಳಿಗೆ ಈ ಹೊಸ ಔಷಧಿಯನ್ನು ನೀಡಲಾಗಿದೆ. ಎರಡು ಮತ್ತು ಮೂರನೇ ಹಂತದಲ್ಲಿದ್ದ ಇವರಿಗೆ ಈ ಔಷಧಿಯನ್ನು ಮೂರು ವಾರಗಳಿಗೊಮ್ಮೆ ಆರು ತಿಂಗಳ ವರೆಗೆ ನೀಡಲಾಗಿತ್ತು. ಆನಂತರ ಗುದನಾಳದಲ್ಲಿದ್ದ ಗಡ್ಡೆ ಪೂರ್ತಿಯಾಗಿ ನಿವಾರಣೆ ಆಗಿದೆ ಎನ್ನುವ ಮಾಹಿತಿಯನ್ನು ವೈದ್ಯರು ಹಂಚಿಕೊಂಡಿದ್ದಾರೆ.
ಚಿಕಿತ್ಸೆ ನಂತರ ಈ ರೋಗಿಗಳನ್ನು ವಿವಿಧ ಪರೀಕ್ಷೆಗೆ ಒಳಪಡಿಸಿದ್ದು ಅವರಲ್ಲಿ ಗಡ್ಡೆಯ ಲಕ್ಷಣಗಳು ಕಾಣಿಸಿಲ್ಲ. ಕ್ಯಾನ್ಸರ್ ಗಡ್ಡೆಗಳಿಗೆ ವಿಕಿರಣ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಕಿಮೋಥೆರಪಿ ಇತ್ಯಾದಿ ಬದಲು ಡೋಸ್ಟಾರ್ಲಿಮಾಬ್ ಔಷಧಿಯನ್ನು ನೀಡಲು ಸಾಧ್ಯವೇ ಅನ್ನುವ ಬಗ್ಗೆ ಹೆಚ್ಚಿನ ಅಧ್ಯಯನವನ್ನು ವೈದ್ಯರು ಕೈಗೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಇಲ್ಲದೆ, ಗಡ್ಡೆಯನ್ನು ನಿವಾರಣೆ ಮಾಡಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಎನ್ನುವ ಮೆಚ್ಚುಗೆ ವ್ಯಕ್ತವಾಗಿದೆ.
In a medical trial that has shown unprecedented results, twelve rectal cancer patients were completely cured of the disease without any surgery or chemotherapy, according to a study published in the New England Journal of Medicine.The study, done by doctors from the Memorial Sloan Kettering Cancer Centre in New York, used a monoclonal antibody called dostarlimab every three weeks for a period of six months for the treatment of a particular kind of stage two or three rectal cancer.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm