ಬ್ರೇಕಿಂಗ್ ನ್ಯೂಸ್
10-06-22 10:15 am HK News Desk ದೇಶ - ವಿದೇಶ
ವಡೋದರಾ, ಜೂ 10: ತನ್ನನ್ನು ತಾನೇ ಮದುವೆಯಾಗುವುದಾಗಿ ಹೇಳಿಕೆ ನೀಡುವ ಮೂಲಕ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಗುಜರಾತ್ನ ವಡೋದರಾದ ಯುವತಿ, ನಿಗದಿಗಿಂತ ಮೂರು ದಿನ ಮುನ್ನವೇ 'ದಾಂಪತ್ಯ' ಜೀವನಕ್ಕೆ ಕಾಲಿರಿಸಿದ್ದಾಳೆ.
ಕೆಂಪು ಬಣ್ಣದ ಉಡುಗೆಯಲ್ಲಿ ವಧುವಿನ ಅಲಂಕಾರದಲ್ಲಿ 24 ವರ್ಷದ ಕ್ಷಮಾ ಬಿಂದು, ಹಣೆಯಲ್ಲಿ ದಪ್ಪನೆಯ ಸಿಂಧೂರ ಮತ್ತು ಕೊರಳಲ್ಲಿ ಮಂಗಳಸೂತ್ರ ಪ್ರದರ್ಶಿಸಿ, ತನ್ನ ಮದುವೆಯಾಯಿತು ಎಂದು ಬುಧವಾರ ಹೇಳಿಕೊಂಡಿದ್ದಾಳೆ. "ನಾನು ಕೊನೆಗೂ ವಿವಾಹಿತ ಮಹಿಳೆ ಎನಿಸಿಕೊಂಡಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ" ಎಂದು ಆಕೆ ತಿಳಿಸಿದ್ದಾಳೆ.

ಮದುವೆಯ ಎಲ್ಲ ಸಂಪ್ರದಾಯ ಹಾಗೂ ವಿಧಾನಗಳನ್ನೂ ಅನುಸರಿಸಬೇಕು. ತಾನು ವಿವಾಹಿತೆ ಆಗಬೇಕು. ಆದರೆ ಅದು ಗಂಡಿನ ಜತೆಗಲ್ಲ. ತನ್ನನ್ನು ತಾನೇ ಮದುವೆಯಾಗುವುದು (ಸೋಲೋಗಮಿ) ಎಂದು ಹೇಳಿಕೊಂಡಿದ್ದಳು. ಅದರಂತೆ ಮಂತ್ರೋಚ್ಛಾರ, ಸಪ್ತಪದಿ ಸಂಪ್ರದಾಯಗಳನ್ನು ಅನುಸರಿಸಿ, ಥೇಟು ಮದುವೆ ಮನೆಯಂತೆಯ ವಾತಾವರಣದಲ್ಲಿ ಕ್ಷಮಾ ಬಿಂದು ತನ್ನ ಮಾತಿನಂತೆ ಸ್ವಯಂ ವಿವಾಹವಾಗಿದ್ದಾಳೆ.
ಜೂನ್ 11ರಂದು ದೇವಸ್ಥಾನದಲ್ಲಿ ಮದುವೆಯಾಗುವುದಾಗಿ ಆಕೆ ಈ ಮೊದಲು ಘೋಷಿಸಿಕೊಂಡಿದ್ದಳು. ಆದರೆ ಇದು ವಿವಾದ ಸೃಷ್ಟಿಸಿತ್ತು. ದೇವಸ್ಥಾನದಲ್ಲಿ ಮದುವೆಯಾಗಲು ಬಿಡುವುದಿಲ್ಲ ಎಂದು ಸ್ಥಳೀಯ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದರು. ಆಕೆಯ 'ಸ್ವಯಂ ವಿವಾಹ'ಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ಕೊನೆಗೆ ಗಲಾಟೆಗಳು ನಡೆಯಬಾರದು ಎಂದು ಮೂರು ದಿನ ಮುನ್ನವೇ ಆಕೆ ಮದುವೆಯಾಗಿದ್ದಾಳೆ.
)
ವಡೋದರಾದ ಗೋತ್ರಿ ಪ್ರದೇಶದಲ್ಲಿನ ಆಕೆಯ ಮನೆಯಲ್ಲಿ 40 ನಿಮಿಷಗಳ ಈ 'ಡಿಜಿಟಲೈಸ್ಡ್' ಮದುವೆ ಆಚರಣೆ ನಡೆದಿದೆ. ಆಕೆಯ ಜೀವನದುದ್ದಕ್ಕೂ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದ್ದ ಕೆಲವು ಗೆಳತಿಯರು ಆಕೆಯ ಮೇಲೆ ಹೂವಿನ ಮಳೆಗರೆದು ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಮದುವೆಯಲ್ಲಿ ಕಾಣಿಸಿಕೊಳ್ಳದ ಎರಡು ಪ್ರಮುಖ ಅಂಶಗಳೆಂದರೆ, ವರ ಮತ್ತು ಪುರೋಹಿತರು! "ಇತರೆ ಹೆಣ್ಣುಮಕ್ಕಳಂತೆ, ಮದುವೆಯಾದ ಬಳಿಕ ನಾನು ನನ್ನ ಮನೆಯನ್ನು ತೊರೆಯುವ ಅಗತ್ಯವಿಲ್ಲ. ಇದು ಈ ಮದುವೆಯ ಮತ್ತೊಂದು ಬಹುದೊಡ್ಡ ಪ್ರಯೋಜನ" ಎಂದು ಆಕೆ ಹೇಳಿಕೊಂಡಿದ್ದಾಳೆ.

ಈ ರೀತಿ ಸ್ವಯಂ ಮದುವೆಯಾಗುತ್ತಿರುವ ಭಾರತದ ಮೊದಲ ಮಹಿಳೆ ಎಂದು ಕ್ಷಮಾ ಬಿಂದು ಹೇಳಿಕೊಂಡಿದ್ದಳು. "ಇದು ಬಹಳ ಗುಟ್ಟು ಗುಟ್ಟಾಗಿ ನಡೆಯಬೇಕಿತ್ತು. ಹೀಗಾಗಿ ನನ್ನ 10 ಗೆಳತಿಯರು ಮತ್ತು ಸಹೋದ್ಯೋಗಿಗಳು ಮಾತ್ರ ಸಮಾರಂಭದಲ್ಲಿ ಭಾಗಿಯಾಗಿದ್ದರು" ಎಂದು ತಿಳಿಸಿದ್ದಾಳೆ

ಮದುವೆಗೂ ಮುನ್ನ ಆಕೆ 'ಮೆಹೆಂದಿ' ಮತ್ತು 'ಅರಿಶಿನ' ಶಾಸ್ತ್ರಗಳನ್ನು ಕೂಡ ಅನುಸರಿಸಿದ್ದಾಳೆ. ಕ್ಷಮಾ ಬಿಂದುವಿನ ಮನೆಗೆ ಅನೇಕರು ನಿರಂತರವಾಗಿ ಭೇಟಿ ನೀಡುತ್ತಿದ್ದರಿಂದ ಅಕ್ಕಪಕ್ಕದ ಮನೆಯವರು ತಕರಾರು ತೆಗೆದಿದ್ದರು. "ನನ್ನ ಮದುವೆ ದಿನ ಯಾರಾದರೂ ಗದ್ದಲ ಸೃಷ್ಟಿಸುವ ಸಾಧ್ಯತೆ ಇದೆ ಎಂದು ನನಗೆ ಅನಿಸಿತ್ತು. ನನ್ನ ವಿಶೇಷ ದಿನವನ್ನು ಹಾಳುಮಾಡಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಹೀಗಾಗಿ ಮೊದಲೇ ಮದುವೆಯಾದೆ" ಎಂದಿದ್ದಾಳೆ.
ನಾನು ದೇವಸ್ಥಾನದಲ್ಲಿ ಮದುವೆಯಾಗಲು ಬಯಸಿದ್ದೆ. ಆದರೆ ದುರದೃಷ್ಟವಶಾತ್, ಯಾವುದೇ ತೊಂದರೆ ಉಂಟಾಗದಂತೆ ತಪ್ಪಿಸಲು ಸ್ಥಳ ಬದಲಾವಣೆ ಮಾಡಬೇಕಾಯಿತು" ಎಂದು ಹೇಳಿದ್ದಾಳೆ. ಸಪ್ತಪದಿ ತುಳಿದಿರುವ ಆಕೆ, ಜೀವನದುದ್ದಕ್ಕೂ ತನ್ನನ್ನು ತಾನು ಖುಷಿಯಾಗಿ ಇರಿಸಿಕೊಳ್ಳುವ ಏಳು ಪ್ರತಿಜ್ಞೆಗಳನ್ನು ಮಾಡಿದ್ದಾಳೆ.
ಕ್ಷಮಾ ಬಿಂದುವಿನ 'ಸ್ವಯಂ ಪ್ರೀತಿ' ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿತ್ತು. ಆದರೆ ಕೆಲವರು ಆಕೆಗೆ ಬೆಂಬಲ ನೀಡಿದ್ದರು. ಅಪರಿಚಿತರು ಹಾಗೂ ಅನಪೇಕ್ಷಿತರು ಮದುವೆಗೆ ಅಡ್ಡಿಪಡಿಸದಂತೆ ಮನೆಯೊಳಗೆ ಬಾಗಿಲು ಹಾಕಿಕೊಂಡು ಈ ಮದುವೆ ನಡೆಸಲಾಗಿದೆ. ಈ ವೇಳೆ ಆಕೆಯ ಗೆಳತಿಯರು ನರ್ತಿಸಿ ಸಂಭ್ರಮಿಸಿದ್ದಾರೆ. ಮದುವೆ ಬಳಿಕ ಎರಡು ವಾರ ಗೋವಾದಲ್ಲಿ 'ಹನಿಮೂನ್' ಮಾಡುವುದಾಗಿ ಆಕೆ ಹೇಳಿಕೊಂಡಿದ್ದಳು.
The 24-year-old Gujarat woman, Kshama Bindu, kept her promise and tied the knot with herself. While the idea may sound bizarre, it is one of the growing relationship trends and is usually called sologamy or self-marriage. Speaking to Times of India, she said, “I am very happy to finally be a married woman." Her wedding ceremony had all the ordinary events, including pheras. The 24-year-old was to get married on June 11. However, she decided to prepone her wedding in order to avoid any type of controversy on the wedding day.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm