ಬ್ರೇಕಿಂಗ್ ನ್ಯೂಸ್
14-06-22 04:00 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 14: ದೇಶ ಸೇವೆ ಮಾಡಬೇಕು, ಅಲ್ಪಕಾಲವಾದ್ರೂ ದೇಶದ ಗಡಿ ಕಾಯಬೇಕು ಅನ್ನುವ ಹುಮ್ಮಸ್ಸು ಹಲವರಿಗಿರುತ್ತದೆ. ಯುವಜನರನ್ನು ದೇಶಸೇವೆಗೆ ಆಕರ್ಷಿಸುವ ಸಲುವಾಗಿ ಕೇಂದ್ರ ಸರಕಾರ ಯುವಕ-ಯುವತಿಯರಿಗಾಗಿ ನಾಲ್ಕು ವರ್ಷಗಳ ಅವಧಿಗೆ ವಿಶೇಷ ಸೇನಾ ನೇಮಕಾತಿಗೆ ಆಫರ್ ನೀಡಿದೆ. 17.5ರಿಂದ 21 ವರ್ಷದ ನಡುವಿನ ಯುವಜನರು ಅಗ್ನಿಪಥ್ ಎನ್ನುವ ಹೊಸ ಯೋಜನೆಯಡಿ ಸೇನೆಯ ಮೂರೂ ವಿಭಾಗಕ್ಕೆ ಸೇರ್ಪಡೆಯಾಗಲು ಅವಕಾಶ ಇರುತ್ತದೆ.
ಅಲ್ಪಾವಧಿಯ ಸೇನಾ ನೇಮಕಾತಿ ನಿಯಮವನ್ನು ಕೇಂದ್ರ ಸರಕಾರ ಮಂಗಳವಾರ (ಜೂನ್14) ಬಿಡುಗಡೆ ಮಾಡಿದೆ. ಇತ್ತೀಚೆಗೆ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಟೂರ್ ಆಫ್ ಡ್ಯೂಟಿ ಎನ್ನುವ ಹೆಸರಲ್ಲಿ ಹೊಸ ನೇಮಕಾತಿ ಯೋಜನೆಯನ್ನು ರೂಪಿಸುವುದಾಗಿ ಹೇಳಿದ್ದರು. ಅದೇ ಯೋಜನೆಯಡಿ ಅಗ್ನಿಪಥ್ ಸೇನಾ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ನಾಲ್ಕು ವರ್ಷಗಳ ಕಾಲ ಯೋಧರಾಗಿ ಬಿಡುಗಡೆಯಾಗುವವರನ್ನು ಅಗ್ನಿವೀರ್ ಎನ್ನಲಾಗುತ್ತದೆ. ಅವರಿಗೆ ಸೇವಾವಧಿಯಲ್ಲಿ ಉತ್ತಮ ಸಂಬಳದ ಜೊತೆಗೆ ಬಿಡುಗಡೆ ವೇಳೆ ಸೇನಾ ಯೋಧರಿಗೆ ನೀಡುವಷ್ಟೇ ಉತ್ತಮ ಪ್ಯಾಕೇಜನ್ನು ನೀಡಲಾಗುತ್ತದೆ. ದೇಶಕ್ಕಾಗಿ ಸಮವಸ್ತ್ರ ತೊಟ್ಟ ಗೌರವದ ಜೊತೆಗೆ ಕೌಶಲ್ಯ, ತರಬೇತಿಯಿಂದಾಗಿ ಉತ್ತಮ ದೇಹದಾರ್ಢ್ಯವೂ ಬಳುಬಳಿಯಾಗಿ ಸಿಗುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಯುದ್ಧ ಇನ್ನಿತರ ಸಂದರ್ಭಗಳಲ್ಲಿ ದೇಶದ ಯುವಶಕ್ತಿಯ ಸದ್ಬಳಕೆಗಾಗಿ ಈ ರೀತಿಯ ಯೋಜನೆ ಉತ್ತಮ ಎಂದು ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಹೇಳಿದ್ದಾರೆ.

ಅಗ್ನಿಪಥ್ ನೇಮಕಾತಿ ನಿಮಯಗಳು
ಅಗ್ನಿಪಥ್ ಯೋಜನೆಯಡಿ ಅಲ್ಪಾವಧಿಗೆ ಯೋಧರಾಗಿ ಆಯ್ಕೆಗೊಳ್ಳಲು ಸೇನೆಗಿರುವ ಸಾಮಾನ್ಯ ಅರ್ಹತೆಗಳೇ ಮಾನದಂಡ. ವಯಸ್ಸು 17.5ರಿಂದ 21ರ ಒಳಗಿರಬೇಕು. ಯುವಕ-ಯುವತಿಯರಿಗೆ ವಯಸ್ಸು ಸಮಾನವಾಗಿರುತ್ತದೆ. ವೇತನ 30 ಸಾವಿರದಿಂದ 40 ಸಾವಿರ ವರೆಗೆ ಇರುತ್ತದೆ. ಭೂಸೇನೆ, ನೌಕಾಸೇನೆ, ವಾಯುಪಡೆಗೆ ಇರಬೇಕಾದ ಕನಿಷ್ಠ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ನಾಲ್ಕು ವರ್ಷಗಳ ಸೇವೆಯ ಬಳಿಕ ಅವರನ್ನು ಸೇನೆಯಿಂದ ಬಿಡುಗಡೆ ಮಾಡಲಾಗುತ್ತದೆ. ಅದರಲ್ಲಿ 25 ಶೇಕಡಾ ಮಂದಿಯನ್ನು ಸೇವಾವಧಿಯಲ್ಲಿ ನೀಡಿದ ಚಾತುರ್ಯ ಪರಿಗಣಿಸಿ, ಸೇನೆಯಲ್ಲಿ ಮುಂದುವರಿಯಲು ಅವಕಾಶ ನೀಡಲಾಗುತ್ತದೆ.
![]()

ಆನ್ ಲೈನಲ್ಲಿಯೇ ಅರ್ಜಿ ಸಲ್ಲಿಸಲು ಅವಕಾಶ. ಬೇರೆ ಬೇರೆ ವಿಭಾಗಕ್ಕೆ ಶೈಕ್ಷಣಿಕ ಅರ್ಹತೆಗಳೂ ಪ್ರತ್ಯೇಕ ಇರುವುದರಿಂದ ಆಯಾ ವಿಭಾಗಕ್ಕೆ ತಕ್ಕಂತೆ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಕೆಟಗರಿಯಲ್ಲಿ ಸೈನಿಕನಾಗಲು ಶೈಕ್ಷಣಿಕ ಅರ್ಹತೆ ಹತ್ತನೇ ಕ್ಲಾಸ್ ಪಾಸ್ ಆಗಿರಬೇಕು. ಸೇವಾವಧಿಯಲ್ಲಿ ಅಪಾಯ ಸಂಭವಿಸಿದಲ್ಲಿ ಇತರೇ ಯೋಧರಿಗೆ ಇರುವಂಥದ್ದೇ ಸೌಲಭ್ಯಗಳು ದೊರಕುತ್ತವೆ. ನಾಲ್ಕು ವರ್ಷಗಳ ಸೇವೆಯ ಬಳಿಕ ಕರ್ತವ್ಯದಿಂದ ಬಿಡುಗಡೆಯ ವೇಳೆ ಸೇವಾ ನಿಧಿ ಅನ್ನುವ ಹೆಸರಲ್ಲಿ ಸೇವಾ ನಿಯಮ ಆಧರಿಸಿ ನಿರ್ದಿಷ್ಟ ಇಡುಗಂಟನ್ನು ಪಾವತಿ ಮಾಡಲಾಗುತ್ತದೆ. ಸೇವಾನಿಧಿ ಮೊತ್ತಕ್ಕೆ ಆದಾಯ ತೆರಿಗೆಯಿಂದ ವಿನಾಯ್ತಿ ಇರುತ್ತದೆ. ಅಲ್ಲದೆ, ಅಗ್ನಿವೀರ್ ಸೇರ್ಪಡೆಯಾಗುವ ಯೋಧರಿಗೆ 48 ಲಕ್ಷ ರೂಪಾಯಿ ಮೊತ್ತದ ಉಚಿತ ಇನ್ಶೂರೆನ್ಸ್ ಕೂಡ ಇರುತ್ತದೆ.
The Centre on Tuesday today unveiled a new short-term recruitment policy for Indian youth to serve in the armed forces. Termed Agnipath, the scheme will enable youngsters aged 17.5 to 21 to be inducted into any of the three services as “agniveers” for a period of four years.The Agnipath scheme, earlier christened as "Tour of Duty", was launched in the presence of Union Minister of Defence Rajnath Singh and the chiefs of the three services.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm