ಬ್ರೇಕಿಂಗ್ ನ್ಯೂಸ್
15-06-22 07:51 pm HK News Desk ದೇಶ - ವಿದೇಶ
ನವದೆಹಲಿ, ಜೂ. 15: ಬಿಜೆಪಿಯ ರಾಷ್ಟ್ರೀಯ ವಕ್ತಾರೆ ಆಗಿದ್ದ ನುಪೂರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ಹೇಳಿಕೆಗಳು ಜಾಗತಿಕ ಮುಸ್ಲಿಂ ಸಮುದಾಯವನ್ನು ಕೆರಳಿಸಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಕ್ರೋಧಗೊಂಡಿರುವ ಭಯೋತ್ಪಾದಕ ಸಂಘಟನೆ ಅಲ್ಖೈದಾ ತನ್ನ ಆಕ್ರೋಶ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಇದೇ ತಿಂಗಳು ಅಲ್ಖೈದಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಆಯ್ಮನ್ ಅಲ್ ಜವಾಹಿರಿ ಪವಿತ್ರ ಪ್ರವಾದಿ ವಿರುದ್ಧ ಹಾಗೂ ಇಸ್ಲಾಂ ಧರ್ಮನಿಂದನೆ ಹಿನ್ನೆಲೆಯಲ್ಲಿ ಭಾರತ ಮತ್ತು ಬಾಂಗ್ಲಾದೇಶದ ವಿರುದ್ಧ ಜಿಹಾದ್ಗೆ ಕರೆ ನೀಡಿದ್ದಾನೆ. ಪ್ರಮುಖ ಭಾರತೀಯ ನಗರಗಳಲ್ಲಿ ಆತ್ಮಾಹುತಿ ದಾಳಿಗಳನ್ನು ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ. ಜಾಗತಿಕ ಮುಸ್ಲಿಂ ಸಮುದಾಯವು ಪ್ರಮುಖ ಜಿಹಾದಿ ನಾಯಕರನ್ನು ಮಾದರಿಯಾಗಿ ಅಳವಡಿಸಿಕೊಳ್ಳುವಂತೆ ಅಲ್ ಖೈದಾ ಮುಖ್ಯಸ್ಥ ಆಯ್ಮನ್ ಅಲ್ ಜವಾಹಿರಿ ಕೇಳಿಕೊಂಡಿದ್ದಾನೆ.
ಈ ಬಗ್ಗೆ ಅಲ್ ಖೈದಾ ಮುಖ್ಯಸ್ಥ ಆಯ್ಮನ್ ಅಲ್ ಜವಾಹಿರಿ ತನ್ನ ಮಾಧ್ಯಮ ವಿಭಾಗವಾದ ಆಸ್ ಸಾಹಬ್ ಮೂಲಕ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಮಾತನಾಡಿರುವ ಆತ ಶತಮಾನದ ಒಪ್ಪಂದ ಅಥವಾ ಕ್ರುಸೇಡ್ಸ್ ಸ್ಪ್ಯಾನಿಂಗ್ ಸೆಂಚುರೀಸ್ ಶೀರ್ಷಿಕೆಯ ಸರಣಿಯ ಐದನೇ ಸಂಚಿಕೆಯಲ್ಲಿ ಹೇಳಿಕೆ ನೀಡಿದ್ದಾನೆ.
![]()
ಹಿಂದೆ ಹಾಗೂ ಪ್ರಸ್ತುತ ಸುನ್ನಿ ಜಿಹಾದಿಗಳ ಆರಾಧನೆಗಾಗಿ ಜವಾಹಿರಿ ಕರೆ ನೀಡುವ ವೀಡಿಯೊವು ಇಸ್ಲಾಮಿಕ್ ಮೂಲಭೂತವಾದವನ್ನು ಪ್ರಚೋದಿಸುತ್ತದೆ. ಮಾತ್ರವಲ್ಲದೆ ಜಗತ್ತಿನಲ್ಲಿ ಭಯೋತ್ಪಾದನೆಯ ಬೆದರಿಕೆಯ ಮಟ್ಟವನ್ನು ಹೆಚ್ಚಿಸಿದೆ. ಸರಣಿಯಲ್ಲಿನ ಜವಾಹಿರಿಯ ಹಿಂದಿನ ವೀಡಿಯೊಗಳು ಅರಬ್ ನಾಯಕರನ್ನು ಟೀಕಿಸುವ ಮತ್ತು ಅಲ್ ಖೈದಾ ಸಿದ್ಧಾಂತದೊಂದಿಗೆ ಮುಸ್ಲಿಮರಿಗೆ ಶಿಕ್ಷಣ ನೀಡುವುದರ ಮೇಲೆ ಕೇಂದ್ರೀಕರಿಸಲಾಗಿದೆ.
ಉಗ್ರಗಾಮಿ ಕಾರ್ಯಕರ್ತರ ಆಕರ್ಷಣೆ;
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ನ ಉದಯದೊಂದಿಗೆ ಅಲ್ ಖೈದಾದ ಪ್ರಮುಖ ನಾಯಕ ಜವಾಹಿರಿ ಭಯೋತ್ಪಾದಕ ಗುಂಪಿನೊಂದಿಗೆ ಶಸ್ತ್ರಸಜ್ಜಿತವಾಗಿ ಆಧುನಿಕ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ರಾತ್ರಿ ದೃಷ್ಟಿ ಸಾಧನಗಳೊಂದಿಗೆ ಶಸ್ತ್ರಸಜ್ಜಿತವಾಗಿದ್ದಾನೆ ಎನ್ನಲಾಗಿದೆ. ಆಗಸ್ಟ್ 15, 2021ರಂದು ಅಮೆರಿಕ ನೇತೃತ್ವದ ಸಮ್ಮಿಶ್ರ ಪಡೆಗಳು ಬಿಟ್ಟುಹೋದ ಭಯೋತ್ಪಾದಕ ಗುಂಪು ಅಲ್ಖೈದಾ ಸ್ಪಷ್ಟವಾಗಿ ಈಗ ಪಾಕಿಸ್ತಾನದಲ್ಲಿ ತನ್ನ ಮಾಧ್ಯಮ ವಿಭಾಗವನ್ನು ಹೊಂದಿದೆ. ಜಾಗತಿಕ ಕಾರ್ಯಾಚರಣೆಗಳಿಗಾಗಿ ಉಗ್ರಗಾಮಿ ಕಾರ್ಯಕರ್ತರನ್ನು ಆಕರ್ಷಿಸಲು ಇದು ಪ್ರಾರಂಭಿಸಿದೆ. ಅಲ್ಲದೆ ಕತಾರ್ ಮತ್ತು ಟರ್ಕಿ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಿಂದ ಹಣವನ್ನು ಪಡೆಯುತ್ತಿದೆ.
ಸಾಕಷ್ಟು ವಿನಾಶವನ್ನು ಉಂಟುಮಾಡಲು ಸಜ್ಜು;

ಭಾರತೀಯ ಉಪಖಂಡದಲ್ಲಿ ಅಲ್ ಖೈದಾ ಸಕ್ರಿಯವಾಗಿದೆ. ತಾಲಿಬಾನ್ ಜಿಹಾದಿಗಳಿಗೆ ಹೊಸ ಮಾದರಿಯಾಗಿದ್ದು, ಇಸ್ಲಾಮಿಕ್ ಮೂಲಭೂತೀಕರಣವು ಹೆಚ್ಚಾಗುವ ನಿರೀಕ್ಷೆಯಿದೆ. ತಾಲಿಬಾನ್ಗಳು ಅಫ್ಘಾನಿಸ್ತಾನದಿಂದ ಅಮೆರಿಕಾ ಪಡೆಗಳು ಕಾಲ್ಕಿತ್ತ ಮೇಲೆ ರಹಸ್ಯ ಜಿಹಾದಿಗಳು ಸಾಕಷ್ಟು ವಿನಾಶವನ್ನು ಉಂಟುಮಾಡಲು ಸಜ್ಜಾಗಿವೆ ಎನ್ನಲಾಗಿದೆ. ಭಾರತದಲ್ಲಿ ಬಾಂಬ್ ದಾಳಿ ಮಾಡುವ ಅಲ್ ಖೈದಾ ಬೆದರಿಕೆಯನ್ನು ಭಯೋತ್ಪಾದನಾ ನಿಗ್ರಹ ಸಂಸ್ಥೆಗಳು ಲಘುವಾಗಿ ತೆಗೆದುಕೊಳ್ಳುತ್ತಿಲ್ಲ. ಏಕೆಂದರೆ ಸಂಭವನೀಯ ಅಪಾಯದ ಸಂಪೂರ್ಣ ಉದ್ದೇಶವು ಪ್ರತೀಕಾರವನ್ನು ತೀರಿಸಿಕೊಳ್ಳುವುದು ಮತ್ತು ಭಾರತೀಯ ಸಮಾಜದಲ್ಲಿ ಧ್ರುವೀಕರಣವನ್ನು ಹೆಚ್ಚಿಸುವುದೇ ಆಗಿದೆ.
Al Qaeda leader Ayman al Zawahiri in a video released through its media wing “As Sahab” has asked the global Muslim community or Ummah to adopt prominent jihadist leaders as role models.
— Hindustan Times (@htTweets) June 15, 2022
(report by Shishir Gupta)https://t.co/eMPi8VdHOY
Al Qaeda leader Ayman al Zawahiri in a video released through its media wing “As Sahab” has asked the global Muslim community or Ummah to adopt prominent jihadist leaders as role models. The video statement is episode five of the series titled “Deal of the Century or Crusades Spanning Centuries.”The video calling for the veneration of past and present Sunni jihadists is not only going to spark off Islamic radicalization but has also raised terror threat levels in the world.
02-05-26 06:35 pm
HK News Staffer
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
02-05-26 12:19 pm
HK News Staffer
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm