ಬ್ರೇಕಿಂಗ್ ನ್ಯೂಸ್
18-06-22 03:52 pm HK News Desk ದೇಶ - ವಿದೇಶ
ಬೈಂದೂರು, ಜೂನ್ 18: ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದ ಬಸ್ಸಿನಲ್ಲಿದ್ದ 18 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳವುಗೈದ ಘಟನೆ ನಡೆದಿದ್ದು, ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿದೆ.
ಮಹಾರಾಷ್ಟ್ರ ನಿವಾಸಿ ಈಶ್ವರ್ ದಾಲಿಚಂದ್ ಪೊರ್ವಾಲ್ (48) ಚಿನ್ನಾಭರಣ ಕಳಕೊಂಡ ವ್ಯಕ್ತಿ. ಈಶ್ವರ್ ದಾಲಿಚಂದ್ ಮುಂಬೈ ಮತ್ತು ಹೈದರಾಬಾದ್ ನಲ್ಲಿ ಚಿನ್ನಾಭರಣಗಳನ್ನು ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ಕಳೆದ ಹತ್ತು ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದಾನೆ. ಇತ್ತೀಚೆಗೆ ಮುಂಬೈಗೆ ತೆರಳಿದ್ದ ಈಶ್ವರ್ ಅಲ್ಲಿನ ಜುವೆಲ್ಲರಿಗಳಲ್ಲಿ ಚಿನ್ನವನ್ನು ಖರೀದಿಸಿದ್ದು ಒಟ್ಟು 466.960 ಗ್ರಾಮ್ ಚಿನ್ನವನ್ನು ಸೂಟ್ ಕೇಸ್ ನಲ್ಲಿ ಭದ್ರವಾಗಿಸಿ ಮುಂಬೈನಿಂದ ಮಂಗಳೂರಿಗೆ ಬಸ್ಸಿನಲ್ಲಿ ಬರುತ್ತಿದ್ದ.
ಬಸ್ಸನ್ನು ರಾತ್ರಿ ವೇಳೆ ಶಿರೂರಿನ ನೀರ್ಗದ್ದೆ ಎಂಬಲ್ಲಿ ನಿಲ್ಲಿಸಿದ್ದು, ಊಟ ಮಾಡುವವರು ಮಾಡಿಕೊಳ್ಳಿ ಎಂದು ಬಸ್ ಸಿಬಂದಿ ಪ್ರಯಾಣಿಕರಿಗೆ ತಿಳಿಸಿದ್ದರು. ಲಂಚ್ ವಿರಾಮ ಆಗಿದ್ದರಿಂದ ಪ್ರಯಾಣಿಕರು ಬಸ್ಸಿನಿಂದ ಇಳಿದಿದ್ದರು. ಇದೇ ವೇಳೆ, ಯಾರೋ ಅಪರಿಚಿತರು ಬಸ್ಸಿಗೆ ಹತ್ತಿದ್ದಾರೆ ಎನ್ನಲಾಗಿದ್ದು, ಬಸ್ಸಿನಲ್ಲಿದ್ದ ಬ್ಯಾಗ್ ಚೆಕ್ ಮಾಡಿ ಚಿನ್ನಾಭರಣ ಕದ್ದೊಯ್ದಿದ್ದಾರೆ ಎನ್ನುವ ಶಂಕೆಯಿದೆ. ಈಶ್ವರ್ ಊಟ ಮುಗಿಸಿ ಬಸ್ಸಿಗೆ ಬಂದು ನೋಡಿದಾಗ, ಮೇಲ್ಭಾಗದಲ್ಲಿ ಇಟ್ಟಿದ್ದ ಸೂಟ್ ಕೇಸ್ ಓಪನ್ ಆಗಿತ್ತು. ಬೀಗ ಒಡೆದು ಚಿನ್ನಾಭರಣ ಎಗರಿಸಿದ್ದು ಕಂಡುಬಂದಿದೆ. ಸೂಟ್ ಕೇಸ್ ಒಳಗಡೆ ಸ್ಟೀಲ್ ಬಾಕ್ಸ್ ನಲ್ಲಿ ಚಿನ್ನವನ್ನು ಇಡಲಾಗಿತ್ತು. ಈ ಬಗ್ಗೆ ಚಿನ್ನ ಕಳಕೊಂಡ ಈಶ್ವರ್ ದಾಲಿಚಂದ್ ಸ್ಥಳೀಯ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
A bag containing gold worth Rs 18 lac was stolen from the Mumbai-Mangaluru bus as the bus was stopped for tea break at Shiroor.Eshwar Dalichand Porwal (48), a resident of Maharashtra is the victim of this crime. He buys gold from Mumbai and Hyderabad and sells the same in Mangaluru for the past 10 years. Accordingly, he had purchased gold from various shops of Mumbai weighing 466.960 grams worth Rs 18 lac and had kept it in a steel box and was going to Mangaluru.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:02 pm
Mangalore Correspondent
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
Yaticorp, Mangalore, AI: ಯತಿಕಾರ್ಪ್ ಸಂಸ್ಥೆಯಿಂದ...
15-09-25 08:28 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm