ಬ್ರೇಕಿಂಗ್ ನ್ಯೂಸ್
19-06-22 05:24 pm HK News Desk ದೇಶ - ವಿದೇಶ
ಪಾಟ್ನಾ, ಜೂನ್ 19: 185 ಜನರನ್ನು ಹೊತ್ತಿದ್ದ ವಿಮಾನ ಗಗನದಲ್ಲಿ ಹಾರುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡು ಸ್ವಲ್ಪದರಲ್ಲಿ ಅಪಾಯದಿಂದ ಪಾರಾದ ಘಟನೆ ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆದಿದೆ.
ಬೋಯಿಂಗ್ 727 ಮಾದರಿಯ ವಿಮಾನ ಟೇಕಾಫ್ ಆದ ಕೆಲಹೊತ್ತಿನಲ್ಲೇ ರೆಕ್ಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದನ್ನು ಗಮನಿಸಿದ ಸ್ಥಳೀಯರು ಏರ್ಪೋರ್ಟ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮಧ್ಯಾಹ್ನ 12.10ಕ್ಕೆ ಟೇಕಾಫ್ ಆದಬಳಿಕ ಸುಮಾರು 20 ನಿಮಿಷಗಳ ಕಾಲ ವಿಮಾನ ಗಗನದಲ್ಲಿ ಹಾರಾಡಿದ್ದು, ಆನಂತರ ಅದೇ ಏರ್ಪೋರ್ಟಲ್ಲಿ ತುರ್ತಾಗಿ ಲ್ಯಾಂಡ್ ಆಗಿದೆ.
ಸ್ಪೈಸ್ ಜೆಟ್ ಕಂಪನಿ ಪ್ರಕಾರ, ಘಟನೆಗೆ ಹಕ್ಕಿ ಬಡಿದಿರುವುದು ಕಾರಣ ಎನ್ನಲಾಗುತ್ತಿದೆ. ವಿಮಾನ ಟೇಕಾಫ್ ಆಗುತ್ತಿದ್ದ ವೇಳೆ ಹಕ್ಕಿಯೊಂದು ಬಡಿದಿರುವುದನ್ನು ಅದರಲ್ಲಿದ್ದ ಸಿಬಂದಿ ಗಮನಿಸಿದ್ದರು. ಆನಂತರ, ಏನೂ ಆಗಿರಲಿಕ್ಕಿಲ್ಲ ಎಂದುಕೊಂಡಿದ್ದರು. ಕೆಲಹೊತ್ತಿನಲ್ಲಿ ವಿಮಾನದ ಇಂಜಿನ್ ಭಾಗದಲ್ಲಿ ಬೆಂಕಿಯ ಕಿಡಿ ಎದ್ದಿರುವುದನ್ನು ಗಮನಿಸಿ, ತುರ್ತಾಗಿ ವಿಮಾನ ಲ್ಯಾಂಡ್ ಮಾಡಲು ಸಿಬಂದಿ ನಿರ್ಧರಿಸಿದ್ದು, ಪಾಟ್ನಾ ಏರ್ಪೋರ್ಟಿಗೆ ಹಿಂತಿರುಗಿ ಚಲಾಯಿಸಿದ್ದಾರೆ ಎಂದು ಕಂಪನಿ ವಕ್ತಾರರು ಮಾಹಿತಿ ನೀಡಿದ್ದಾರೆ.
ಅಲ್ಲದೆ, ವಿಮಾನದ ಕ್ಯಾಪ್ಟನ್ ಕೂಡಲೇ ಬೆಂಕಿ ಹತ್ತಿಕೊಂಡಿದ್ದ ಇಂಜಿನ್ ಒಂದನ್ನು ಆಫ್ ಮಾಡಿದ್ದಾರೆ. ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಹಕ್ಕಿ ಬಡಿದಿದ್ದರಿಂದ ವಿಮಾನದ ಫ್ಯಾನ್ ಬ್ಲೇಡ್ ಬೆಂಡ್ ಆಗಿರುವುದು ಕಂಡುಬಂದಿದೆ. ವಿಮಾನ ಲ್ಯಾಂಡ್ ಆಗುತ್ತಲೇ ಜನರು ಯಾವುದೇ ಅಪಾಯ ಇಲ್ಲದೆ ಇಳಿದಿದ್ದಾರೆ. ವಿಮಾನದಲ್ಲಿ ಹೊಗೆ ಬರುತ್ತಿರುವುದನ್ನು ನೋಡಿ ಏರ್ಪೋರ್ಟ್ ಸಿಬಂದಿಯೂ ಆತಂಕಕ್ಕೆ ಒಳಗಾಗಿದ್ದರು. ಅಗ್ನಿಶಾಮಕ ವಾಹನ, ಇನ್ನಿತರ ಬೆಂಕಿ ನಂದಿಸುವ ವಾಹನಗಳನ್ನು ರೆಡಿ ಮಾಡಲಾಗಿತ್ತು. ಆದರೆ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಬೆಂಕಿ ಉರಿಯುವುದು ನಿಂತಿದ್ದು ಅಪಾಯ ತಪ್ಪಿದೆ.
#WATCH Patna-Delhi SpiceJet flight safely lands at Patna airport after catching fire mid-air, all 185 passengers safe#Bihar pic.twitter.com/vpnoXXxv3m
— ANI (@ANI) June 19, 2022
A Delhi-bound SpiceJet plane, carrying 185 passengers and six crew members, made an emergency landing in Patna on Sunday afternoon, minutes after its take-off, as its cabin crew witnessed sparks coming from an engine, a senior government official said. All the passengers of the Boeing 737-800 aircraft were safely deboarded, according to a SpiceJet statement.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:02 pm
Mangalore Correspondent
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
Yaticorp, Mangalore, AI: ಯತಿಕಾರ್ಪ್ ಸಂಸ್ಥೆಯಿಂದ...
15-09-25 08:28 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm