ಬ್ರೇಕಿಂಗ್ ನ್ಯೂಸ್
            
                        12-07-22 10:16 pm HK News Desk ದೇಶ - ವಿದೇಶ
            ವಾಷಿಂಗ್ಟನ್, ಜುಲೈ 12 : ಕೆಲವರಿಗೆ ಇನ್ನೊಬ್ಬರನ್ನು ನೋಡಿ ಅವರನ್ನು ಅನುಸರಿಸುವ ಖಯಾಲಿ. ಅದಕ್ಕಾಗಿ ಏನೆಲ್ಲ ಕಸರತ್ತು ಮಾಡುತ್ತಾರೆ. ಅಮೆರಿಕದಲ್ಲಿ ಮಾಡೆಲ್ ಕಂ ಉದ್ಯಮಿಯೂ ಆಗಿರುವ ಯುವತಿಯೊಬ್ಬಳು ಹಾಲಿವುಡ್ಡಿನ ಫೇಮಸ್ ತಾರೆ, ಖ್ಯಾತ ರೂಪದರ್ಶಿ ಕಿಮ್ ಕಾರ್ಡಶಿಯನ್ ಹೋಲುವಂತೆ ಸರ್ಜರಿ ಮಾಡಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾಳೆ.
ರಿಯಾಲಿಟಿ ಸೂಪರ್ ಸ್ಟಾರ್ ಆಗಿರುವ ಮಾಡೆಲ್ ಜೆನ್ನಿಫರ್ ಪ್ಯಾಂಪ್ಲೋನಾ(29) ಈ ರೀತಿ ಎಡವಟ್ಟು ಮಾಡಿಕೊಂಡಿರುವಾಕೆ. ಕಿಮ್ ಕಾರ್ಡಶಿಯನ್ ಆಗುವುದಕ್ಕಾಗಿ ಈಕೆ 12 ವರ್ಷಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ ಅಂದರೆ ನೀವು ನಂಬಲೇಬೇಕು. ಕೊನೆಗೆ ಎಲ್ಲವೂ ಆದಬಳಿಕ ಅದರಿಂದ ತೃಪ್ತಿಯಾಗದ ಮಾಡೆಲ್, ಮತ್ತೆ ಮೊದಲಿನಂತೆ ಕಾಣಬೇಕೆಂದು ಬಯಸಿ ಸರ್ಜರಿ ಮಾಡಿಕೊಂಡಿದ್ದಾಳೆ.

ಕಿಮ್ ರೂಪದಲ್ಲಿ ಕಾಣಲು ಈಕೆ 12 ವರ್ಷದಲ್ಲಿ ಬರೋಬ್ಬರಿ 4.7 ಕೋಟಿ ರೂ. ಖರ್ಚು ಮಾಡಿದ್ದಾಳಂತೆ. ಇದೀಗ ಮತ್ತೆ ನಿಜ ರೂಪ ಪಡೆಯಲು ಮತ್ತೆ 95,49,660 ರೂ. ಖರ್ಚು ಮಾಡಿದ್ದಾಳೆ. ಇಂಥ ವಿಚಿತ್ರ ಖಯಾಲಿಯಿಂದಾಗಿ ಜೆನ್ನಿಫರ್ ಅಮೆರಿಕದಲ್ಲಿ ಭಾರೀ ಸುದ್ದಿಗೂ ಗ್ರಾಸವಾಗಿದ್ದಾಳೆ.
ಆರಂಭದಲ್ಲಿ ಕಾರ್ಡಶಿಯನ್ ಅವರನ್ನೇ ಹೋಲುತ್ತಿದ್ದೆ. ಹೀಗಾಗಿ ಜನ ನನ್ನನ್ನು ಕಾರ್ಡಶಿಯನ್ ಎಂದೇ ಕರೆಯುತ್ತಿದ್ದರು. ಮೊದ ಮೊದಲು ಇದನ್ನು ಕೇಳಿ ನನಗೆ ಖುಷಿ ಆಗುತ್ತಿತ್ತು. ಆದರೆ ಕ್ರಮೇಣ ನನಗೆ ಇದೇ ವಿಚಾರ ಕಿರಿಕಿರಿಯಾಗಲು ಪ್ರಾರಂಭಿಸಿತ್ತು. ಹೀಗಾಗಿ ನನ್ನ ಮೊದಲಿನ ರೂಪವೇ ಬರುವಂತಾಗಲು ಮತ್ತೆ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿದ್ದೇನೆ ಎಂದು ಜೆನ್ನಿಫರ್ ತಿಳಿಸಿದ್ದಾಳೆ.

ಜೆನ್ನಿಫರ್ ತಾನು 17ನೇ ವಯಸ್ಸಿನಲ್ಲಿದ್ದಾಗಲೇ ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಿದ್ದಳು. 12 ವರ್ಷಗಳಲ್ಲಿ 40 ಬಾರಿ ಸರ್ಜರಿ ಮಾಡಿಕೊಂಡ ಬಗ್ಗೆ ತಾನೇ ಬೇಸರ ಪಟ್ಟಿದ್ದು ಈ ರೀತಿ ಯಾರೂ ಮಾಡ್ಕೋಬೇಡಿ ಎಂದು ಹೇಳಿದ್ದಾಳೆ. ಈಕೆಯ ಪ್ಲಾಸ್ಟಿಕ್ ಸರ್ಜರಿ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
            
            
            Versace model Jennifer Pamplona, after spending nearly $600K on procedures to transform herself into a Kim Kardashian lookalike, has now paid $120K to "detransition" back to her former appearance.According to New York Post, the 29-year-old model had about 40 cosmetic operations over a 12-year period in an effort to imitate the celebrity, but she eventually realized that her pleasure was only at the surface level.
    
            
             04-11-25 04:38 pm
                        
            
                  
                Bangalore Correspondent    
            
                    
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             04-11-25 05:06 pm
                        
            
                  
                Mangalore Correspondent    
            
                    
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
ಹಿಂದುಗಳು, ಬಿಜೆಪಿಗರೆಂದು ತಾರತಮ್ಯಗೈದರೆ ಕ್ಷೇತ್ರದ...
03-11-25 10:47 pm
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm