ಬ್ರೇಕಿಂಗ್ ನ್ಯೂಸ್
05-11-24 11:41 am HK News Desk ದೇಶ - ವಿದೇಶ
ಕಾಸರಗೋಡು, ನ.5: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಸಂಚರಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ಬದಿಯಡ್ಕ ಸಮೀಪದ ಬೋವಿಕ್ಕಾನದಲ್ಲಿ ನಡೆದಿದೆ.
ಭಾನುವಾರ ಸಂಜೆ ಕಾರ್ಯಕ್ರಮ ನಿಮಿತ್ತ ಸ್ವಾಮೀಜಿ ತಮ್ಮ ಕಾರಿನಲ್ಲಿ ಬೋವಿಕ್ಕಾನ - ಇರಿಯಣ್ಣಿ ಮಾರ್ಗ ಮಧ್ಯೆ ಸಂಚರಿಸುತ್ತಿದ್ದಾಗ ಪುಂಡರ ತಂಡ ಅಡ್ಡಹಾಕಿದೆ. ವಾಹನ ತಡೆದು ತಗಾದೆ ತೆಗೆದಿದ್ದು ಬಳಿಕ ಸ್ವಾಮೀಜಿ ಮಾತನಾಡದೆ ಮುಂದುವರಿದಿದ್ದರು. ಕಾರ್ಯಕ್ರಮ ಮುಗಿಸಿ ಅದೇ ದಾರಿಯಲ್ಲಿ ಹಿಂತಿರುಗುತ್ತಿದ್ದಾಗ ಅಡ್ಡಹಾಕಿದ ದುಷ್ಕರ್ಮಿಗಳ ತಂಡವು ದೊಣ್ಣೆಯಲ್ಲಿ ಕಾರಿನ ಗ್ಲಾಸ್ ಪುಡಿಗಟ್ಟಿ ಹಲ್ಲೆಗೆ ಯತ್ನಿಸಿದೆ. ಕಾರನ್ನು ಹಿಂಬಾಲಿಸಿ ಬಂದಿದ್ದ ತಂಡವು ಬಾವಿಕ್ಕೆರೆ ಎಂಬಲ್ಲಿ ಕೃತ್ಯ ನಡೆಸಿದೆ.
ಕಾರಿನ ಮುಂದಿನ ಗಾಜಿಗೆ ದೊಣ್ಣೆಯಲ್ಲಿ ಹೊಡೆದು ಹಾನಿ ಮಾಡಿದ್ದಾರೆ. ಅಲ್ಲದೆ, ಸ್ವಾಮೀಜಿಗೆ ಬೆದರಿಕೆ ಹಾಕಿ ಸ್ಥಳದಲ್ಲಿ ಭಯ ಮೂಡಿಸಿದ್ದಾರೆ. ಸ್ವಾಮೀಜಿ ಬಳಿಕ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ಇಂದು ಬೋವಿಕ್ಕಾನದಲ್ಲಿ ಹಿಂದು ಐಕ್ಯವೇದಿ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಹಿಂದು ಶ್ರದ್ಧಾಕೇಂದ್ರದ ಗುರುಗಳಿಗೆ ಅಪಮಾನ ಎಸಗಿದರೆ ಸಾಮಾನ್ಯ ಜನರ ಪಾಡೇನು ಎಂದು ಐಕ್ಯವೇದಿ ಪ್ರಶ್ನಿಸಿದ್ದು ಹಿಂದು ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿದೆ.
Edneer Math Swamiji car attacked in Kerala Kasaragod. The incident occurred on Sunday while he was on hisbway to kerala after which Miscreants attacked his car.
19-02-26 03:11 pm
HK News Desk
ವಿಧಾನಸೌಧ ಒಳಗಡೆ ಮಾಧ್ಯಮಗಳಿಗೆ ಲಕ್ಷ್ಮಣ ರೇಖೆ ; ಭದ್...
18-02-26 09:02 pm
ಮಹಾರಾಷ್ಟ್ರದಿಂದ ಬೈಕ್ ನಲ್ಲಿ ಬಾಗಲಕೋಟಗೆ ಬರುತ್ತಿದ...
18-02-26 06:03 pm
ಊಟಕ್ಕೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ ; ಬೈಕ್...
17-02-26 10:33 pm
Mohan Das Pai: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾ...
17-02-26 09:12 pm
17-02-26 08:50 pm
HK Desk
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
19-02-26 04:09 pm
Mangalore Correspondent
ಐರ್ಲೆಂಡಿನಲ್ಲಿ ಕಡಬ ಮೂಲದ ಯುವಕ ನಿಗೂಢ ಸಾವು ; ಆತ್ಮ...
19-02-26 03:54 pm
ಮಂಜನಾಡಿ ದುರಂತ ; ಇಬ್ಬರು ಮಕ್ಕಳು, ತನ್ನೆರಡು ಕಾಲುಗ...
18-02-26 11:24 pm
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸ್ ಔಟ್ ಪೋಸ್ಟ್...
18-02-26 10:46 pm
MIR Group, Mangalore: ಮಂಗಳೂರಿನಲ್ಲಿ ಇಟಲಿಯ ಮೀರ್...
18-02-26 10:24 pm
18-02-26 09:16 pm
Mangaluru Staffer
Mangalore Shivabagh Suicide: ಕೈ ಕೊಯ್ದುಕೊಂಡು ರ...
18-02-26 07:42 pm
Hassan Murder: ಆಸ್ತಿ ವಿಚಾರಕ್ಕೆ ತಕರಾರು, ಕೋರ್ಟ್...
18-02-26 07:10 pm
ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆ, ಹಡಗುಗಳ ರಹಸ್ಯ ಮಾ...
18-02-26 01:52 pm
ಬೆಚ್ಚಿಬೀಳಿಸಿದ ಎಂಬಿಎ ವಿದ್ಯಾರ್ಥಿನಿ ಹತ್ಯೆ ಪ್ರಕರಣ...
17-02-26 03:03 pm