ನಿಂತಿದ್ದ ಬಸ್ಸಿಗೆ ಓಮ್ನಿ ಡಿಕ್ಕಿ ; ಐವರು ಸ್ಥಳದಲ್ಲೇ ಸಾವು

01-02-21 10:50 am       Headline Karnataka News Network   ದೇಶ - ವಿದೇಶ

ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಈರೋಡ್‍ನ ಕಾವೇರಿಪಟ್ಟಣಂ ಬಳಿ ನಡೆದಿದೆ.

ಚೆನ್ನೈ, ಫೆ.1: ನಿಂತಿದ್ದ ಸರಕಾರಿ ಬಸ್ಸಿಗೆ ಓಮ್ನಿ ಕಾರು ಡಿಕ್ಕಿಯಾದ ಪರಿಣಾಮ ವಾಹನದಲ್ಲಿದ್ದ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯ ಕಾವೇರಿಪಟ್ಟಣಂ ಎಂಬಲ್ಲಿ ನಡೆದಿದೆ.

ಓಮ್ನಿ ಕಾರಿನಲ್ಲಿದ್ದ ಪ್ರಶಾಂತ್, ಲಿಂಗಾ, ಸುಂದರೇಶ್, ಶಿವಕುಮಾರ್ ಹಾಗೂ ಬಸ್ಸಿನ ಪ್ರಯಾಣಿಕ ದೇವರಾಜು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಗೌತಮ್, ಭರಣಿ ಹಾಗೂ ಅಶೋಕ್ ಗಂಭೀರ ಗಾಯಗೊಂಡಿದ್ದಾರೆ.

ಕಾವೇರಿ ಪಟ್ಟಣಂ ಬಳಿ ರಸ್ತೆಯಲ್ಲಿ ಪ್ರಯಾಣಿಕರನ್ನು ಇಳಿಸಲೆಂದು ನಿಂತಿದ್ದ ತಮಿಳುನಾಡಿನ ಸರ್ಕಾರಿ ಬಸ್ ಗೆ ಓಮ್ನಿ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 5 ಮಂದಿ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಓಮ್ನಿ ಚಾಲಕನ ಅತಿ ವೇಗದ ಧಾವಂತವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.

In a tragic accident, five persons were killed after an Omni van Collided with Bus at Erode.