ಬ್ರೇಕಿಂಗ್ ನ್ಯೂಸ್
27-03-21 05:19 pm Headline Karnataka News Network ದೇಶ - ವಿದೇಶ
ನವದೆಹಲಿ, ಮಾ.27: ವಾತಾವರಣದ ಮಾಲಿನ್ಯದಿಂದಾಗಿ ಮನುಷ್ಯನಿಗೆ ನಾನಾ ರೀತಿಯ ತೊಂದರೆಗಳು ಎದುರಾಗುತ್ತಿವೆ. ಪರಿಸರ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಮನುಷ್ಯನಲ್ಲಿ ಜನನಾಂಗ, ಶಿಶ್ನಗಳು ಕುಗ್ಗುತ್ತಿದ್ದು ಮುರುಟಿಕೊಳ್ಳುತ್ತಿವೆ ಎನ್ನುವ ವಿಚಾರವನ್ನು ಹೊರಗೆಡಹಿದ್ದಾರೆ. ಪರಿಸರ ಮಾಲಿನ್ಯದ ಕಾರಣದಿಂದಾಗಿ ಹುಟ್ಟುವ ಶಿಶುವಿನ ಜನನಾಂಗಗಳು ಅತ್ಯಂತ ಕಿರಿದಾಗಿರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ಅಮೆರಿಕದ ಶನ್ನಾ ಸ್ವಾನ್ ಎಂಬ ಮಹಿಳಾ ವಿಜ್ಞಾನಿ ಬರೆದಿರುವ ಕೌಂಟ್ ಡೌನ್ ಎನ್ನುವ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದು, ಮನುಷ್ಯ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಸನ್ನಿವೇಶಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಹುಟ್ಟುತ್ತಿರುವ ಮಕ್ಕಳಲ್ಲಿ ಶಿಶ್ನಗಳ ಗಾತ್ರ ಕಿರಿದಾಗುತ್ತಿದ್ದು ಮುರುಟಿಕೊಂಡಿರುವುದು ಕಂಡುಬಂದಿದೆ. ಅಲ್ಲದೆ, ಮಾಲಿನ್ಯದಿಂದಾಗಿ ಮನುಷ್ಯನ ಸಹಜ ಸೃಷ್ಟಿ ಕ್ರಿಯೆಯ ಶಕ್ತಿ ಕುಗ್ಗುತ್ತಿದೆ. ಹೀಗಾಗಿ ಮನುಷ್ಯನ ಪುನರುತ್ಪತ್ತಿಯ ಜೈವಿಕ ಪ್ರಕ್ರಿಯೆ ಸವಾಲಾಗಿ ಪರಿಣಮಿಸಲಿದೆ ಎಂದು ತಿಳಿಸಿದ್ದಾರೆ.
ಮನುಷ್ಯನಲ್ಲಿ ವೀರ್ಯೋತ್ಪತ್ತಿಯ ಕುಸಿತದಿಂದ ಆಧುನಿಕ ಜಗತ್ತು ಯಾವೆಲ್ಲಾ ಅಪಾಯಗಳನ್ನು ಎದುರಿಸುತ್ತಿದೆ. ಹೆಣ್ಣು ಹಾಗೂ ಗಂಡಿನ ಸೃಷ್ಟಿ ಕ್ರಿಯೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಮತ್ತು ಇದರಿಂದ ಮನುಷ್ಯ ಕುಲದ ಭವಿಷ್ಯದ ಮೇಲಾಗುವ ಪರಿಣಾಮಗಳೇನು ಎಂಬುದರ ಬಗ್ಗೆ ವಿಜ್ಞಾನಿ ಅಧ್ಯಯನ ಕೈಗೊಂಡಿದ್ದರು. ಅಧ್ಯಯನದಲ್ಲಿ ಪ್ಲಾಸ್ಟಿಕ್ ಉತ್ಪಾದನೆಗೆ ಬಳಸುವ phthalate ಎನ್ನುವ ಹೆಸರಿನ ಕೆಮಿಕಲ್ ಮನುಷ್ಯನ ಮೇಲೆ ಗಂಭೀರ ಪರಿಣಾಮ ಬೀರುವುದನ್ನು ಪತ್ತೆ ಮಾಡಿದ್ದಾರೆ. ನಿರಂತರ ಪ್ಲಾಸ್ಟಿಕ್ ಮಾಲಿನ್ಯವನ್ನು ಹೀರಿಕೊಳ್ಳುವ ಮನುಷ್ಯನಿಂದ ಹುಟ್ಟುವ ಮಕ್ಕಳಲ್ಲಿ ಜನನಾಂಗ ದೋಷಗಳು ಕಂಡುಬರುತ್ತವೆ ಎಂದು ಕಂಡುಕೊಂಡಿದ್ದಾರೆ.
Phthalate ಕೆಮಿಕಲ್ ಬಳಸುವುದರಿಂದ ಪ್ಲಾಸ್ಟಿಕ್ ಹೆಚ್ಚು ಫ್ಲೆಕ್ಸಿಬಲ್ ಆಗಿ ಪರಿವರ್ತನೆಯಾಗುತ್ತವೆ. ಆದರೆ, ಈ ರೀತಿಯ ವಿಷಕಾರಿ ಕೆಮಿಕಲ್ ಆಟಿಕೆ ಇನ್ನಿತರ ಸಾಮಗ್ರಿಗಳ ಮೂಲಕ ಮನುಷ್ಯನ ಆಹಾರ ಸೇರುತ್ತಿದ್ದು, ದೀರ್ಘಕಾಲೀನ ಪ್ರಭಾವಗಳನ್ನು ಬೀರುತ್ತಿದೆ. ಮನುಷ್ಯನಲ್ಲಿ ಸಹಜವಾಗಿ ಉತ್ಪಾದನೆಯಾಗುವ ಹಾರ್ಮೋನ್ ಗಳಿಗೆ ಪೆಟ್ಟು ನೀಡಲಿದೆ. ಇದರಿಂದ ಮನುಷ್ಯ ಕುಲದ ಮೇಲೆ ಮಹತ್ತರ ಪರಿಣಾಮ ಬೀರಲಿದೆ ಎಂದು ಶನ್ನಾ ಸ್ವಾನ್ ಹೇಳಿದ್ದಾರೆ.
An environmental scientist, in her new book titled Count Down, has warned that human penises are shrinking and genitals becoming malfunctioned due to pollution. Dr Shanna Swan writes that humanity is facing an "existential crisis" in fertility rates because of phthalates.
20-10-25 06:58 pm
Bangalore Correspondent
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
20-10-25 08:34 pm
HK News Desk
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
20-10-25 10:28 pm
Mangalore Correspondent
Ashoka Janamana in Puttur, CM Siddaramaiah: ಪ...
20-10-25 07:25 pm
ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ...
19-10-25 10:32 pm
Karkala Abhishek Suicide Case, Arrest: ಅಭಿಷೇಕ...
19-10-25 07:58 pm
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
20-10-25 10:51 pm
Mangalore Correspondent
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm
Bangalore engineering College rape, Crime: ಬೆ...
19-10-25 01:26 pm
MSME Fraud, SBI Malikatte, Mangalore': ಕೇಂದ್ರ...
18-10-25 10:49 pm