ಕಾರಿನ ಮೇಲೆ ಹತ್ತಿದ ಕಂಟೈನರ್ ಟ್ರಕ್ ; ನಾಲ್ವರು ಅಪ್ಪಚ್ಚಿ

02-04-21 01:10 pm       Headline Karnataka News Network   ದೇಶ - ವಿದೇಶ

ಕಾರಿನ ಮೇಲೆ ಟ್ರಕ್​ ಹತ್ತಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಗುಡಾ ಎಂಡ್ಲಾದಲ್ಲಿ ನಡೆದಿದೆ.

ರಾಜಸ್ಥಾನ ಎ.2: ಕಾರಿನ ಮೇಲೆ ಟ್ರಕ್​ ಹತ್ತಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಗುಡಾ ಎಂಡ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಪಾಲಿಯಿಂದ ಸಿರೋಹಿ ಕಡೆಗೆ ಒಂದು ಕಾರು ಹೋಗುತ್ತಿತ್ತು , ಈ ವೇಳೆ ಅಮೃತಶಿಲೆ ತುಂಬಿದ ಟ್ರಕ್ ಕಾರನ್ನು ಓವರ್​ ಟೇಕ್ ಮಾಡಲು ಹೋಗಿ ಕಾರಿನ ಮೇಲೆ ಬಿದ್ದಿದೆ. ಇದರಿಂದಾಗಿ ಜಲೂರು ನಿವಾಸಿ ಮನೋರ್ ಶರ್ಮಾ, ಜೋಧ್​​ಪುರದ ಅಶ್ವಿನಿ ಕುಮಾರ್ ಡೇವ್, ಜೋಧಪುರದ ನಿವಾಸಿ ಬುದ್ಧ ರಾಮ್ ಪ್ರಜಾಪತ್ ಮತ್ತು ರಶ್ಮಿ ದೇವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತಪಟ್ಟವರ ಪೈಕಿ ಪಾಲಿಯ ಖಜಾನೆ ಅಧಿಕಾರಿ ಮನೋಜ್ ಶರ್ಮಾ ಎಂಬುವರು ಸೇರಿದ್ದಾರೆ.

Rajasthan Four killed three injured in car container truck accident.