ಮಂಗಳೂರಿನ ಬಿಎಸ್ಸಿ ವಿದ್ಯಾರ್ಥಿ ಸೇರಿ ಇಬ್ಬರು ನದಿಯಲ್ಲಿ ಮುಳುಗಿ ಸಾವು !

14-04-21 07:24 pm       Headline Karnataka News Network   ದೇಶ - ವಿದೇಶ

ನದಿಯಲ್ಲಿ ಸ್ನಾನಕ್ಕೆ ಹೋದ ಅಣ್ಣ ತಮ್ಮಂದಿರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಲ್ಲಿನ ಪರಪ್ಪಚ್ಚಾಲ್ ಎಂಬಲ್ಲಿ  ನಡೆದಿದೆ.

ಕಾಸರಗೋಡು, ಎ.14 : ನದಿಯಲ್ಲಿ ಸ್ನಾನಕ್ಕೆ ಹೋದ ಅಣ್ಣ ತಮ್ಮಂದಿರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಲ್ಲಿನ ಪರಪ್ಪಚ್ಚಾಲ್ ಎಂಬಲ್ಲಿ  ನಡೆದಿದೆ.

ಕಾವುಂದಳದ ರೆಜಿ ಎಂಬವರ ಪುತ್ರ ಆಲ್ವಿನ್ (15) ಹಾಗೂ ರೆಜಿ ಅವರ ಸಹೋದರ ಥಾಮಸ್ ಅವರ ಪುತ್ರ ಬ್ಲಾಸನ್  ಥಾಮಸ್ ( 20) ಮೃತಪಟ್ಟವರು. ಆಲ್ವಿನ್ 10ನೇ ತರಗತಿ ವಿದ್ಯಾರ್ಥಿ ಹಾಗೂ ಥಾಮಸ್ ಮಂಗಳೂರು  ಡಾ.ಎಂ.ವಿ. ಶೆಟ್ಟಿ ನರ್ಸಿಂಗ್ ಕಾಲೇಜಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಯಾಗಿದ್ದನು.

ವಿಷು ಹಬ್ಬದ ಹಿನ್ನೆಲೆಯಲ್ಲಿ ಇಬ್ಬರು ಪರಪ್ಪಚಾಲ್ ನ ಸ್ನೇಹಿತನ ಮನೆಗೆ ಬಂದಿದ್ದು ಈ ವೇಳೆ ಸಮೀಪದ ಚೈತ್ರವಾಹಿನಿ ನದಿಗೆ ಸ್ನಾನಕ್ಕೆ ತೆರಳಿದ್ದರು. ಈಜಾಟದಲ್ಲಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.  

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

In an unfortunate incident, two boys of a family drowned in a stream in Parappachal near West Eleri, Kasargod on Wednesday, April 14. The deceased have identified as Albin (15) son of Reji of Kavundala and his cousin Blesson Thomas (20) son of Thomas.