ಬ್ರೇಕಿಂಗ್ ನ್ಯೂಸ್
30-04-21 11:46 am Headline Karnataka News Network ದೇಶ - ವಿದೇಶ
ಛತ್ತೀಸ್ಗಡ: ಎ 30: ಆರೋಗ್ಯ ಕೇಂದ್ರದಲ್ಲಿ ವೆಂಟಿಲೇಟರ್ ಬೆಡ್ ಸಿಗದೆ 8 ತಿಂಗಳ ಗರ್ಭಿಣಿಯಾಗಿದ್ದ ನರ್ಸ್ ಮೃತಪಟ್ಟಿದ್ದಾರೆ.
ಜಿಲ್ಲೆಯ ಪರ್ಪೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ನೇಮಕಗೊಂಡ ಆರೋಗ್ಯ ಕಾರ್ಯಕರ್ತೆ ದುಲಾರಿ ಧೀಮರ್ ಎಂಬುವರಿಗೆ 29 ವರ್ಷ ವಯಸ್ಸು. ಇವರು ಕೊರೊನಾ ಸೋಂಕಿಗೆ ಒಳಗಾದ ನಂತರ ಏಪ್ರಿಲ್ 26ರಂದು ಏಮ್ಸ್ಗೆ ದಾಖಲಿಸಲಾಯಿತು. 2 ವರ್ಷಗಳಿಂದ ಸಾಜಾ ಬ್ಲಾಕ್ನ ಪರ್ಪೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ 3 ವರ್ಷದ ಮಗಳು ಸಹ ಇದ್ದಾಳೆ. 8 ತಿಂಗಳ ಗರ್ಭಿಣಿಯಾದ ನಂತರ ಆಕೆಗೆ ರಜೆ ನೀಡಲಿಲ್ಲ. ದುರದೃಷ್ಟ ಎಂಬಂತೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ.
ಸೋಂಕಿಗೆ ತುತ್ತಾದ ಬಳಿಕ ಇವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಯಿತು. ಈ ವೇಳೆ ಬೆಮೆತರಾ ಮತ್ತು ದುರ್ಗ್ನ ಯಾವುದೇ ವೈದ್ಯಕೀಯ ಮಳಿಗೆಗಳಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದು ಸಿಗಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. 4 ಸಾವಿರ ರೂಪಾಯಿಗಳ ಎರಡು ಚುಚ್ಚುಮದ್ದಿಗೆ 15 ಸಾವಿರ ರೂ. ನೀಡಬೇಕಾಗಿತ್ತು. ಚುಚ್ಚುಮದ್ದಿನ ನಂತರ 2 ದಿನಗಳ ಕಾಲ ದುಲಾರಿ ಚೆನ್ನಾಗಿಯೇ ಇದ್ದರು. ಆದರೆ ಇದ್ದಕ್ಕಿದ್ದಂತೆ ಅವರ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು. ನಂತರ ರಾಯ್ಪುರ ಏಮ್ಸ್ಗೆ ರೆಫರ್ ಮಾಡಲಾಗಿತ್ತು. ಅಲ್ಲಿ ವೆಂಟಿಲೇಟರ್ ಇರಲಿಲ್ಲ. 2 ದಿನಗಳ ಕಾಲ ಕಾದ ನಂತರ ಹಾಸಿಗೆ ಸಿಕ್ಕಿತು. ಆದರೆ ವೆಂಟಿಲೇಟರ್ ಸಿಗಲಿಲ್ಲ. ಇದರಿಂದಾಗಿ ದುಲಾರಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕೊರೊನಾಗೆ 28 ದಿನಗಳಲ್ಲಿ ಬೆಮೆತರಾದಲ್ಲಿ 128 ಜನ ಬಲಿಯಾಗಿದ್ದಾರೆ.
Death of a pregnant nurse from Corona in Chhattisgarh. There was an 8-month-old baby in the stomach, yet duty was put in the treatment of Corona patients; No Remedisvir found or ventilator when infected
08-05-24 04:37 pm
Bangalore Correspondent
C P Yogeshwara slams Dk Shivakumar: ಬಾಲ್ಯದಲ್ಲ...
08-05-24 04:28 pm
ಉಪ್ಪು ತಿಂದವನು ನೀರು ಕುಡಿಬೇಕು ಎಂದವರು ಈಗ ಯಾಕೆ ಉರ...
08-05-24 01:03 pm
DK Shivakumar, HD Kumarasway, Prajwal case:...
07-05-24 09:11 pm
Lok Sabha Elections 2024, Uttar Karnataka Vot...
07-05-24 07:11 pm
08-05-24 11:59 am
HK News Desk
ಹೈದರಾಬಾದ್ ; ಭಾರೀ ಮಳೆಗೆ ಗೋಡೆ ಕುಸಿತ, 4 ವರ್ಷದ ಮಗ...
08-05-24 10:44 am
Cyber crime, gold biscut: ಸೈಬರ್ ವಂಚಕನಿಗೆ ಸೇರಿ...
07-05-24 10:26 pm
Solapur Lok Sabha Constituency, Maharashtra,...
07-05-24 08:38 pm
Ram Mandir, Rahul Gandhi, Acharya Pramod Kris...
07-05-24 05:16 pm
08-05-24 10:48 pm
Mangalore Correspondent
Mangalore Vasantha Bangera death: ವಸಂತ ಬಂಗೇರ...
08-05-24 10:37 pm
Explosion at firecracker: ಕಾರ್ಕಳ ; ಸಿಡಿಮದ್ದು...
08-05-24 08:44 pm
Mangalore suicide, College student: ಬಿಇ ಇಂಜಿನ...
08-05-24 08:11 pm
Congress Vasantha Bangera death: ಬೆಳ್ತಂಗಡಿಯ ಹ...
08-05-24 06:19 pm
08-05-24 04:35 pm
Bengaluru Correspondent
ಹಲ್ಲಿನ ಚಿಕಿತ್ಸೆಗೆ ಬಂದು ಮೆಡಿಕಲ್ ಕಾಲೇಜಿನ ಟಾಯ್ಲೆ...
08-05-24 11:33 am
ಆನ್ಲೈನ್ ಗೇಮಿಂಗ್ ಗಾಗಿ 2 ಸಾವಿರ ರೂ. ಸಾಲ, ದುಡ್ಡ...
07-05-24 10:03 pm
Bangalore Cyber crime: ಸ್ಟಾಕ್ ಮಾರ್ಕೆಟ್ ಹೂಡಿಕೆ...
07-05-24 09:48 pm
Bangalore crime, Robbery: ಊರಿಗೆ ಹೋದ್ಲು ಅಕ್ಕ ;...
07-05-24 02:57 pm