ಬ್ರೇಕಿಂಗ್ ನ್ಯೂಸ್
18-05-21 03:17 pm Headline Karnataka News Network ದೇಶ - ವಿದೇಶ
Photo credits : The Indian Express
ಚಂಡೀಗಢ, ಮೇ 18: ಲೀವಿಂಗ್ ರಿಲೇಶನ್ ಸಂಬಂಧಗಳು ನೈತಿಕವಾಗಿ ಮತ್ತು ಸಾಮಾಜಿಕ ನೆಲೆಯಲ್ಲಿ ಒಪ್ಪತಕ್ಕದ್ದಲ್ಲ ಮತ್ತು ಸ್ವೀಕಾರಾರ್ಹವೂ ಅಲ್ಲ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹುಡುಗ- ಹುಡುಗಿ ಮನೆ ಬಿಟ್ಟು ಓಡಿ ಹೋಗಿದ್ದಲ್ಲದೆ, ಮದುವೆಯಾಗುವ ಮುನ್ನ ಜೊತೆಗೆ ಬಾಳುವುದಕ್ಕೆ ಅನುಮತಿ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಈ ರೀತಿಯ ತೀರ್ಪು ನೀಡಿದೆ. ದೇಶದಲ್ಲಿ ಲೀವಿಂಗ್ ರಿಲೇಶನ್ ಸಂಬಂಧಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಹೈಕೋರ್ಟ್ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದ್ದು ಮಹತ್ವ ಪಡೆದುಕೊಂಡಿದೆ.

ಪಂಜಾಬ್ ಪ್ರಾಂತ್ಯದ ಗುಲ್ಝಾ ಕುಮಾರಿ (19) ಮತ್ತು ಗುರ್ವಿಂದರ್ ಸಿಂಗ್ (22) ಎಂಬ ಇಬ್ಬರು ಮನೆ ಬಿಟ್ಟು ಓಡಿ ಬಂದಿದ್ದು ನಾವು ಸದ್ಯದಲ್ಲೇ ಮದುವೆಯಾಗುತ್ತೇವೆ. ಅಲ್ಲೀವರೆಗೆ ಜೊತೆಯಾಗಿರಲು ಅನುಮತಿ ನೀಡಬೇಕು ಎಂದು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಅರ್ಜಿದಾರರು ಲೀವಿಂಗ್ ರಿಲೇಶನ್ ಶಿಪ್ ಹೊಂದಲು ಬಯಸಿದ್ದಾರೆ. ಆದರೆ, ಈ ರೀತಿಯ ಸಂಬಂಧಗಳು ಸಮಾಜದಲ್ಲಿ ಸ್ವೀಕಾರಾರ್ಹವಲ್ಲ. ಒಪ್ಪುವಂಥದ್ದೂ ಅಲ್ಲ. ಹೀಗಾಗಿ ಈ ರೀತಿಯ ಸಂಬಂಧಗಳ ಬಗ್ಗೆ ಯಾವುದೇ ರೀತಿಯ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಅಲ್ಲದೆ, ಯುವಜೋಡಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಮಾಹಿತಿ ಪ್ರಕಾರ, ಹುಡುಗಿಯ ಮದುವೆಗೆ ಆಕೆಯ ಹೆತ್ತವರು ಒಪ್ಪಿಗೆ ನೀಡಿಲ್ಲ. ಹೆತ್ತವರ ವಿರೋಧದ ಮಧ್ಯೆ ಲೂಧಿಯಾನದಿಂದ ಹುಡುಗಿಯನ್ನು ತಾರನ್ ಜಿಲ್ಲೆಗೆ ಹುಡುಗ ಕರೆದೊಯ್ದು ಜೊತೆಗೆ ವಾಸ ಮಾಡಲಾರಂಭಿಸಿದ್ದ. ಆಕೆಯ ವಯಸ್ಸು ಭರ್ತಿಯಾಗಿರುವ ಬಗ್ಗೆ ದಾಖಲೆ ಪತ್ರಗಳು ಲಭ್ಯವಿಲ್ಲದ ಕಾರಣ ಹುಡುಗಿಯನ್ನು ಮದುವೆಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹುಡುಗಿ ಮನೆಯವರ ಭಯದಿಂದ ಪೊಲೀಸರ ರಕ್ಷಣೆ ಬೇಕೆಂದು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
The Punjab and Haryana high court has made it clear that the “live-in-relationship is morally or socially not acceptable.” Justice H S Madaan passed these orders while dismissing the petition filed by a runaway couple from Punjab’s Tarn Taran district seeking protection of their life and liberty. The couple, in this case, was in a “live-in” relationship.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 03:35 pm
Mangalore Correspondent
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
05-11-25 05:27 pm
Bangalore Correspondent
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm