ಬ್ರೇಕಿಂಗ್ ನ್ಯೂಸ್
20-05-21 05:47 pm Headline Karnataka News Network ದೇಶ - ವಿದೇಶ
Photo credits : Financia lexpress
ತಿರುವನಂತಪುರಂ, ಮೇ 17: ಕೇರಳದಲ್ಲಿ ಎರಡನೇ ಬಾರಿ ಅಧಿಕಾರಕ್ಕೇರಿರುವ ಎಡಪಕ್ಷದ ಸರಕಾರದಲ್ಲಿ ಪಿಣರಾಯಿ ವಿಜಯನ್ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ತಿರುವನಂತಪುರಂ ಸೆಂಟ್ರಲ್ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದ್ದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಮಾಣ ವಚನ ಬೋಧಿಸಿದ್ದಾರೆ. ಇತರ ಸಚಿವರು ಆದ್ಯತೆಯ ಪ್ರಕಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಳಬರನ್ನು ಕೈಬಿಡಲಾಗಿದ್ದು ಪೂರ್ತಿ ಹೊಸ ತಂಡವನ್ನು ಈ ಬಾರಿ ಪಿಣರಾಯಿ ವಿಜಯನ್ ಸಚಿವರಾಗಿ ಆಯ್ಕೆ ಮಾಡಿದ್ದಾರೆ. ಕೆ. ರಾಜನ್, ರೋಶಿ ಅಗಸ್ಟೀನ್, ಕೆ. ಕೃಷ್ಣಂಕುಟ್ಟಿ, ಎ.ಕೆ. ಶಶೀಂದ್ರನ್, ಅಹ್ಮದ್ ದೇವರ್ಕೋವಿಲ್, ಆಂಟನಿ ರಾಜು, ವಿ. ಅಬ್ದುರೆಹಮಾನ್, ಜಿ.ಆರ್. ಅನಿಲ್, ಕೆ.ಎನ್. ಬಾಲಗೋಪಾಲ್, ಆರ್. ಬಿಂದು, ಜೆ. ಚಿಂಜುರಾಣಿ, ಎಂ.ವಿ. ಗೋವಿಂದನ್, ಪಿ.ಎ. ಮುಹಮ್ಮದ್ ರಿಯಾಜ್, ಪಿ. ಪ್ರಸಾದ್, ಕೆ. ರಾಧಾಕೃಷ್ಣನ್, ಪಿ. ರಾಜೀವ್, ಸಜಿ ಚೆರಿಯನ್, ವಿ. ಶಿವಂಕುಟ್ಟಿ, ವಿ.ಎನ್. ವಾಸವನ್ ಮತ್ತು ವೀಣಾ ಜಾರ್ಜ್ ಕ್ರಮವಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಜಭವನದಲ್ಲಿ ಚಹಾ ಕೂಟದ ನಂತರ ಇಂದು ಸಂಜೆ ಸಚಿವಾಲಯದಲ್ಲಿ ಸಭೆ ನಡೆಯಲಿದೆ. ಮೊದಲ ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಾಯಕ ನಿರ್ಧಾರಗಳನ್ನು ಸಹ ನಿರೀಕ್ಷಿಸಲಾಗಿದೆ. ಸಮಾರಂಭದ ಮೊದಲು, 52 ಗಾಯಕರು ಮತ್ತು ಸಂಗೀತಗಾರರು 140 ಅಡಿ ಉದ್ದದ ಎಲ್ಇಡಿ ಪರದೆಯಲ್ಲಿ ನವಕೇರಳಾ ಗೀತಾಂಜಲಿಯನ್ನು ಪ್ರದರ್ಶಿಸಿದರು.
ಪ್ರಮಾಣ ವಚನ ಸ್ವೀಕರಿಸುವ ಮೊದಲು, ಮುಖ್ಯಮಂತ್ರಿ, ಸಿಪಿಎಂ ಮತ್ತು ಸಿಪಿಐ ನಿಯುಕ್ತ ಸಚಿವರು ವಯಲಾರ್ ಹುತಾತ್ಮರ ಸಭಾಂಗಣ ಮತ್ತು ಆಲಪ್ಪುಳದಲ್ಲಿರುವ ಪುನ್ನಾಪ್ರ- ವಯಲಾರ್ ಹುತಾತ್ಮರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು. ಬಿಜೆಪಿ ಅಲ್ಲದ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿತ್ತು. ಆದರೆ ಕೊವಿಡ್ ಬಿಕ್ಕಟ್ಟಿನಿಂದಾಗಿ ತಾನು ಹಾಜರಾಗುವುದಿಲ್ಲ ಎಂದು ತಮಿಳುನಾಡಿನ ಕೈಗಾರಿಕಾ ಸಚಿವ ತಂಕಂ ತೆನರಾಶ್ ಅವರು ಹೇಳಿದ್ದಾರೆ. ಟ್ರಿಪಲ್ ಲಾಕ್ ಡೌನ್ ಹೊರತಾಗಿಯೂ ಸಮಾರಂಭ ನಡೆಸುವುದನ್ನು ವಿರೋಧಿಸಿದ ಯುಡಿಎಫ್ ಶಾಸಕರು ಮತ್ತು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಅದರ ಬದಲು ಕಾರ್ಯಕ್ರಮವನ್ನು ಆನ್ಲೈನ್ನಲ್ಲಿ ವೀಕ್ಷಿಸಲಾಗುವುದು ಎಂದಿದ್ದಾರೆ.
ಪಿಣರಾಯಿ ವಿಜಯನ್, ಕಣ್ಣೂರಿನ ಧರ್ಮಡಂ ವಿಧಾನಸಭಾ ಕ್ಷೇತ್ರವನ್ನು 50123 ಮತಗಳ ಬಹುಮತದಲ್ಲಿ ಗೆದ್ದು ಸತತ ಎರಡನೇ ಬಾರಿಗೆ ಕೇರಳ ಮುಖ್ಯಮಂತ್ರಿಯಾಗಿದ್ದಾರೆ. ಪ್ರಸ್ತುತ ಸಿಪಿಐ (ಎಂ) ನ ಪಾಲಿಟ್ ಬ್ಯೂರೋ ಸದಸ್ಯರಾಗಿದ್ದಾರೆ. ಕೇರಳದ ಎಸ್ಎಫ್ಐ ಮೂಲಕ ರಾಜಕೀಯ ಪ್ರವೇಶ. ಕೆಎಸ್ಎಫ್ ರಾಜ್ಯ ಕಾರ್ಯದರ್ಶಿ, ಕೆಎಸ್ವೈಎಫ್ ರಾಜ್ಯ ಅಧ್ಯಕ್ಷರಾಗಿ ಸೇವೆ. 1986 ರಲ್ಲಿ ಅವರು ಸಿಪಿಎಂ ಕಣ್ಣೂರು ಜಿಲ್ಲಾ ಕಾರ್ಯದರ್ಶಿ. 88 ರಲ್ಲಿ ರಾಜ್ಯ ಸಚಿವಾಲಯದ ಸದಸ್ಯ. 1998 ರಿಂದ 2015 ರವರೆಗೆ ಅವರು ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 1970, 77 ಮತ್ತು 91ರ ಚುನಾವಣೆಗಳಲ್ಲಿ ಕೂತುಪರಂಬದಿಂದ, 1996 ರಲ್ಲಿ ಪಯ್ಯನೂರಿನಿಂದ ಮತ್ತು 2016 ರಲ್ಲಿ ಧರ್ಮಡಂನಿಂದ ಗೆದ್ದು ಶಾಸಕರಾಗಿದ್ದರು. 1996 ರಲ್ಲಿ ಸಹಕಾರ ಮತ್ತು ವಿದ್ಯುತ್ ಸಚಿವರಾಗಿದ್ದರು.
The Left Democratic Front (LDF) government led by CPI(M) Polit Bureau member Pinarayi Vijayan assumed office after a 21-member Cabinet was sworn in at the Central Stadium here on Thursday evening by Governor Arif Mohammed Khan.
11-05-24 03:19 pm
Bengaluru Correspondent
Devaraje Gowda arrested, Shivarame gowda: ದೇ...
11-05-24 02:11 pm
Prajwal Revanna sex case, Devaraje Gowda: ಪ್ರ...
10-05-24 11:01 pm
Breaking Kodagu SSLC girl Murder, Accused sui...
10-05-24 10:11 pm
Prajwal Revanna, arrest, videos: ಚಿಕ್ಕಮಗಳೂರು...
10-05-24 06:48 pm
11-05-24 03:13 pm
HK News Desk
Ram Mandir, Nana Patole, Nrendra modi: ಮೋದಿಯಿ...
10-05-24 10:05 pm
Arvind Kejriwal, Supreme court: ಸಿಎಂ ಕೇಜ್ರಿವಾ...
10-05-24 03:46 pm
Kerala Arali Flower death: ಮೊಬೈಲ್ ನಲ್ಲಿ ಮಾತನಾ...
10-05-24 10:06 am
Hindu population in India: ಭಾರತದಲ್ಲಿ ಹಿಂದುಗಳ...
09-05-24 07:59 pm
11-05-24 01:33 pm
Udupi Correspondent
Thumbe reservoir, Mangalore: ತುಂಬೆ ಡ್ಯಾಮಿನಲ್ಲ...
11-05-24 12:25 pm
Praveen Nettaru, NIA arrest: ಸಕಲೇಶಪುರದಲ್ಲಿ ಶು...
10-05-24 10:45 pm
Puttur, crime, Mangalore: ಕುಡಿತದ ಚಟಕ್ಕೆ ಬಿದ್ದ...
10-05-24 10:16 pm
Dubai Mangalore flight, Airport, Bajpe: ದುಬೈನ...
10-05-24 09:22 pm
10-05-24 05:04 pm
Bangalore Correspondent
Kalaburgi youth murdered: ಕಲಬುರಗಿ ; ಕಾಂಗ್ರೆಸ್...
10-05-24 02:04 pm
Cyber fraud Kodagu, Kerala, Sim card: ಸೈಬರ್ ವ...
10-05-24 12:44 pm
NIA arrests Mustafa Paichar, Praveen Nettaru...
10-05-24 11:53 am
Kodagu Murder, SSLC Student: ಕೊಡಗಿನಲ್ಲಿ SSLC...
10-05-24 10:16 am