ಕಾಸರಗೋಡು ; ಕೆರೆಗೆ ಸ್ನಾನಕ್ಕಿಳಿದ ಹಾಸನ ಮೂಲದ ಕಾರ್ಮಿಕ ಸಾವು

03-06-21 10:43 am       Headline Karnataka News Network   ದೇಶ - ವಿದೇಶ

ಕೆರೆಯಲ್ಲಿ ಸ್ನಾನಕ್ಕಿಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತೃಕ್ಕರಿಪುರದಲ್ಲಿ ನಡೆದಿದೆ.

ಕಾಸರಗೋಡು, ಜೂ.3: ಕೆರೆಯಲ್ಲಿ ಸ್ನಾನಕ್ಕಿಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತೃಕ್ಕರಿಪುರದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಮೂಲದ ಕೂಲಿ ಕಾರ್ಮಿಕ ರಮೇಶ್(56) ಮೃತಪಟ್ಟವರು. 

ಕೂಲಿ ಕಾರ್ಮಿಕರಾಗಿದ್ದ ರಮೇಶ್, ತನ್ನ ಕುಟುಂಬದ ಜೊತೆ ತೃಕ್ಕರಿಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಬುಧವಾರ ಸಂಜೆ ಕೆಲಸ ಮುಗಿಸಿ ಬಂದು ಮನೆ ಸಮೀಪದ ಕೆರೆಗೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಗ್ನಿಶಾಮಕ ದಳದ ಸಿಬಂದಿಗಳು ಆಗಮಿಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. 

ಮೃತದೇಹವನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪೋಸ್ಟ್ ಮಾರ್ಟಂ ಮಾಡಲಾಗಿದ್ದು ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಘಟನೆ ಬಗ್ಗೆ ಹಾಸನ ದಲ್ಲಿರುವ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಚಂದೇರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

A man from Hassan drowned in the Kasaragod river found dead. The deceased has been identified as Ramesh (56).