ಪುಲ್ವಾಮಾದಲ್ಲಿ ಮತ್ತೆ ಉಗ್ರರ ಅಟ್ಟಹಾಸ ; ಗುಂಡಿನ ದಾಳಿಗೆ ಬಿಜೆಪಿ ಕೌನ್ಸಿಲರ್ ಬಲಿ

03-06-21 10:57 am       Headline Karnataka News Network   ದೇಶ - ವಿದೇಶ

ಪುಲ್ವಾಮ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದು ಗುಂಡಿನ ದಾಳಿಗೆ ಬಿಜೆಪಿಯ ಕೌನ್ಸಿಲರ್ ರಾಕೇಶ್ ಪಂಡಿತ್ ಬಲಿಯಾಗಿದ್ದಾರೆ.

ಶ್ರೀನಗರ, ಜೂನ್ 3: ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದು ಗುಂಡಿನ ದಾಳಿಗೆ ಬಿಜೆಪಿಯ ಕೌನ್ಸಿಲರ್ ಬಲಿಯಾಗಿದ್ದಾರೆ.

ರಾಕೇಶ್ ಪಂಡಿತ್ ಮೃತಪಟ್ಟ ಬಿಜೆಪಿ ಕೌನ್ಸಿಲರ್ ಆಗಿದ್ದಾರೆ. ಗುಂಡಿನ ದಾಳಿಯಿಂದ ಗಂಭೀರ ಸ್ಥಿತಿಯಲ್ಲಿದ್ದ ರಾಕೇಶ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದಾರೆ. ಕೂಡಲೇ ಭದ್ರತಾ ಪಡೆಗಳು ದಾಳಿ ನಡೆದ ಸ್ಥಳವನ್ನು ಸುತ್ತುವರಿದಿದ್ದು, ದಾಳಿಕೋರರನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. 

ಪೊಲೀಸರ ಮಾಹಿತಿ ಪ್ರಕಾರ ರಾಕೇಶ್ ತಮ್ಮ ಸ್ನೇಹಿತ ಮುಶ್ತಾಕ್ ಭಟ್ ಎಂಬವರನ್ನು ಭೇಟಿಯಾಗಲು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಗುಂಡಿನ ದಾಳಿಯನ್ನು ನಡೆಸಲಾಗಿದ್ದು ದಾಳಿಯಲ್ಲಿ ಮುಶ್ತಾಕ್ ಭಟ್ ಪುತ್ರಿಗೂ ಗಂಭೀರ ಗಾಯಗಳಾಗಿದೆ. 

ಕೌನ್ಸಿಲರ್ ರಾಕೇಶ್ ಶ್ರೀನಗರದಲ್ಲಿ ವಾಸವಿದ್ದರು. ಅವರ ರಕ್ಷಣೆಗಾಗಿ ಇಬ್ಬರು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಘಟನೆ ನಡೆದ ಸಂದರ್ಭದಲ್ಲಿ ರಾಕೇಶ್ ಜೊತೆಗೆ ಭದ್ರತಾ ಸಿಬ್ಬಂದಿ ಇರಲಿಲ್ಲ ಎನ್ನಲಾಗಿದೆ.

BJP leader Rakesh Pandita was shot dead by militants late on Wednesday evening in south Kashmir’s Tral area. Pandit, a municipal chairman of Tral in Pulwama district, was visiting a friend, Mushtaq Ahmad when three terrorists opened fire at them. His friend’s daughter, Asifa Mushtaq, was also hit and is battling for life.