ಬ್ರೇಕಿಂಗ್ ನ್ಯೂಸ್
10-06-21 09:36 pm Headline Karnataka News Network ದೇಶ - ವಿದೇಶ
ಕೊಚ್ಚಿ, ಜೂನ್ 10: ಮರಳಿ ಬರುತ್ತೇನೆಂದು ಆತ ಕನಸಿನಲ್ಲೂ ಎಣಿಸಿರಲಿಲ್ಲ. ಗಲ್ಫ್ ರಾಷ್ಟ್ರದಲ್ಲಿ ಗಲ್ಲು ಶಿಕ್ಷೆಯಾದರೆ, ಅಲ್ಲಿನ ಪ್ರಜೆಯೇ ಆದರೂ ಬದುಕಿ ಬರುವುದು ಕನಸಿನ ಮಾತು. ಅಂಥದ್ರಲ್ಲಿ ಭಾರತೀಯ ಪ್ರಜೆ ಮರಳಿ ಬರುವುದುಂಟೇ.. ಆದರೆ, ಕೇರಳ ಮೂಲದ 45ರ ಯುವಕ ಗಲ್ಪ್ ಉದ್ಯಮಿಯೊಬ್ಬರ ಕೃಪೆಯಿಂದ ಕೊನೆಗೂ ಬದುಕಿ ಬಂದಿದ್ದಾನೆ.
ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬೆಕ್ಸ್ ಕೃಷ್ಣನ್ ಬಾಯಲ್ಲಿ ಉದುರಿದ್ದು ಒಂದೇ ಮಾತು. ಇದು ನನಗೆ ಪುನರ್ಜನ್ಮ. ನನ್ನ ಪಾಲಿಗೆ ಇದು ಜೀವನದ ಹೊಸ ಅಧ್ಯಾಯ. ಯೂಸುಫ್ ಆಲಿಯವರ ಕೃಪೆಯಿಂದಾಗಿ ಬದುಕಿ ಬಂದಿದ್ದೇನೆ. ನಾನು ನನ್ನ ಕುಟುಂಬವನ್ನು ಮರಳಿ ನೋಡುತ್ತೇನೆಂಬ ಯಾವ ಭರವಸೆಯೂ ಇರಲಿಲ್ಲ ಎಂದು ಹೇಳಿದರು.


ಅಬುಧಾಬಿಯ ಕಂಪನಿಯೊಂದರಲ್ಲಿ ಚಾಲಕ ವೃತ್ತಿಯಲ್ಲಿದ್ದ ಕೃಷ್ಣನ್, 2012ರಲ್ಲಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅಪಘಾತ ನಡೆದು ಸುಡಾನ್ ಮೂಲದ ಬಾಲಕ ಮೃತಪಟ್ಟಿದ್ದ. ಇದಕ್ಕೆ ಸಿಸಿಟಿವಿಯೂ ಲಭ್ಯವಾಗಿದ್ದರಿಂದ ಅಲ್ಲಿನ ಕೋರ್ಟ್, ಚಾಲಕನ ತಪ್ಪನ್ನು ಪರಿಗಣಿಸಿ ಗಲ್ಲು ಶಿಕ್ಷೆ ವಿಧಿಸಿತ್ತು. ಅಬುಧಾಬಿಯ ಸುಪ್ರೀಂ ಕೋರ್ಟ್ ಶಿಕ್ಷೆ ನೀಡಿದ ಮೇಲೆ ಏನೂ ಮಾಡುವಂತಿರಲಿಲ್ಲ.


ಈ ನಡುವೆ, ಕೃಷ್ಣನ್ ಕುಟುಂಬಸ್ಥರು ಹಲವರ ಬಳಿಗೆ ಹೋಗಿ ಯುವಕನನ್ನು ಕಾಪಾಡುವಂತೆ ಕೇಳಿಕೊಂಡಿದ್ದರು. ಕೇರಳ ಮೂಲದ ದುಬೈ ಉದ್ಯಮಿ, ಲುಲು ಮಾರ್ಕೆಟ್ ಮಾಲೀಕ ಯೂಸುಫ್ ಆಲಿಯವರನ್ನೂ ಸಂಪರ್ಕಿಸಿ, ಸಹಾಯ ಕೇಳಿದ್ದರು. ಈ ವೇಳೆ, ದುಬೈ ಕಾನೂನಿನ ಪ್ರಕಾರ ಗಲ್ಲು ಶಿಕ್ಷೆಯಾದರೆ ಅದನ್ನು ರದ್ದುಪಡಿಸುವಂತಿಲ್ಲ. ಆದರೆ, ದೂರು ನೀಡಿದವರೇ ನಿಮ್ಮನ್ನು ಕಾಯಬೇಕು. ಅವರೊಂದ್ವೇಳೆ ದೂರು ಹಿಂಪಡೆದರೆ ಗಲ್ಲು ರದ್ದು ಆಗಬಹುದು ಎಂದಿದ್ದರು.

ಅದರಂತೆ, ಕೃಷ್ಣನ್ ಕುಟುಂಬಸ್ಥರನ್ನು ಅಬುಧಾಬಿಗೆ ಕರೆಸಿಕೊಳ್ಳಲು ಸ್ವತಃ ಯೂಸುಫ್ ಆಲಿಯವರೇ ವ್ಯವಸ್ಥೆ ಮಾಡಿದ್ದರು. ಮೃತ ಬಾಲಕನ ಕುಟುಂಬವನ್ನು ಭೇಟಿಯಾಗಿ ಕೃಷ್ಣನ್ ಕುಟುಂಬ ತಪ್ಪು ಕೇಳಿಕೊಂಡಿದ್ದರು. ಅಚಾನಕ್ ತಪ್ಪಿನಿಂದಾದ ಪ್ರಮಾದಕ್ಕೆ ಕ್ಷಮೆ ಕೊಡಿ ಎಂದು ಅಂಗಲಾಚಿದರು. ಯೂಸುಫ್ ಆಲಿಯವರು ಕೂಡ ಕೃಷ್ಣನ್ ಕುಟುಂಬದ ಪರವಾಗಿ ಕ್ಷಮೆ ನೀಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಬದಲಾಗಿ, ಉದ್ಯಮಿ ಯೂಸುಫ್ ಆಲಿಯವರು ಕುಟುಂಬಕ್ಕೆ ಹಣದ ಪರಿಹಾರ ನೀಡುವ ಭರವಸೆ ನೀಡಿದ್ದರು. ಅದರಂತೆ, ಸುಡಾನ್ ಕುಟುಂಬ ಎರಡು ತಿಂಗಳ ಹಿಂದೆ ಕೊನೆಗೂ ದೂರನ್ನು ಹಿಂಪಡೆದಿತ್ತು. ಪ್ರತಿಯಾಗಿ ಸುಡಾನ್ ಮೂಲದ ಬಾಲಕನ ಕುಟುಂಬಕ್ಕೆ 5 ಲಕ್ಷ ದಿರ್ಹಮ್ (ಒಂದು ಕೋಟಿ ರೂ.) ಯೂಸುಫ್ ಆಲಿಯವರು ಬ್ಲಡ್ ಮನಿ ರೂಪದಲ್ಲಿ ಪರಿಹಾರದ ಮೊತ್ತ ನೀಡಿದ್ದರು.

ಕಳೆದ ಜನವರಿಯಲ್ಲಿ ಯೂಸುಫ್ ಆಲಿಯವರು ಅಲ್ಲಿನ ಕೋರ್ಟಿನಲ್ಲಿ ಹಣವನ್ನು ಡಿಪಾಸಿಟ್ ಮಾಡಿದ್ದರು. ಕೋರ್ಟ್ ಪರಿಹಾರದ ಮೊತ್ತವನ್ನು ಸಂತ್ರಸ್ತ ಕುಟುಂಬದ ಹೆಸರಲ್ಲಿ ಡಿಪಾಸಿಟ್ ಮಾಡಿದ ಬಳಿಕ, ಆರೋಪಿಯನ್ನು ಬಿಡುಗಡೆ ಮಾಡಿತ್ತು. ಅದರಂತೆ, ಜೈಲಿನ ಪ್ರಕ್ರಿಯೆ ನಡೆದು ಮೊನ್ನೆ ಜೂನ್ 3ರಂದು ಅಬುಧಾಬಿ ಜೈಲಿನಿಂದ ಕೃಷ್ಣನ್ ಬಿಡುಗಡೆಯಾಗಿದ್ದ. ಆನಂತರ, ಪಾಸ್ಪೋರ್ಟ್ ರೆಡಿ ಮಾಡಿಸಿ, ಯೂಸುಫ್ ಆಲಿಯವರೇ ಇಂದು ಕೊಚ್ಚಿಗೆ ತಲುಪಿಸಿದ್ದಾರೆ. ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪತ್ನಿ ವೀಣಾ ಮತ್ತು ಹತ್ತು ವರ್ಷದ ಮಗ, ಪುನರ್ಜನ್ಮ ಎತ್ತಿ ಬಂದ ಕೃಷ್ಣನ್ ಅವರನ್ನು ಸ್ವಾಗತಿಸಿದ್ದು ಭಾವುಕ ಕ್ಷಣಗಳನ್ನು ಸೃಷ್ಟಿಸಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯೂಸುಫ್ ಆಲಿ, ಇದು ಮಾನವೀಯತೆಯ ಪ್ರಶ್ನೆ. ನಾನು ನನ್ನ ಕರ್ತವ್ಯ ಮಾಡಿದ್ದೇನೆ ಅಷ್ಟೇ. ದುರದೃಷ್ಟಕ್ಕೆ ಬಿದ್ದು ಕಷ್ಟದಲ್ಲಿ ಸಿಲುಕಿದ್ದವನಿಗೆ ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾರೆ.
Abu Dhabi A 45-year-old Keralite, who was on death row in the United Arab Emirates for killing a young Sudanese boy in a road accident in 2012, can't believe that he will be a free man and can return to the country to be with his family.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm