ಬ್ರೇಕಿಂಗ್ ನ್ಯೂಸ್
11-06-21 04:28 pm Headline Karnataka News Network ದೇಶ - ವಿದೇಶ
ಕೊಲ್ಕತ್ತಾ, ಜೂನ್ 11: ಬಾಂಗ್ಲಾದೇಶ ಮೂಲಕ ಅಕ್ರಮವಾಗಿ ಭಾರತಕ್ಕೆ ನುಸುಳಲು ಯತ್ನಿಸಿದ್ದ ಚೀನಾ ಮೂಲದ ಶಂಕಿತ ಗೂಢಚರನನ್ನು ಗಡಿಭದ್ರತಾ ಪಡೆಯ ಯೋಧರು ಬಂಧಿಸಿದ್ದಾರೆ. ಚೈನಾದ ಹುಬೈ ಪ್ರಾಂತದ ನಿವಾಸಿ ಹ್ಯಾನ್ ಜೂನ್ (36) ಬಂಧಿತ ವ್ಯಕ್ತಿ.
ಚೀನಾ ಪರವಾಗಿ ಭಾರತದಲ್ಲಿ ಗೂಢಚಾರಿಕೆ ನಡೆಸುತ್ತಿದ್ದ ವ್ಯಕ್ತಿಯ ಬಂಧನ ಬಿಎಸ್ಎಫ್ ಪಾಲಿಗೆ ದೊಡ್ಡ ಗೆಲುವು ಎಂದು ಗಡಿಭದ್ರತಾ ಪಡೆ ಹೇಳಿಕೊಂಡಿದೆ. ಈತ ಜೂನ್ 2ರಂದು ಬಾಂಗ್ಲಾದೇಶದ ರಾಜಧಾನಿ ಢಾಕಾಕ್ಕೆ ಬಂದಿದ್ದ. ಅಲ್ಲಿ ತನ್ನ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದ. ಬಳಿಕ ಪಶ್ಚಿಮ ಬಂಗಾಳದ ಗಡಿಜಿಲ್ಲೆ ಮಾಲ್ಡಾ ಮೂಲಕ ಭಾರತ ಪ್ರವೇಶ ಮಾಡುತ್ತಿದ್ದಾಗ ಗಡಿಭದ್ರತಾ ಪಡೆಯ ಕಣ್ಣಿಗೆ ಬಿದ್ದಿದ್ದು ವಿಚಾರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ಹ್ಯಾನ್ ಜೂನ್ ವಿಚಾರಣೆ ವೇಳೆ ಆತನ ಬಳಿ ನಿಗೂಢ ರೀತಿಯ ಇಲೆಕ್ಟ್ರಾನಿಕ್ ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ಚೀನಾದ ವ್ಯಕ್ತಿ ಭಾರತದಲ್ಲಿದ್ದುಕೊಂಡು ಗೂಢಚಾರಿಕೆ ನಡೆಸುತ್ತಿದ್ದಾನೆಯೇ ಎನ್ನುವ ಅನುಮಾನ ಉಂಟಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ನಾಲ್ಕು ಬಾರಿ ಭಾರತಕ್ಕೆ ಬಂದಿದ್ದಾಗಿ ಹ್ಯಾನ್ ಜೂನ್ ಹೇಳಿದ್ದು, ಉತ್ತರ ಪ್ರದೇಶದ ಗುರ್ ಗ್ರಾಮ್ ನಲ್ಲಿ ಸ್ಟಾರ್ ಸ್ಪ್ರಿಂಗ್ ಎನ್ನುವ ಹೆಸರಿನ ಹೊಟೇಲ್ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಉತ್ತರ ಪ್ರದೇಶದಲ್ಲಿ ಈತನ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಬಾಂಗ್ಲಾ ಗಡಿಭಾಗ ಮಾಲಿಕ್ ಸುಲ್ತಾನ್ ಪುರ್ ಔಟ್ ಪೋಸ್ಟ್ ಮೂಲಕ ಕಾರಿನಲ್ಲಿ ಬಂದಿದ್ದ ಚೀನಾದ ವ್ಯಕ್ತಿಯನ್ನು ನಿಲ್ಲಿಸಿ ವಿಚಾರಣೆ ನಡೆಸಲು ಯತ್ನಿಸಿದಾಗ, ಕಾರಿನಲ್ಲಿ ಎಸ್ಕೇಪ್ ಆಗಿದ್ದಾನೆ. ಕೂಡಲೇ ಸ್ಥಳೀಯ ಪೊಲೀಸರು ಬೆನ್ನಟ್ಟಿ ಹಿಡಿದಿದ್ದು, ವಿಚಾರಣೆ ನಡೆಸಿದ್ದಾರೆ. ಪಾಸ್ಪೋರ್ಟ್ ಪರಿಶೀಲನೆ ನಡೆಸಿದಾಗ ಬಿಸಿನೆಸ್ ವೀಸಾದಲ್ಲಿ ಜೂನ್ 2ರಂದು ಢಾಕಾಕ್ಕೆ ಬಂದಿದ್ದು ಗೊತ್ತಾಗಿದೆ.
ಪರಿಶೀಲನೆ ವೇಳೆ ನಾಲ್ಕು ಬಾರಿ ಭಾರತಕ್ಕೆ ಬಂದಿದ್ದು ಗೊತ್ತಾಗಿದ್ದು, ದೆಹಲಿ, ಗುರುಗ್ರಾಮ್, ಹೈದರಾಬಾದ್ ನಲ್ಲಿ ಇದ್ದುದು ತಿಳಿದುಬಂದಿದೆ. ಕೆಲವು ದಿನಗಳ ಹಿಂದೆ ಹ್ಯಾನ್ ಜೂನ್ ಜೊತೆಗೆ ಪಾರ್ಟ್ನರ್ ಆಗಿದ್ದ ಸೂನ್ ಜಿಯಾಂಗ್, ಎಟಿಎಸ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಆತನ ಜೊತೆಗೆ ನಿಕಟ ನೆಟ್ವರ್ಕ್ ಹೊಂದಿದ್ದ ಕಾರಣ ಹ್ಯಾನ್ ಜೂನ್ ಹೆಸರನ್ನು ಪೊಲೀಸರಿಗೆ ತಿಳಿಸಿದ್ದ. ಇದೇ ಕಾರಣದಿಂದ ಚೀನಾದಲ್ಲಿದ್ದ ಹ್ಯಾನ್ ಜೂನ್ ಭಾರತಕ್ಕೆ ಮರಳಲು ಪಾಸ್ಪೋರ್ಟ್ ಸಿಕ್ಕಿರಲಿಲ್ಲ. ಇದರಿಂದಾಗಿ ಬಾಂಗ್ಲಾದೇಶದ ಢಾಕಾಕ್ಕೆ ಬಂದು ಭಾರತಕ್ಕೆ ಒಳನುಸುಳಿದ್ದ ಅನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.
The Border Security Force nabbed a Chinese intruder attempting to enter India through the Bangladesh border, who has been identified as a wanted criminal
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm