ಬ್ರೇಕಿಂಗ್ ನ್ಯೂಸ್
13-06-21 01:44 pm Headline Karnataka News Network ದೇಶ - ವಿದೇಶ
ಪ್ರತಾಪಗಢ, ಜೂನ್ 13: ಕೊರೊನಾ ಮಹಾಮಾರಿ ಇಡೀ ಜಗತ್ತಿಗೆ ಹೆಮ್ಮಾರಿಯಾಗಿ ಪರಿಣಮಿಸಿದ್ದರೆ, ಇಲ್ಲೊಂದು ಗ್ರಾಮದಲ್ಲಿ ಗ್ರಾಮಸ್ಥರೇ ಸೇರಿ ಕೊರೊನಾ ಮಾತೆಯ ಹೆಸರಲ್ಲಿ ಗುಡಿ ಕಟ್ಟಿ ಸುದ್ದಿಯಾಗಿದ್ದಾರೆ.
ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಜೂಹಿ ಶುಕಲ್ಪುರ್ ಗ್ರಾಮದಲ್ಲಿ ಗ್ರಾಮಸ್ಥರು ಸೇರಿ ಕೊರೊನಾ ಮಾತೆಗೆ ಗುಡಿ ಕಟ್ಟಿದ್ದಾರೆ. ಲೋಕೇಶ್ ಕುಮಾರ್ ಶ್ರೀವಾಸ್ತವ ಎಂಬಾತ ಗ್ರಾಮಸ್ಥರ ಸಹಕಾರದಲ್ಲಿ ಗುಡಿ ಕಟ್ಟಿದ್ದಾನೆ. ಕೊರೊನಾ ಮಾತೆಯ ಹೆಸರಲ್ಲಿ ವಿಗ್ರಹವನ್ನೂ ಸ್ಥಾಪನೆ ಮಾಡಿದ್ದ. ಗ್ರಾಮದ ನಿವಾಸಿ ರಾಧೇಶ್ಯಾಮ್ ವರ್ಮ ಎಂಬ ಅರ್ಚಕನನ್ನು ಕೊರೊನಾ ದೇವಿಯ ಪೂಜೆಗೆ ನೇಮಕ ಮಾಡಲಾಗಿತ್ತು. ಸ್ಥಳೀಯ ಜನರು ಕೊರೊನಾ ದೇವಿಯನ್ನು ಪೂಜಿಸಿ, ಜಗತ್ತಿಗೆ ಕವಿದ ಕತ್ತಲೆಯನ್ನು ನೀಗಿಸು ಎಂದು ಪ್ರಾರ್ಥಿಸಲು ತೊಡಗಿದ್ದರು.

ಆದರೆ, ಗುಡಿ ಕಟ್ಟಿ ನಾಲ್ಕು ದಿನಗಳಾಗುವಷ್ಟರಲ್ಲಿ ಜಾಗದ ವಾರೀಸುದಾರರು ತಕರಾರು ತೆಗೆದಿದ್ದಾರೆ. ಆ ಜಾಗ ನಾಗೇಶ್ ಕುಮಾರ್ ಶ್ರೀವಾಸ್ತವ ಮತ್ತು ಜೈ ಪ್ರಕಾಶ್ ಶ್ರೀವಾಸ್ತವ ಎಂಬವರಿಗೆ ಸೇರಿದ್ದೆಂದು ಅವರು ಪೊಲೀಸ್ ದೂರು ನೀಡಿದ್ದಾರೆ. ಇಷ್ಟಾಗುತ್ತಿದ್ದಂತೆ ಗುಡಿ ಕಟ್ಟಲು ಮುಂಚೂಣಿಯಲ್ಲಿ ನಿಂತಿದ್ದ ಲೋಕೇಶ್ ಕುಮಾರ್ ನಾಪತ್ತೆಯಾಗಿದ್ದಾನೆ. ಲೋಕೇಶ್ ಇದೇ ಊರಿನ ವ್ಯಕ್ತಿಯಾಗಿದ್ದರೂ, ದೆಹಲಿ ಸಮೀಪದ ನೋಯ್ಡಾದಲ್ಲಿ ನೆಲೆಸಿದ್ದ.
ತಮ್ಮ ಜಾಗವನ್ನು ಕಬಳಿಸಲು ಗುಡಿ ಕಟ್ಟಲಾಗಿದೆ ಎಂದು ನಾಗೇಶ್ ಮತ್ತು ಸೋದರ ಪೊಲೀಸರಿಗೆ ದೂರು ನೀಡಿದ್ದರು. ವಿವಾದಿತ ಜಾಗದಲ್ಲಿ ಗುಡಿ ಕಟ್ಟಲಾಗಿತ್ತು. ಗುಡಿ ನಿರ್ಮಾಣದಲ್ಲಿ ಈ ಜಾಗಕ್ಕೆ ಸೇರಿದ ವ್ಯಕ್ತಿಗಳು ಕೂಡ ಶಾಮೀಲಾಗಿದ್ದಾರೆ. ಗುಡಿಯ ಅಕ್ರಮ ನಿರ್ಮಾಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಸಂಗೀಪುರ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಆದರೆ, ಅತ್ತ ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಮತ್ತೊಂದು ಗುಂಪು ಕೊರೊನಾ ದೇವಿಯ ಗುಡಿಯನ್ನು ಒಡೆದು ಹಾಕಿದೆ.
People at Juhi Shukulpur village here built a "corona mata" temple, seeking divine grace to stay clear of the infection. However, the temple built on June 7 was demolished on Friday night.
20-03-26 06:10 pm
HK News Staffer
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
20-03-26 11:26 pm
HK News Staffer
ಮಂಗಳೂರು ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ, ಇವರದ್...
20-03-26 09:44 pm
Peace Festival in Udupi Amid Protests; High C...
20-03-26 07:54 pm
Mohan C Lazarus Udupi, Protest: ಹಿಂಜಾವೇ ಪ್ರತಿ...
20-03-26 07:36 pm
Sandesh PG, Inspector: ಮೂಡುಬಿದ್ರೆ ಇನ್ಸ್ ಪೆಕ್ಟ...
20-03-26 06:56 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm