ಬ್ರೇಕಿಂಗ್ ನ್ಯೂಸ್
15-06-21 12:52 pm Headline Karnataka News Network ದೇಶ - ವಿದೇಶ
ಚೆನ್ನೈ, ಜೂನ್ 15 : ತಮಿಳುನಾಡಿನಲ್ಲಿ ಹೇರಲಾಗಿದ್ದ ಲಾಕ್ಡೌನ್ ಆದೇಶವನ್ನು ಜೂನ್ 21ರ ತನಕ ವಿಸ್ತರಣೆ ಮಾಡಲಾಗಿದೆ. ಆದರೆ, ಕೆಲವು ನಿಯಮಗಳನ್ನು ಸಡಿಲಿಸಿದ್ದಲ್ಲದೆ, ಮದ್ಯ ಮಾರಾಟಕ್ಕೂ ಅವಕಾಶ ನೀಡಲಾಗಿದೆ.
ಕೊರೊನಾ ಸೋಂಕು ಕಡಿಮೆಯಿರುವ 27 ಜಿಲ್ಲೆಗಳಲ್ಲಿ ಸರ್ಕಾರದ ಅಧೀನದಲ್ಲಿರುವ ಬಾರ್, ವೈನ್ ಶಾಪ್ಗಳನ್ನು ತೆರೆಯಲು ಮುಖ್ಯಮಂತ್ರಿ ಸ್ಟಾಲಿನ್ ಸಮ್ಮತಿ ಸೂಚಿಸಿದ್ದಾರೆ. ವಿರೋಧ ಪಕ್ಷಗಳ ವಿರೋಧಗಳ ನಡುವೆಯೇ ರಾಜ್ಯ ಸರಕಾರ ಮದ್ಯ ಮಾರಾಟಕ್ಕೆ ವಿನಾಯ್ತಿ ನೀಡಿದೆ. ಇದರಿಂದ ಮದ್ಯಪ್ರಿಯರು ಖುಷ್ ಆಗಿದ್ದು ಅದಕ್ಕೆ ಸಾಕ್ಷಿಯೆಂಬಂತೆ, ವ್ಯಕ್ತಿಯೊಬ್ಬ ಮದ್ಯದ ಬಾಟಲಿಗೆ ಚುಂಬಿಸಿ, ಆರತಿ ಬೆಳಗಿ ಪೂಜೆ ಮಾಡುವ ದೃಶ್ಯದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
#WATCH | A local in Madurai worships bottles of liquor after Tamil Nadu govt permits the reopening of liquor shops in the state pic.twitter.com/sIp9LUR0GM
— ANI (@ANI) June 14, 2021
ತಮಿಳುನಾಡಿನ ಮದುರೈ ಪಟ್ಟಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮದ್ಯದ ಮಳಿಗೆ ತೆರೆದಿರುವುದನ್ನು ಕಂಡು ಸಂತಸಗೊಂಡ ವ್ಯಕ್ತಿಯೊಬ್ಬ ವಿಭಿನ್ನವಾಗಿ ಖುಷಿ ವ್ಯಕ್ತಪಡಿಸಿದ್ದಾನೆ. ಮೊದಲಿಗೆ ಆರತಿಯನ್ನು ಹಚ್ಚಿ ಅಂಗಡಿ ಮುಂದಿಟ್ಟ ಆತ, ಮದ್ಯ ಖರೀದಿಸಿ ಬಾಟಲಿಗಳಿಗೆ ಮುತ್ತು ಕೊಟ್ಟಿದ್ದಾನೆ. ಆಮೇಲೆ, ಆರತಿ ಮತ್ತು ಬಾಟಲಿಯನ್ನು ಮದ್ಯದಂಗಡಿ ಮುಂದಿಟ್ಟು ನಮಸ್ಕರಿಸಿದ್ದಾನೆ.
ಆತ ಮದ್ಯದ ಬಾಟಲಿಗಳಿಗೆ ಆರತಿ ಬೆಳಗಿ ಪೂಜಿಸುವುದನ್ನು ನೋಡಿದ ಇನ್ನೋರ್ವ ವ್ಯಕ್ತಿಯೂ ತಾನು ಖರೀದಿಸಿದ ಬಾಟಲಿಯನ್ನು ಪಕ್ಕದಲ್ಲಿಟ್ಟು ನಮಸ್ಕರಿಸಿ ತೆರಳಿದ್ದಾನೆ. ಈ ವ್ಯಕ್ತಿ ಮಾತ್ರ ಅದ್ಯಾವುದರ ಪರಿವೇ ಇಲ್ಲವೆಂಬಂತೆ ಎರಡೂ ಕೈಗಳಿಂದ ಬಾಟಲಿಗಳನ್ನು ಎತ್ತಿ ಹಿಡಿದು, ನೆರೆದವರಿಗೆಲ್ಲರಿಗೂ ತೋರಿಸಿ ಬಳಿಕ ಕೆಳಗಿಟ್ಟು, ಶ್ರದ್ಧೆಯಿಂದ ನಾಲ್ಕೈದು ಬಾರಿ ನಮಸ್ಕಾರ ಮಾಡಿದ್ದಾನೆ.
ಇದರ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಿಳಿ ಅಂಗಿ, ಬಿಳಿ ಪಂಚೆ ತೊಟ್ಟು ಮದ್ಯದಂಗಡಿ ಮುಂದೆಯೇ ಬಾಟಲಿಗಳಿಗೆ ಪೂಜೆ ಸಲ್ಲಿಸಿರುವ ಈ ವ್ಯಕ್ತಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯನಾಗುತ್ತಿರುವುದರ ಜೊತೆಗೆ ಹಾಸ್ಯಾಸ್ಪದನಾಗಿಯೂ ಕಂಡಿದ್ದಾನೆ.
After the Tamil Nadu government decided to open the liquor shops in 27 districts for a limited period of time, a unique incident from Madurai has gone viral. The Tamil Nadu government extended the statewide lockdown till June 29. However, the administration has announced several relaxations, and the opening of Tamil Nadu State Marketing Corporation (TASMAC) liquor stores is one of them.
27-04-24 07:50 pm
HK News Desk
Work From Traffic, Bangalore: ಬೆಂಗಳೂರು ಟ್ರಾಫಿ...
27-04-24 06:55 pm
Accident in Kalaburagi: ಕಲಬುರಗಿಯಲ್ಲಿ ಭೀಕರ ರಸ...
27-04-24 03:30 pm
Snake bite, Bangalore: ಆಟ ಆಡುತ್ತಿದ್ದಾಗ ಕಚ್ಚಿದ...
27-04-24 02:10 pm
ರಾಜ್ಯದ 14 ಕ್ಷೇತ್ರದಲ್ಲಿ ಶೇ. 69.23ರಷ್ಟು ಮತದಾನ,...
26-04-24 11:17 pm
27-04-24 05:46 pm
HK News Desk
Sunny Leone in Kasaragod: ಮಾದಕ ನಟಿ ಸನ್ನಿ ಲಿಯೋ...
27-04-24 03:13 pm
Arvind Kejriwal, Delhi High Court : ಜೈಲಿನಲ್ಲಿ...
27-04-24 02:20 pm
ಅಗ್ನಿ ಅವಘಡ ; ನವ ದಂಪತಿ ಸೇರಿ 6 ಮಂದಿ ಸಜೀವ ದಹನ, ಮ...
26-04-24 02:58 pm
Road Accident In Telangana: ಹಾಳಾಗಿ ನಿಂತಿದ್ದ ಲ...
25-04-24 03:49 pm
27-04-24 06:40 pm
Mangalore Correspondent
Kadaba Wedding, Mangalore: ತಾಳಿ ಕಟ್ಟುವ ಶುಭ ವೇ...
27-04-24 05:31 pm
Sullia Banjarumale, Voting: ಪಶ್ಚಿಮ ಘಟ್ಟಗಳ ನಡು...
26-04-24 10:45 pm
Mangalore Voting, Election 2024; ದಕ್ಷಿಣ ಕನ್ನಡ...
26-04-24 10:32 pm
Karkala, Horse ride to cast his vote: ಕಾರ್ಕಳ...
26-04-24 09:28 pm
27-04-24 02:53 pm
HK News Desk
Bangalore crime, Divorce: ಇನ್ನೊಬ್ಬಳ ಜೊತೆ ಪತಿಯ...
27-04-24 01:37 pm
Mangalore crime, stabbed, Pawan: ಫರಂಗಿಪೇಟೆ ;...
26-04-24 03:59 pm
Mangalore Fraud, crime, Krishnaprasad Shetty:...
25-04-24 10:18 pm
Bangalore crime, Dacoity gang, 40 lakhs, robb...
25-04-24 03:33 pm