ವ್ಯಾಕ್ಸಿನ್ ಭಯ ; 22 ವರ್ಷದ ಯುವಕ ಲಸಿಕೆಗೆ ಹೆದರಿ ಕೀಟಿನಾಶಕ ಔಷಧ ಸೇವಿಸಿ ಆತ್ಮಹತ್ಯೆ

15-06-21 01:03 pm       Headline Karnataka News Network   ದೇಶ - ವಿದೇಶ

22 ವರ್ಷದ ಯುವಕ ಲಸಿಕೆಯ ಬಗ್ಗೆ ತಪ್ಪು ಕಲ್ಪನೆಗಳನ್ನು ಸೃಷ್ಟಿಸಿಕೊಂಡು ವ್ಯಾಕ್ಸಿನ್​ ಹಾಕಿಸಿಕೊಳ್ಳಲು ಭಯಪಡುತ್ತಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹೈದರಾಬಾದ್, ಜೂನ್ 15​: 22 ವರ್ಷದ ಯುವಕ ಲಸಿಕೆಯ ಬಗ್ಗೆ ತಪ್ಪು ಕಲ್ಪನೆಗಳನ್ನು ಸೃಷ್ಟಿಸಿಕೊಂಡು ವ್ಯಾಕ್ಸಿನ್​ ಹಾಕಿಸಿಕೊಳ್ಳಲು ಭಯಪಡುತ್ತಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತನನ್ನು ಶವಿ ಪ್ರಕಾಶ್ ಎಂದು ಗುರುತಿಸಲಾಗಿದೆ.

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಮೂಲದ ಶವಿ ಪ್ರಕಾಶ್​  ಪೋಷಕರೊಂದಿಗೆ ತೆಲಂಗಾಣದ ಹೈದರಾಬಾದ್​​ಗೆ ಬಂದು ವಾಸವಿದ್ದು, ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಕೊರೊನಾ ಲಸಿಕೆ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದ ಆತ ವ್ಯಾಕ್ಸಿನ್​ ಹಾಕಿಸಿಕೊಳ್ಳಲು ಭಯಪಡುತ್ತಿದ್ದ. ಪೋಷಕರು ಲಸಿಕೆ ಪಡೆಯುವಂತೆ ಬಲವಂತ ಮಾಡಿದ್ದು, ಮನೆಯಿಂದ ಹೊರ ಹೋದ ಪ್ರಕಾಶ್​ ಕೀಟಿನಾಶಕ ಸೇವಿಸಿದ್ದಾನೆ

ಮೊನ್ನೆ ಶನಿವಾರ ರಾತ್ರಿಯಿಡೀ ಪೋಷಕರು ಮಗನನ್ನು ಹುಡುಕಿದ್ದು, ಭಾನುವಾರ ಬೆಳಗ್ಗೆ ಮನೆಯಿಂದ ಸ್ವಲ್ಪ ದೂರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ.

ಸಿಬ್ಬಂದಿಕೋವಿಡ್​ ವ್ಯಾಕ್ಸಿನೇಷನ್ ಬಗ್ಗೆ ತೆಲಂಗಾಣ ಸರ್ಕಾರ ಮತ್ತು ಅಧಿಕಾರಿಗಳು ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ ಅನೇಕರು ಹೀಗೆ ಲಸಿಕೆ ಬಗ್ಗೆ ತಪ್ಪು ಕಲ್ಪನೆ ಇಟ್ಟುಕೊಂಡಿದ್ದಾರೆ.

Fear of Covid Vaccination 22-Year-Old Man to Commit Suicide in Hyderabad.