ಬ್ರೇಕಿಂಗ್ ನ್ಯೂಸ್
15-06-21 04:14 pm Headline Karnataka News Network ದೇಶ - ವಿದೇಶ
ನವದೆಹಲಿ, ಜೂನ್ 15: ಕಳೆದ ವರ್ಷ ಚೀನಾ ಜೊತೆಗಿನ ಗಡಿ ಸಂಘರ್ಷಕ್ಕೆ ಕಾರಣವಾಗಿದ್ದ ಗ್ಯಾಲ್ವಾನ್ ಕಣಿವೆಯ ಘರ್ಷಣೆ ಮತ್ತು ದುರಂತದ ಸನ್ನಿವೇಶ ನಡೆದು ಇಂದಿಗೆ ಒಂದು ವರ್ಷ ಪೂರ್ತಿಯಾಗಿದೆ. ಚೀನಾ ಮತ್ತು ಭಾರತದ ಸೇನಾ ಯೋಧರ ನಡುವಿನ ಘರ್ಷಣೆಯಲ್ಲಿ ಕರ್ನಲ್ ಸಂತೋಷ್ ಬಾಬು ಸೇರಿ 20 ಮಂದಿ ಭಾರತೀಯ ಯೋಧರು ಪ್ರಾಣ ಕಳಕೊಂಡಿದ್ದರು.
ಗ್ಯಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಭಾರತೀಯ ಯೋಧರು ಪ್ರಾಣ ಕಳಕೊಂಡಿದ್ದು ದೇಶಾದ್ಯಂತ ಚೀನಾ ವಿರುದ್ಧ ಆಕ್ರೋಶದ ಜ್ವಾಲೆ ಎದ್ದಿತ್ತು. ಚೀನಾ ವಿರುದ್ಧ ಯುದ್ಧ ಸಾರುವಂತೆಯೂ ಒತ್ತಡಗಳು ಕೇಳಿಬಂದಿದ್ದವು. ಆನಂತರ ತಿಂಗಳ ಕಾಲ ಚೀನಾ ಗಡಿಯುದ್ದಕ್ಕೂ ಯುದ್ಧ ಸನ್ನಿವೇಶ ಏರ್ಪಟ್ಟು ಲಡಾಖ್ ಪ್ರಾಂತದಲ್ಲಿ 50 ಸಾವಿರಕ್ಕೂ ಹೆಚ್ಚು ಯೋಧರನ್ನು ನಿಯೋಜನೆ ಮಾಡಲಾಗಿತ್ತು. ಆನಂತರ ಚೀನಾ ಮತ್ತು ಭಾರತದ ಸೇನಾಧಿಕಾರಿಗಳ ಮಟ್ಟದಲ್ಲಿ ಹನ್ನೊಂದು ಬಾರಿ ನಡೆದ ಮಾತುಕತೆಯ ಬಳಿಕ ಸಂಘರ್ಷದ ವಾತಾವರಣಕ್ಕೆ ತೆರೆ ಬಿದ್ದಿತ್ತು.
ಏನಾಗಿತ್ತು ಗ್ಯಾಲ್ವಾನ್ ಕಣಿವೆಯ ಸಂಘರ್ಷ ?
ಅಂದು ಎಂದಿನಂತೆ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಯೋಧರು ಗಸ್ತು ನಿರತರಾಗಿದ್ದರು. ಭಾರತೀಯ ಯೋಧರು ಗಡಿಯಲ್ಲಿ ಗಸ್ತಿನಲ್ಲಿದ್ದಾಗ ಚೀನಾ ಯೋಧರು ಜಟಾಪಟಿಗೆ ಮುಂದಾಗಿದ್ದು ರಾತ್ರೋರಾತ್ರಿ ಆರು ಗಂಟೆಗಳ ಕಾಲ ಕಾದಾಟ ನಡೆಸಿದ್ದಾರೆ. ಆದರೆ, ನಿರಾಯುಧರಾಗಿ ಕಲ್ಲು , ಕಬ್ಬಿಣದ ರಾಡ್ ಗಳಿಂದಲೇ ಹಲ್ಲೆ, ಪ್ರತಿ ದಾಳಿಯ ಸಂಘರ್ಷ ನಡೆದಿದ್ದು, ಭಾರತದ ಕರ್ನಲ್ ಸಂತೋಷ್ ಬಾಬು ಸೇರಿ 20 ಮಂದಿ ಯೋಧರನ್ನು ಹಿಮದಂತೆ ಶೀತಲವಾಗಿದ್ದ ನದಿಗೆ ನೂಕಿ ಕ್ರೌರ್ಯ ಮೆರೆದಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಯೋಧರು ಚೀನಾ ಯೋಧರ ಜೊತೆ ಸಂಘರ್ಷದಲ್ಲಿ ತೊಡಗಿದ್ದರು.
ಭಾರತದ ಕಡೆಯಿಂದ ಪ್ರಮುಖವಾಗಿ 16ನೇ ಬಿಹಾರ ರೆಜಿಮೆಂಟಿನ ಯೋಧರು ಅಲ್ಲಿ ಗಸ್ತಿನಲ್ಲಿದ್ದರು. ರೆಜಿಮೆಂಟಿನ ಕಮಾಂಡಿಂಗ್ ಆಫೀಸರ್ ಆಗಿದ್ದ ಸಂತೋಷ್ ಬಾಬು ಸೇರಿ 20 ಮಂದಿ ದುರಂತದಲ್ಲಿ ಸಾವು ಕಂಡಿದ್ದರು. ಚೀನಾ ಕಡೆಯಲ್ಲಿ 43 ಯೋಧರು ಇದೇ ಸಂಘರ್ಷದಲ್ಲಿ ಸಾವನ್ನಪ್ಪಿದ್ದರು ಅನ್ನುವ ಮಾಹಿತಿಯನ್ನು ಭಾರತದ ಸೇನೆ ಹೇಳಿತ್ತು. ಆದರೆ, ಭಾರತೀಯ ಯೋಧರ ಮಾಹಿತಿಯನ್ನು ಚೀನಾ ನಿರಾಕರಿಸಿತ್ತು. ಕೇವಲ ನಾಲ್ಕು ಮಂದಿ ಯೋಧರು ಸಾವನ್ನಪ್ಪಿದ್ದಾಗಿ ಹೇಳಿ ವಾಸ್ತವ ಮರೆಮಾಚಿತ್ತು.
ಕಲ್ಲು, ಭರ್ಚಿಯನ್ನೊಳಗೊಂಡ ಮುಷ್ಟಿ ಕಾಳಗ ಚೀನಾ ಮತ್ತು ಭಾರತದ ಯೋಧರ ತಾಕತ್ತನ್ನು ಹಿಮಶಿಖರಗಳ ನಡುವೆ ಒರೆಗೆ ಹಚ್ಚಿತ್ತು. ಭಾರತೀಯ ಯೋಧರು ನಿರಾಯುಧರಾಗಿದ್ದಾಗ ಉದ್ದೇಶಪೂರ್ವಕವಾಗಿ ಈ ರೀತಿಯ ಹಲ್ಲೆ ನಡೆಸಲಾಗಿತ್ತು ಎನ್ನುವ ಆರೋಪ ಸೇನೆಯಿಂದ ಕೇಳಿಬಂದಿದ್ದರಿಂದ ಭಾರತ ಸರಕಾರ ಚೀನಾ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಚೀನಾ ಜೊತೆಗೆ ವ್ಯಾಪಾರ ಸಂಬಂಧ ಮುಂದುವರಿಸಬಾರದು, ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಒತ್ತಾಯ ದೇಶಾದ್ಯಂತ ಮೊಳಗಿತ್ತು. ಇದರ ಮೊದಲ ಹೆಜ್ಜೆಯಾಗಿ ಚೀನಾ ಮೂಲದ ವಿವಿಧ ಮಾದರಿಯ ವಿಡಿಯೋ ಗೇಮ್ಸ್ ಏಪ್ಸ್ ಸೇರಿ 100ಕ್ಕೂ ಮಿಕ್ಕಿದ ಕಂಪನಿಗಳ ಉತ್ಪನ್ನಗಳಿಗೆ ಭಾರತ ನಿಷೇಧ ಹೇರಿತ್ತು.
One year since #Galwan!
— Capt Brijesh Chowta | ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) June 15, 2021
One year since we saw our 20 brothers hold fort for our country against Chinese aggression and attain sadgati.
The nation is indebted to you brothers. Jai Hind !#GalwanHeroes pic.twitter.com/b2mmQhUodg
June 15 marks one year of the deadly Galwan Valley clash in eastern Ladakh which resulted in the death of 20 Indian soldiers, including Commanding Officer Colonel Santosh Babu, and an unspecified number of Chinese troops.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm