ಬ್ರೇಕಿಂಗ್ ನ್ಯೂಸ್
19-06-21 02:36 pm Headline Karnataka News Network ದೇಶ - ವಿದೇಶ
Photo credits : barandbench.com
ದೆಹಲಿ, ಜೂನ್ 19 : ಕಳೆದ ವರ್ಷ ಕೊರೊನಾ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡಾಗ, ತಬ್ಲಿಘಿ ಜಮಾತ್ ಅನ್ನು ಗುರಿಯಾಗಿಸಿ ದ್ವೇಷಪೂರಿತ ವರದಿ ಪ್ರಸಾರ ಮಾಡಿರುವುದನ್ನು ಉಲ್ಲೇಖಿಸಿ ಕನ್ನಡದ ಎರಡು ಖಾಸಗಿ ಸುದ್ದಿ ವಾಹಿನಿಗಳು ಹಾಗೂ ಒಂದು ಇಂಗ್ಲಿಷ್ ನ್ಯೂಸ್ ಚಾನಲ್ ವಿರುದ್ಧ ನೇಷನಲ್ ಬ್ರಾಡ್ಕ್ಯಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ (NBSA) ಕಠಿಣ ಕ್ರಮಕ್ಕೆ ಮುಂದಾಗಿದೆ. ದ್ವೇಷ ಹರಡುವ ರೀತಿಯ ಕಾರ್ಯಕ್ರಮಗಳ ಬಗ್ಗೆ ದೂರಿನ ಆಧಾರದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಕೊರೊನಾ ಮೊದಲನೇ ಅಲೆ ಕಂಡುಬಂದ ಸಂದರ್ಭದಲ್ಲಿ ಈ ಖಾಸಗಿ ವಾರ್ತಾ ವಾಹಿನಿಗಳು ತಬ್ಲಿಘಿ ಜಮಾತ್ ಹಾಗೂ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ವರದಿ ಮಾಡಿದ್ದ ಬಗ್ಗೆ ನೀಡಿದ್ದ ದೂರು ಆಧರಿಸಿ ಎನ್ಬಿಎಸ್ಎ ಈ ಕ್ರಮ ಕೈಗೊಂಡಿದೆ.
ಕನ್ನಡದ ನ್ಯೂಸ್ 18 ವಾಹಿನಿಗೆ ಒಂದು ಲಕ್ಷ ರೂ. ಮತ್ತು ಸುವರ್ಣ ವಾಹಿನಿಗೆ 50 ಸಾವಿರ ದಂಡ ವಿಧಿಸಲಾಗಿದೆ. ಎರಡೂ ವಾಹಿನಿಗಳಲ್ಲಿ ತಬ್ಲಿಘಿ ಜಮಾತ್ ಗುರಿಯಾಗಿಸಿ ಮಾಡಿದ್ದ ವರದಿಯ ಯೂಟ್ಯೂಬ್ ಕ್ಲಿಪಿಂಗ್, ಕಾರ್ಯಕ್ರಮಗಳು ಮತ್ತು ವರದಿಗಳನ್ನು ಏಳು ದಿನಗಳ ಒಳಗೆ ತೆಗೆದು ಹಾಕುವಂತೆ ಸೂಚಿಸಿದೆ. ಅಲ್ಲದೆ, ವರದಿಗೆ ಸಂಬಂಧಿಸಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ.
ಸುವರ್ಣ ವಾಹಿನಿಯು, ಸುದ್ದಿ ಪ್ರಸಾರದ ಮೂಲಭೂತ ಅಂಶಗಳಾದ ನಿಷ್ಪಕ್ಷಪಾತ, ತಟಸ್ಥ ಧೋರಣೆ ಸೇರಿದಂತೆ ಧಾರ್ಮಿಕ ಸಾಮರಸ್ಯದ ಅಂಶಗಳನ್ನು ಉಲ್ಲಂಘಿಸಿದ್ದಾಗಿ ಎನ್ ಬಿಎಸ್ ಎ ಹೇಳಿದೆ.
ಇದಲ್ಲದೆ, ತಮ್ಮ ಸುದ್ದಿ ವಾಹಿನಿಗಳಲ್ಲಿ ಜೂನ್ 23ರ ಒಳಗೆ ಈ ಬಗ್ಗೆ ವಿಷಾದ ಪ್ರಕಟಣೆಯನ್ನೂ ನೀಡಬೇಕು. ಅದು ಟೆಕ್ಸ್ಟ್ ಮತ್ತು ವಾಯ್ಸ್ ಓವರ್ ಎರಡನ್ನೂ ಒಳಗೊಂಡಿರಬೇಕು ಎನ್ನುವ ಷರತ್ತನ್ನೂ ನೀಡಲಾಗಿದೆ.
ಸುದ್ದಿ ವಾಹನಿಗಳು ತಬ್ಲಿಘಿ ಬಗ್ಗೆ ಪ್ರಸಾರ ಮಾಡಿದ ಕಾರ್ಯಕ್ರಮಗಳಲ್ಲಿ ಆಕ್ಷೇಪಾರ್ಹ ರೀತಿ ವರ್ತಿಸಿದ್ದವು. ಅಲ್ಲದೆ, ಕಾರ್ಯಕ್ರಮವನ್ನು ದುರುದ್ದೇಶಪೂರಿತವಾಗಿ ಮತ್ತು ಸದಭಿರುಚಿ ಇಲ್ಲದ ರೀತಿ ಹಾಗೂ ಒಂದು ಸಮುದಾಯಕ್ಕೆ ನೋವಾಗುತ್ತದೆ ಎನ್ನುವ ಕಾಳಜಿಯನ್ನು ಮರೆತು ಮಾಡಲಾಗಿತ್ತು ಎಂದು ಎನ್ ಬಿಎಸ್ ಎ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಕ್ಯಾಂಪೇನ್ ಅಗೈನ್ಸ್ಟ್ ಹೇಟ್ ಸ್ಪೀಚ್ (CAHS) ಎನ್ನುವ ವಿಂಗ್ 2020ರ ಫೆಬ್ರವರಿಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಮಾಧ್ಯಮದಲ್ಲಿ ವರದಿಯಾಗುವ ಧ್ವೇಷಪೂರಿತ ಸುದ್ದಿಗಳನ್ನು ಗಮನಿಸಿ, ಆಯಾ ಸಂಸ್ಥೆಗಳಿಗೆ ದೂರು ನೀಡುತ್ತದೆ. ಸಿಎಎಚ್ಎಸ್ ದೂರಿನ ಅನ್ವಯ ಒಟ್ಟು ಮೂರು ಸುದ್ದಿ ವಾಹಿನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ನ್ಯೂಸ್ 18 ಕನ್ನಡ ವಾಹಿನಿಯಲ್ಲಿ ಏಪ್ರಿಲ್ 1, 2020ರಂದು ಹಾಗೂ ಸುವರ್ಣ ನ್ಯೂಸ್ನಲ್ಲಿ ಮಾರ್ಚ್ 31, 2020 ರಿಂದ ಏಪ್ರಿಲ್ 4ರ ವರೆಗೆ ಪ್ರಸಾರವಾಗಿದ್ದ ತಬ್ಲಿಘಿ ಜಮಾತ್ ಗುರಿಯಾಗಿಸಿದ ಕಾರ್ಯಕ್ರಮಗಳ ಬಗ್ಗೆ ದೂರು ನೀಡಲಾಗಿತ್ತು. ಇದಲ್ಲದೆ, ಟೈಂಸ್ ನೌ ಇಂಗ್ಲಿಷ್ ವಾಹಿನಿಯೂ ಇದೇ ರೀತಿ ಸುದ್ದಿ ಪ್ರಸಾರ ಮಾಡಿದ ಬಗ್ಗೆ ದೂರಿನಲ್ಲಿ ತಿಳಿಸಲಾಗಿತ್ತು.
National Broadcasting Standards Authority (NBSA) of News Broadcasters Association (NBA) has fined Kannada channels News18 Kannada and Suvarna News and English channel Times Now has been censured for gaps in reporting news targeting Tablighi Jamaat members last year, complainant Campaign Against Hate Speech (CAHS) said on Thursday.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm