ಬ್ರೇಕಿಂಗ್ ನ್ಯೂಸ್
24-06-21 11:11 am Headline Karnataka News Network ದೇಶ - ವಿದೇಶ
ಫಿಲಿಪೈನ್ಸ್, ಜೂನ್ 24: ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಬಂಧಿಸಬೇಕಾಗುತ್ತದೆ. ಒಂದೋ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ. ಇಲ್ಲದಿದ್ದರೆ ಫಿಲಿಪೈನ್ಸ್ ಬಿಟ್ಟು ಹೋಗಿ. ಭಾರತಕ್ಕೋ, ಅಮೆರಿಕಕ್ಕೆ ಎಲ್ಲಾದ್ರೂ ಹೋಗಿ ಅಡಗಿಕೊಳ್ಳಿ.. ಹೀಗೆಂದು ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟ್ ಅಬ್ಬರಿಸಿದ್ದಾರೆ.
ದಕ್ಷಿಣ ಏಷ್ಯಾದಲ್ಲಿ ಕೊರೊನಾ ಸೋಂಕಿಗೆ ಅತಿ ಹೆಚ್ಚು ಪೀಡಿತವಾಗಿರುವ ಫಿಲಿಪೈನ್ಸ್ ದೇಶದಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಆದರೆ ಅಲ್ಲಿನ ಜನರು ಲಸಿಕೆ ಪಡೆಯಲು ನಿರಾಕರಿಸುತ್ತಿದ್ದಾರೆ. ಇದರಿಂದ ಸಿಟ್ಟಾಗಿರುವ ಅಧ್ಯಕ್ಷ ರೋಡ್ರಿಗೋ, ನನ್ನ ಕೈಯಲ್ಲಿ ತಪ್ಪು ಕೆಲಸ ಮಾಡಿಸಬೇಡಿ. ದೇಶದಲ್ಲಿ ತುರ್ತು ಪರಿಸ್ಥಿತಿಯ ಸ್ಥಿತಿ ಎದುರಾಗಿದೆ. ಎಲ್ಲರೂ ವ್ಯಾಕ್ಸಿನ್ ಹಾಕಿಸ್ಕೊಳ್ಳಲೇಬೇಕು. ಇಲ್ಲದಿದ್ದರೆ ನಾನು ಬಂಧಿಸಬೇಕಾಗುತ್ತದೆ. ಬಲವಂತವಾಗಿ ವ್ಯಾಕ್ಸಿನ್ ಚುಚ್ಚಬೇಕಾಗುತ್ತದೆ. ನಾವು ಈಗಾಗ್ಲೇ ಕಷ್ಟದಲ್ಲಿದ್ದು, ಇನ್ನಷ್ಟು ಕಠಿಣ ಸ್ಥಿತಿಗೆ ನೂಕಬೇಡಿ ಎಂದಿದ್ದಾರೆ.


ಆದರೆ, ನನ್ನ ಕೈಗಳಲ್ಲಿ ಆ ರೀತಿಯ ಕೆಲಸ ಮಾಡಿಸಬೇಡಿ. ಬಲವಂತದಿಂದ ಚುಚ್ಚುಮದ್ದು ಹಾಕಿಸುವುದನ್ನು ನೀವು ಬಯಸುವುದಿಲ್ಲ ಎಂದು ಗೊತ್ತು. ಆದರೆ, ವ್ಯಾಕ್ಸಿನ್ ಹಾಕಿಸದೇ ಇದ್ದವರು ಇಲ್ಲಿ ಉಳಿಯಬೇಡಿ. ನೀವು ಭಾರತಕ್ಕೋ, ಅಮೆರಿಕಕ್ಕೋ ಹೋಗಿಬಿಡಿ. ನೀವು ಹೆಚ್ಚು ಕಾಲ ಲಸಿಕೆ ಪಡೆಯದೇ ಇಲ್ಲಿ ಉಳಿದುಕೊಂಡರೆ ನೀವೇ ಇಲ್ಲಿ ವೈರಸ್ ಹರಡುತ್ತೀರಿ. ಹಾಗಾಗಿ ಆದಷ್ಟು ಬೇಗ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ರೋಡ್ರಿಗೋ ಜನರನ್ನು ಬೆದರಿಸಿದ್ದಾರೆ.
ಕೆಲವು ಮೂರ್ಖರು ಲಸಿಕೆ ಪಡೆಯದೇ ಉಳಿದುಕೊಂಡಿದ್ದಾರೆ. ಅವರೇ ವೈರಸನ್ನು ಹೆಚ್ಚು ಹರಡುತ್ತಾರೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆರಳುವಾಗ, ಬೇರೆಯವರಿಗೆ ಹರಡುತ್ತಾರೆ. ಯಾರು ಲಸಿಕೆ ಹಾಕಿಸಿಕೊಳ್ಳದೆ, ಓಡಾಟ ಮಾಡ್ತೀರೋ ಅಂಥವರಿಗೆ ನಾನೇ ವ್ಯಾಕ್ಸಿನ್ ಹಾಕಿಸುತ್ತೇನೆ. ಅವರಿಗೆ ಹಂದಿಗಳಿಗೆ ಕೊಡುವ ivermectin ಇಂಜೆಕ್ಷನ್ ಚುಚ್ಚುತ್ತೇನೆ. ಅದು ನಿಮ್ಮಲ್ಲಿರುವ ವೈರಸ್ಸನ್ನೂ ಕೊಲ್ಲುತ್ತದೆ. ಜೊತೆಗೆ, ನಿಮ್ಮನ್ನೂ ಮುಗಿಸುತ್ತದೆ ಎಂದು ರೋಡ್ರಿಗೋ ಗುಡುಗಿದ್ದಾರೆ.
The Philippines President Rodrigo Duterte said during a public address that people who are not willing to get vaccinated will be arrested. He also asked the vaccine decliners to go to India or America.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm