ಬ್ರೇಕಿಂಗ್ ನ್ಯೂಸ್
26-06-21 09:04 pm Headline Karnataka News Network ದೇಶ - ವಿದೇಶ
Photo credits : khaleej Times
ದುಬೈ, ಜೂನ್ 26: ಭಾರತದ ಜೊತೆಗಿನ ವಿಮಾನ ಸಂಚಾರ ನಿರ್ಬಂಧವನ್ನು ಯುಎಇ ಮತ್ತೆ ಮುಂದುವರಿಸಿದ್ದು, ಮುಂದಿನ ಆದೇಶದ ವರೆಗೂ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದೆ. ಯುಎಇ ಪ್ರಜೆಗಳು, ರಾಜತಾಂತ್ರಿಕ ಅಧಿಕಾರಿಗಳು, ಬಿಸಿನೆಸ್ ಉದ್ದೇಶಿತ ಉದ್ಯಮದಾರರ ವಿಮಾನಗಳು ಮತ್ತು ಗೋಲ್ಡನ್ ವೀಸಾ ಹೊಂದಿರುವರ ವಿಮಾನ ಸಂಚಾರ ಹೊರತುಪಡಿಸಿ ಉಳಿದೆಲ್ಲ ರೀತಿಯ ವೈಮಾನಿಕ ಸಂಚಾರವನ್ನು ನಿರ್ಬಂಧಿಸಿ ಯುಎಇ ಜನರಲ್ ಸಿವಿಲ್ ಏವಿಯೇಶನ್ ಅಥಾರಿಟಿ ಆದೇಶ ಮಾಡಿದೆ.
ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಿದ ಕಾರಣ ಕಳೆದ ಎಪ್ರಿಲ್ 24ರಿಂದ ಯುಎಇ ಭಾರತದ ಜೊತೆಗೆ ವಿಮಾನ ಸಂಚಾರವನ್ನು ನಿರ್ಬಂಧಿಸಿ ಆದೇಶ ಮಾಡಿತ್ತು. ಜೂನ್ 19ರಂದು ಯುಎಇ ವಿಪತ್ತು ನಿರ್ವಹಣಾ ಕಮಿಟಿ ಸಭೆ ಸೇರಿ ಭಾರತ, ನೈಜೀರಿಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ನಡುವೆ ಜೂನ್ 23ರಿಂದ ಪ್ಯಾಸೆಂಜರ್ ವಿಮಾನಗಳ ಸಂಚಾರಕ್ಕೆ ಕೆಲವು ಷರತ್ತಿನ ಮೇರೆಗೆ ಅನುವು ಮಾಡಿತ್ತು. ಅದರಂತೆ, ಜೂನ್ 24ರಂದು ಏರ್ ಇಂಡಿಯಾ ಕಮರ್ಶಿಯಲ್ ವಿಮಾನ ಸಂಚಾರವನ್ನು ಆರಂಭಿಸಿತ್ತು. ಆದರೆ, ಈಗ ಮತ್ತೆ ಯುಎಇ ವಿಮಾನ ಪ್ರಾಧಿಕಾರವು ಭಾರತದ ಜೊತೆಗಿನ ವೈಮಾನಿಕ ಸಂಚಾರಕ್ಕೆ ನಿರ್ಬಂದ ವಿಧಿಸಿದೆ.
ಷರತ್ತಿನ ಪ್ರಕಾರ, ಯುಎಇಗೆ ಆಗಮಿಸುವ ಪ್ರಯಾಣಿಕರು ರೆಸಿಡೆನ್ಶಿಯಲ್ ವೀಸಾ ಹೊಂದಿರಬೇಕು. ಅಲ್ಲದೆ, ಯುಎಇ ಅಂಗೀಕಾರ ನೀಡಿರುವ ಲಸಿಕೆಯನ್ನು ಎರಡೂ ಡೋಸ್ ಹಾಕಿಸಿಕೊಂಡಿರಬೇಕು. ಫೈಜರ್, ಸ್ಪುಟ್ನಿಕ್ ವಿ, ಆಸ್ಟ್ರಾಜೆನೆಕಾ, ಸಿನೋಫಾರ್ಮ್ ಇವುಗಳಲ್ಲಿ ಒಂದನ್ನು ಲಸಿಕೆಯಾಗಿ ಪಡೆದಿರಬೇಕು. ಅಲ್ಲದೆ, ಪ್ರಯಾಣಿಕರು ತಮಗೆ ಕೋವಿಡ್ ಇಲ್ಲವೆಂದು ಖಚಿತಪಡಿಸಲು 48 ಗಂಟೆ ಒಳಗೆ ಪರೀಕ್ಷೆ ಮಾಡಿರುವ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು. ಯುಎಇ ತಲುಪಿದ ಬಳಿಕ ಮತ್ತೆ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟು ಹತ್ತು ದಿನಗಳ ಕ್ವಾರಂಟೈನ್ ಇರಬೇಕೆಂದು ಷರತ್ತು ವಿಧಿಸಲಾಗಿತ್ತು.
UAE’s General Civil Aviation Authority (GCAA) has announced that inbound passenger traffic from India would remain suspended until further notice. Referring to this, an official in the know-how stated, “As far as inbound passenger traffic from India is concerned, the status quo remains.
25-12-25 08:00 pm
Bangalore Correspondent
Chitradurga Seabird Bus accident: ಚಿತ್ರದುರ್ಗ...
25-12-25 06:26 pm
SeaBird Bus Fire Accident, Chitradurga: ಕಂಟೈನ...
25-12-25 12:12 pm
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ...
24-12-25 10:26 pm
24-12-25 11:13 pm
HK News Desk
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
25-12-25 10:54 pm
Mangalore Correspondent
ಡಿ.27ರಂದು 9ನೇ ವರ್ಷದ ಮಂಗಳೂರು ಕಂಬಳ ; ನವ ವರ್ಷ- ನ...
24-12-25 10:30 pm
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm