ಬ್ರೇಕಿಂಗ್ ನ್ಯೂಸ್
26-06-21 09:04 pm Headline Karnataka News Network ದೇಶ - ವಿದೇಶ
Photo credits : khaleej Times
ದುಬೈ, ಜೂನ್ 26: ಭಾರತದ ಜೊತೆಗಿನ ವಿಮಾನ ಸಂಚಾರ ನಿರ್ಬಂಧವನ್ನು ಯುಎಇ ಮತ್ತೆ ಮುಂದುವರಿಸಿದ್ದು, ಮುಂದಿನ ಆದೇಶದ ವರೆಗೂ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದೆ. ಯುಎಇ ಪ್ರಜೆಗಳು, ರಾಜತಾಂತ್ರಿಕ ಅಧಿಕಾರಿಗಳು, ಬಿಸಿನೆಸ್ ಉದ್ದೇಶಿತ ಉದ್ಯಮದಾರರ ವಿಮಾನಗಳು ಮತ್ತು ಗೋಲ್ಡನ್ ವೀಸಾ ಹೊಂದಿರುವರ ವಿಮಾನ ಸಂಚಾರ ಹೊರತುಪಡಿಸಿ ಉಳಿದೆಲ್ಲ ರೀತಿಯ ವೈಮಾನಿಕ ಸಂಚಾರವನ್ನು ನಿರ್ಬಂಧಿಸಿ ಯುಎಇ ಜನರಲ್ ಸಿವಿಲ್ ಏವಿಯೇಶನ್ ಅಥಾರಿಟಿ ಆದೇಶ ಮಾಡಿದೆ.
ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಿದ ಕಾರಣ ಕಳೆದ ಎಪ್ರಿಲ್ 24ರಿಂದ ಯುಎಇ ಭಾರತದ ಜೊತೆಗೆ ವಿಮಾನ ಸಂಚಾರವನ್ನು ನಿರ್ಬಂಧಿಸಿ ಆದೇಶ ಮಾಡಿತ್ತು. ಜೂನ್ 19ರಂದು ಯುಎಇ ವಿಪತ್ತು ನಿರ್ವಹಣಾ ಕಮಿಟಿ ಸಭೆ ಸೇರಿ ಭಾರತ, ನೈಜೀರಿಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ನಡುವೆ ಜೂನ್ 23ರಿಂದ ಪ್ಯಾಸೆಂಜರ್ ವಿಮಾನಗಳ ಸಂಚಾರಕ್ಕೆ ಕೆಲವು ಷರತ್ತಿನ ಮೇರೆಗೆ ಅನುವು ಮಾಡಿತ್ತು. ಅದರಂತೆ, ಜೂನ್ 24ರಂದು ಏರ್ ಇಂಡಿಯಾ ಕಮರ್ಶಿಯಲ್ ವಿಮಾನ ಸಂಚಾರವನ್ನು ಆರಂಭಿಸಿತ್ತು. ಆದರೆ, ಈಗ ಮತ್ತೆ ಯುಎಇ ವಿಮಾನ ಪ್ರಾಧಿಕಾರವು ಭಾರತದ ಜೊತೆಗಿನ ವೈಮಾನಿಕ ಸಂಚಾರಕ್ಕೆ ನಿರ್ಬಂದ ವಿಧಿಸಿದೆ.
ಷರತ್ತಿನ ಪ್ರಕಾರ, ಯುಎಇಗೆ ಆಗಮಿಸುವ ಪ್ರಯಾಣಿಕರು ರೆಸಿಡೆನ್ಶಿಯಲ್ ವೀಸಾ ಹೊಂದಿರಬೇಕು. ಅಲ್ಲದೆ, ಯುಎಇ ಅಂಗೀಕಾರ ನೀಡಿರುವ ಲಸಿಕೆಯನ್ನು ಎರಡೂ ಡೋಸ್ ಹಾಕಿಸಿಕೊಂಡಿರಬೇಕು. ಫೈಜರ್, ಸ್ಪುಟ್ನಿಕ್ ವಿ, ಆಸ್ಟ್ರಾಜೆನೆಕಾ, ಸಿನೋಫಾರ್ಮ್ ಇವುಗಳಲ್ಲಿ ಒಂದನ್ನು ಲಸಿಕೆಯಾಗಿ ಪಡೆದಿರಬೇಕು. ಅಲ್ಲದೆ, ಪ್ರಯಾಣಿಕರು ತಮಗೆ ಕೋವಿಡ್ ಇಲ್ಲವೆಂದು ಖಚಿತಪಡಿಸಲು 48 ಗಂಟೆ ಒಳಗೆ ಪರೀಕ್ಷೆ ಮಾಡಿರುವ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು. ಯುಎಇ ತಲುಪಿದ ಬಳಿಕ ಮತ್ತೆ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟು ಹತ್ತು ದಿನಗಳ ಕ್ವಾರಂಟೈನ್ ಇರಬೇಕೆಂದು ಷರತ್ತು ವಿಧಿಸಲಾಗಿತ್ತು.
UAE’s General Civil Aviation Authority (GCAA) has announced that inbound passenger traffic from India would remain suspended until further notice. Referring to this, an official in the know-how stated, “As far as inbound passenger traffic from India is concerned, the status quo remains.
25-04-25 07:32 pm
Bangalore Correspondent
ಧರ್ಮದ ಹೆಸರು ಕೇಳಿ ಯಾರನ್ನೂ ಅಲ್ಲಿ ಕೊಂದಿಲ್ಲ, ಕಾಶ್...
25-04-25 07:30 pm
ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸ...
25-04-25 06:30 pm
Pahalgam Attack, Shivamogga, Manjunath: ಉಗ್ರರ...
24-04-25 10:13 pm
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
25-04-25 06:37 pm
HK News Desk
ಪಹಲ್ಗಾಮ್ ದುಷ್ಕೃತ್ಯ ; ಐದು ವರ್ಷ ಕಾಲ ಪಾಕಿನಲ್ಲಿದ್...
25-04-25 02:54 pm
BSF jawan, Pakistan: ಗಡಿಯಲ್ಲಿ ಬಿಕ್ಕಟ್ಟು ; ಪಾಕ...
25-04-25 01:16 pm
Melted plastic, Kollam, Hazard: ವಲಸೆ ಕಾರ್ಮಿಕರ...
24-04-25 09:00 pm
ಭಯೋತ್ಪಾದನೆ ಕ್ಯಾನ್ಸರ್ ಇದ್ದಂತೆ, ಇಸ್ಲಾಮಿಗೆ ವಿರುದ...
24-04-25 04:59 pm
25-04-25 10:49 pm
Giridhar Shetty, Mangalore Correspondent
Bhatkal News, Pakistani Origin Mangalore: ಭಟ್...
25-04-25 07:43 pm
Mangalore News, Facebook post, Pahalgam Terro...
24-04-25 11:08 pm
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm