ಬ್ರೇಕಿಂಗ್ ನ್ಯೂಸ್
12-07-21 05:25 pm Headline Karnataka News Network ದೇಶ - ವಿದೇಶ
ನವದೆಹಲಿ, ಜುಲೈ 12: ಸೂರ್ಯನಿಂದ ಪ್ರಬಲ ಸೌರಗಾಳಿ ಬಿಡುಗಡೆಯಾಗಿದ್ದು, ಇನ್ನೆರಡು ದಿನ (ಮಂಗಳವಾರ, ಬುಧವಾರ) ಇದರ ಪರಿಣಾಮ ಭೂಮಿಯ ಮೇಲಾಗಲಿದೆ. ಪ್ರಬಲ ಸೌರಗಾಳಿ ಅಪ್ಪಳಿಸುವ ಕಾರಣ ಭೂಮಿಯ ಕಾಂತಶಕ್ತಿಯ ಮೇಲೆ ಪರಿಣಾಮ ಬೀರಲಿದ್ದು, ಇನ್ನೆರಡು ದಿನಗಳಲ್ಲಿ ಭೂಮಿಯ ಉತ್ತರ ಪ್ರದೇಶಗಳಲ್ಲಿ ಇದರ ಎಫೆಕ್ಟ್ ಕಾಣಿಸಿಕೊಳ್ಳಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಸೌರ ಜ್ವಾಲೆಯಿಂದಾಗಿ ಭೂಮಿಯ ಕಾಂತಕ್ಷೇತ್ರಕ್ಕೆ ಪರಿಣಾಮ ಎದುರಾಗಲಿದೆ. ಇದರಿಂದ ಪ್ರಮುಖವಾಗಿ ಭೂಮಿಯಿಂದ ನೇರ ಸಂಪರ್ಕ ಹೊಂದಿರುವ ಸ್ಯಾಟಲೈಟ್ ಆಪರೇಟಿಂಗ್ ಸಿಸ್ಟಂಗೆ ಪೆಟ್ಟು ಬೀಳಲಿದೆ. ಜಿಪಿಎಸ್ ನೇವಿಗೇಶನ್, ಮೊಬೈಲ್ ಫೋನ್ ಸಿಗ್ನಲ್, ಸ್ಯಾಟಲೈಟ್ ಟಿವಿ, ವಿದ್ಯುತ್ ಗ್ರಿಡ್ ಗಳಲ್ಲಿ ವೈಪರೀತ್ಯ ಕಾಣಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಅಲ್ಲದೆ, ಭೂಮಿಯ ಕಾಂತಕ್ಷೇತ್ರದ ವ್ಯಾಪ್ತಿಯಲ್ಲಿ ಭಾರೀ ವೇಗದಲ್ಲಿ ಗಾಳಿ ಬೀಸಲಿದ್ದು, ಬಿರುಗಾಳಿ ರೂಪ ಪಡೆಯುವ ಸಾಧ್ಯತೆಯಿದೆ ಎಂದಿದ್ದಾರೆ.
ಪ್ರಬಲ ಸೌರ ಗಾಳಿಯಿಂದಾಗಿ ಅಂತರಿಕ್ಷದಲ್ಲಿ ಜಿಯೋ ಮ್ಯಾಗ್ನಿಟಿಕ್ ಸ್ಟಾರ್ಮ್ (ಕಾಂತ ಮಾರುತ) ಉಂಟಾಗಲಿದ್ದು, ಇದು ಭೂಮಿಯ ಕಾಂತ ಶಕ್ತಿಯ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗಿದೆ. ಅಂತರಿಕ್ಷದಲ್ಲಿ ಸೂರ್ಯನ ಜ್ವಾಲೆಯಿಂದಾಗಿ ಅಪಾರ ವಿದ್ಯುತ್ ಅಯಸ್ಕಾಂತೀಯ ಶಕ್ತಿ ಮತ್ತು ಪ್ಲಾಸ್ಮಾ ಉತ್ಪತ್ತಿಯಾಗಲಿದ್ದು, ಇದರ ಪರಿಣಾಮ ಕಾಂತಶಕ್ತಿ ಪ್ರೇರಕಗೊಂಡು ಸೌರ ಬಿರುಗಾಳಿ ಏಳಲಿದೆ. ಇದು ಭೂಮಿಯ ಅಯಸ್ಕಾಂತ ಪ್ರಭಾ ವಲಯಕ್ಕೆ ಧಕ್ಕೆ ಮಾಡಲಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.


ಏನಿದು ಸೌರಜ್ವಾಲೆ, ಸೌರ ಬಿರುಗಾಳಿ ?
ಸೂರ್ಯನಲ್ಲಿ ಅಡಕವಾಗಿರುವ ಅಪಾರ ಪ್ರಮಾಣದ ದ್ರವ್ಯರಾಶಿ ಒಮ್ಮೆಲೇ ಸ್ಫೋಟಗೊಂಡು ಈ ರೀತಿಯ ಸೌರ ಬಿರುಗಾಳಿ ಏಳುತ್ತದೆ. ಇದರಲ್ಲಿ ಅಪಾರ ಪ್ರಮಾಣದ ಕಾಂತಶಕ್ತಿಯ ಬಲ ಮತ್ತು ರೇಡಿಯೇಶನ್ ಕೂಡ ಏಕಕಾಲದಲ್ಲಿ ಬಿಡುಗಡೆಯಾಗುತ್ತದೆ. ಎಕ್ಸ್ ರೇ ಮತ್ತು ಗಾಮಾ ಕಿರಣಗಳ ಜೊತೆಗೆ ವಿಭಿನ್ನ ರೀತಿಯ ವಿಕಿರಣಗಳು ಹೊರ ಸೂಸಲಿದ್ದು ಇದು ಸೌರ ಮಂಡಲಕ್ಕೆ ಬಿಡುಗಡೆಯಾಗಿ ಬೇರೆ ಬೇರೆ ರೀತಿಯ ಪರಿಣಾಮಕ್ಕೆ ಕಾರಣವಾಗಲಿದೆ.
ಈ ರೀತಿಯ ಸೌರಜ್ವಾಲೆ ಸೂರ್ಯನಿಂದ ಕೆಲವೊಮ್ಮೆ ಬಿಡುಗಡೆಯಾಗುತ್ತಿದ್ದು ವಿಜ್ಞಾನಿಗಳು ಇದರ ಪರಿಣಾಮದ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಇಸ್ರೋ ವಿಜ್ಞಾನಿಗಳು ಇತ್ತೀಚೆಗೆ ಸೂರ್ಯನಿಂದ ಬಿಡುಗಡೆಯಾಗಿರುವ ನೂರು ರೀತಿಯ ಸೌರಜ್ವಾಲೆಯನ್ನು ಗುರುತಿಸಿದ್ದಾರೆ.
The massive solar flare is expected to hit satellites operating in the Earth’s upper atmosphere, impact GPS navigation, mobile phone signal, and satellite TV.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm