ಮೇಕೆದಾಟು ಬಗ್ಗೆ ಸಂಸತ್ತಿನಲ್ಲಿ ಪ್ರಶ್ನಿಸಿದ ಪ್ರಜ್ವಲ್ ರೇವಣ್ಣ ; ತಮಿಳುನಾಡಿನ ಅನುಮತಿ ಪಡೆಯಬೇಕೆಂದ ಜಲಸಚಿವರು !

06-08-21 12:21 pm       Headline Karnataka News Network   ದೇಶ - ವಿದೇಶ

ರಾಜ್ಯಕ್ಕೆ ನಿಗದಿಪಡಿಸಿರುವ ನೀರನ್ನು ಬಳಸಿ ಮಾಡಬೇಕೆಂದಿರುವ ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಕೋರುವ ಅಗತ್ಯವೇನಿದೆ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನೆ ಮಾಡಿದ್ದಾರೆ.

ನವದೆಹಲಿ, ಆಗಸ್ಟ್ 6: ಸಂಸತ್ತಿನಲ್ಲಿ ಇಂದು ಮೇಕೆದಾಟು ಯೋಜನೆಯ ವಿಚಾರ ಪ್ರತಿಧ್ವನಿಸಿದೆ. ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ರಾಜ್ಯಕ್ಕೆ ನಿಗದಿಪಡಿಸಿರುವ ನೀರನ್ನು ಬಳಸಿ ಮಾಡಬೇಕೆಂದಿರುವ ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಕೋರುವ ಅಗತ್ಯವೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಕಾವೇರಿ ನ್ಯಾಯಾಧಿಕರಣದ ಪ್ರಾಧಿಕಾರದ ಆದೇಶದಲ್ಲಿ ರಾಜ್ಯಕ್ಕೆ ನಿಗದಿಯಾಗಿರುವ ನೀರನ್ನು ಬಳಸಿಕೊಳ್ಳಲು ಅಣೆಕಟ್ಟು ಕಟ್ಟುವುದಿದ್ದರೆ ಅದಕ್ಕಾಗಿ ಇತರ ರಾಜ್ಯಗಳ ಅನುಮತಿ ಕೇಳಬೇಕೆಂದು ಎಲ್ಲಿಯೂ ಬರೆದಿಲ್ಲ. ನಮಗೆ ನೀಡಿರುವ ನೀರಿನ ಪಾಲಿನಲ್ಲಿ ಅಣೆಕಟ್ಟು ಮಾಡುತ್ತಿದ್ದೇವೆ. ಇದರಲ್ಲಿ ಸುಪ್ರೀಂ ಕೋರ್ಟ್ ಆಗಲೀ, ಪ್ರಾಧಿಕಾರದ ಆದೇಶವನ್ನಾಗಲೀ ಉಲ್ಲಂಘನೆ ಮಾಡುವುದಿಲ್ಲ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಜಲಸಂಪನ್ಮೂಲ ಸಚಿವರು, ಈ ಬಗ್ಗೆ ನೀಡಿರುವ ಅನುಮತಿ ಷರತ್ತುಗಳ ಮೇಲಿನ ಅನುಮತಿಯಾಗಿತ್ತು. ಮೇಕೆದಾಟು ಅಣೆಕಟ್ಟಿಗೆ ಡಿಪಿಆರ್ ನಡೆಸಲು ನೀಡಿದ ಅನುಮತಿಯಲ್ಲಿ ಈ ಬಗ್ಗೆ ಸ್ಪಷ್ಟವಾಗಿದೆ. ಅಂತಾರಾಜ್ಯ ನದಿಯಾಗಿರುವುದರಿಂದ ಕೆಳಭಾಗದ ಎಲ್ಲ ರಾಜ್ಯಗಳ ಅನುಮತಿ ಪಡೆದಿರಬೇಕು ಎಂದು ಹೇಳಲಾಗಿತ್ತು ಎಂದು ಉತ್ತರ ನೀಡಿದ್ದಾರೆ.

The Detail Project Report (DPR) sent by Karnataka was tabled in the CWMA several times for approval, but the discussion on this issue could not take place due to a lack of consensus among party states Karnataka and Tamil Nadu, Jal Shakti Minister Gajendra Singh Shekhawat informed Lok Sabha on Thursday.