ಭದ್ರತಾ ಪಡೆ - ನಕ್ಸಲರ ನಡುವೆ ಗುಂಡಿನ ಚಕಮಕಿ ; ಇಬ್ಬರು ಕುಖ್ಯಾತ ನಕ್ಸಲರು ಖತಂ

24-08-21 01:30 pm       Headline Karnataka News Network   ದೇಶ - ವಿದೇಶ

ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ಇಂದು ನಡೆದ  ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ.

ರಾಯಪುರ, ಆಗಸ್ಟ್ 23: ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ಇಂದು ನಡೆದ  ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ.

ಕನ್ಹೈಗುಡ ಗ್ರಾಮದ ಗೊಂಪಾಡ್‌ ಬಳಿಯ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅಡಗಿರುವ ಮಾಹಿತಿ ಆಧರಿಸಿ ಡಿಆರ್‌ಜಿ, ಸಿಆರ್‌ಪಿಎಫ್‌ ಮತ್ತು ಕೋಬ್ರಾ ಪಡೆಗಳು ಮಂಗಳವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಜಂಟಿ ಕಾರ್ಯಾಚರಣೆ ನಡೆಸಿದವು. ಈ ವೇಳೆ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ಏರ್ಪಟ್ಟಿದೆ’ ಎಂದು ಸುಕ್ಮಾ ಪೊಲೀಸ್‌ ವರಿಷ್ಠಾಧಿಕಾರಿ ಸುನೀಲ್‌ ಶರ್ಮಾ ಅವರು ತಿಳಿಸಿದರು.

ಗುಂಡಿನ ಕಾಳಗದ ಬಳಿಕ ಘಟನಾ ಸ್ಥಳದಲ್ಲಿ ಇಬ್ಬರು ನಕ್ಸಲರ ಶವ ಪತ್ತೆಯಾಗಿದೆ. ಅಲ್ಲಿಂದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಎನ್‌ಕೌಂಟರ್‌ನಲ್ಲಿ ಹಲವು ನಕ್ಸಲರು ಗಾಯಗೊಂಡಿರಬಹುದು ಅಥವಾ ಸಾವಿಗೀಡಾಗಿರಬಹುದು. ಆದರೆ ನಕ್ಸಲರು ಅವರನ್ನು ಅರಣ್ಯದೊಳಗೆ ಕರೆದೊಯ್ಯುವಲ್ಲಿ ಸಫಲರಾಗಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು. 

ಮೃತರ ಗುರುತು ಪತ್ತೆಹಚ್ಚಲಾಗುತ್ತಿದೆ. ಇದರಲ್ಲಿ ಒಬ್ಬನನ್ನು ಕೊಂಟಾ ಪ್ರದೇಶದಲ್ಲಿ ಸಕ್ರಿಯವಾಗಿರುವ ನಕ್ಸಲ್‌ ಗುಂಪಿನ ಕಮಾಂಡರ್‌ ಕವಾಸಿ ಹುಂಗಾ ಆಗಿರಬಹುದೆಂದು ಶಂಕಿಸಲಾಗಿದೆ. ಸದ್ಯ ಈ ಪ್ರದೇಶದಲ್ಲಿ ನಕ್ಸಲರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಅವರು ಹೇಳಿದರು.

Two Naxal dead bodies have been recovered with arms, ammunition, and explosive materials along with other camping materials. Searching is on for other Naxals who have fled the spot. There might be a few more Naxals who have got injured during the exchange of fire.