ಬ್ರೇಕಿಂಗ್ ನ್ಯೂಸ್
25-08-21 03:57 pm Headline Karnataka News Network ದೇಶ - ವಿದೇಶ
ನವದೆಹಲಿ, ಆಗಸ್ಟ್ 25: ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣಕ್ಕಾಗಿ ಅಭಿಯಾನ ನಡೆಸಿ, ನೋಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದ ಜಗತ್ತಿನ ಅತಿ ಕಿರಿಯ ವಯಸ್ಸಿನ ಹುಡುಗಿ ಮಲಾಲಾ ಯೂಸುಫ್ ಝೈ ತಾಲಿಬಾನ್ ಬಗ್ಗೆ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ತಾಲಿಬಾನಿಗಳ ಒಂದು ಬುಲೆಟ್ ಮಾಡಿದ್ದ ಹಾನಿಯಿಂದಲೇ ನಾನಿನ್ನೂ ಚೇತರಿಸಿಕೊಂಡಿಲ್ಲ. 9 ವರ್ಷದಲ್ಲಿ ಆರನೇ ಬಾರಿಗೆ ಸರ್ಜರಿಗೆ ಒಳಗಾಗಿದ್ದೇನೆ. ಆದರೆ, ಲಕ್ಷಾಂತರ ಬುಲೆಟ್ ನುಗ್ಗಿಸಿಕೊಂಡು ನೋವು ತಿನ್ನುತ್ತಿರುವ ಅಫ್ಘಾನಿಸ್ತಾನದ ಪ್ರಜೆಗಳ ಸ್ಥಿತಿ ಹೇಗಿರಬೇಡ ಎಂದು ಹಲುಬಿದ್ದಾರೆ.
ಎರಡು ವಾರಗಳ ಹಿಂದೆ ಅಮೆರಿಕದ ಪಡೆಗಳು ಅಫ್ಘಾನಿಸ್ತಾನದಿಂದ ಕಾಲ್ಕೀಳುತ್ತಲೇ ತಾಲಿಬಾನಿಗಳು ಪ್ರಾಬಲ್ಯ ಸ್ಥಾಪಿಸಿದ್ದರು. ಆದರೆ, ಈ ಹೊತ್ತಿಗೆ ನಾನು ಬೋಸ್ಟನ್ ಆಸ್ಪತ್ರೆಯಲ್ಲಿ ಆರನೇ ಬಾರಿಗೆ ಸರ್ಜರಿಗೆ ಒಳಗಾಗಿದ್ದೇನೆ. ವೈದ್ಯರು ತಾಲಿಬಾನಿಗಳು ನನ್ನ ದೇಹಕ್ಕೆ ಮಾಡಿದ ಡ್ಯಾಮೇಜನ್ನು ರಿಪೇರಿ ಮಾಡುತ್ತಿದ್ದರು ಎಂದು ಆಗಸ್ಟ್ 24ರಂದು ಮಲಾಲಾ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದು ತಾಲಿಬಾನಿಗಳು ಯಾವ ರೀತಿ ತನ್ನ ಮೇಲೆರಗಿದ್ದರು ಎನ್ನೋದನ್ನು ನೆನಪಿಸಿದ್ದಾರೆ.
24 ವರ್ಷದ ಮಲಾಲಾ ಇನ್ನೂ ಇಂಗ್ಲೆಂಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಅಲ್ಲಿಯೇ ಶಿಕ್ಷಣವನ್ನೂ ಪಡೆಯುತ್ತಿದ್ದಾರೆ. 2012ರ ಅಕ್ಟೋಬರ್ ನಲ್ಲಿ ಸ್ಕೂಲ್ ಬಸ್ ನಲ್ಲಿ ತೆರಳುತ್ತಿದ್ದಾಗ ತಾಲಿಬಾನ್ ಬೆಂಬಲಿತ ಪಾಕಿಸ್ತಾನಿ ವ್ಯಕ್ತಿಯೊಬ್ಬ ನನ್ನ ಮೇಲೆ ಗುಂಡು ಹಾರಿಸಿದ್ದ. ಗುಂಡು ನನ್ನ ಎಡಗೆನ್ನೆಯ ಭಾಗದಿಂದ ಸೀಳಿ ಹೋಗಿತ್ತು. ತಲೆಯ ಎಡಭಾಗದ ಎಲುಬು ಮುರಿದು ಹಾನಿಯಾಗಿತ್ತು. ಕಾಲಿಗೂ ಏಟು ತಗಲಿತ್ತು. ಆದರೆ, ನನಗೇನಾಯ್ತು ಎಂದು ಆವತ್ತು ನನಗೆ ಗೊತ್ತಾಗಿರಲಿಲ್ಲ. ಎಚ್ಚರ ಬಂದಾಗ ಸುತ್ತ ಇಂಗ್ಲಿಷ್ ಮಾತಾಡುವವರು ಇದ್ದರು. ಬಳಿಕ ನನ್ನನ್ನು ಯುಕೆಗೆ ಕರೆದೊಯ್ದಿರುವ ಮಾಹಿತಿ ತಿಳಿದುಬಂದಿತ್ತು ಎಂದು ಮಲಾಲಾ ಹೇಳಿದ್ದಾರೆ.
9 ವರ್ಷಗಳ ಹಿಂದೆ ನನಗೆ ಬಿದ್ದ ಬುಲೆಟ್ ನಿಂದ ನಾನು ಈಗಲು ಚೇತರಿಕೆ ಹಾದಿಯಲ್ಲಿದ್ದೇನೆ. ಆದರೆ, ಅಫ್ಘಾನಿಸ್ತಾನದ ಜನರು ಕಳೆದ ನಾಲ್ಕು ದಶಕದಲ್ಲಿ ಲಕ್ಷಾಂತರ ಬುಲೆಟ್ ಗಳನ್ನು ಎದುರಿಸಿದ್ದಾರೆ. ಯಾರೆಲ್ಲಾ ಹೀಗೆ ನೋವು ಕಂಡಿದ್ದಾರೆ, ಸಾವು ಕಂಡಿದ್ದಾರೆ ಎನ್ನೋದ್ರ ನೆನಪು ಇಲ್ಲ. ಯಾರು ಕೂಡ ಲೆಕ್ಕ ಇಟ್ಟವರಿಲ್ಲ. ಅಲ್ಲಿನ ಜನ ಚೀರಾಡುತ್ತಿದ್ದಾರೆ. ಆದರೆ, ಅವರ ನೋವು, ಅಳು ಯಾರ ಕಿವಿಯೂ ತಲುಪಿತ್ತಿಲ್ಲ. ನನ್ನ ಹೃದಯ ಮಾತ್ರ ಕಲಕುತ್ತಿದೆ ಎಂದು ಮಲಾಲಾ ತನ್ನ ಇನ್ ಸ್ಟಾ ಗ್ರಾಮ್ ಪೇಜ್ ನಲ್ಲೂ ಬರೆದಿದ್ದಾರೆ.
Two weeks ago, while US troops withdrew from Afghanistan and the Taliban gained control, I lay in a hospital bed in Boston, undergoing my sixth surgery, as doctors continued to repair the Taliban’s damage to my body,” Malala said in her blog, which has been published weeks after the return of the Taliban in Afghanistan.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 06:14 pm
Mangalore Correspondent
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm