ಬ್ರೇಕಿಂಗ್ ನ್ಯೂಸ್
            
                        02-09-21 11:29 am Headline Karnataka News Network ದೇಶ - ವಿದೇಶ
            ಲಕ್ನೋ, ಸೆ.2: ಗೋವು ಭಾರತೀಯ ಸಂಸ್ಕೃತಿಯ ಒಂದು ಭಾಗ. ಅವುಗಳಿಗೆ ಮೂಲಭೂತ ಹಕ್ಕನ್ನು ನೀಡಬೇಕು. ಅಷ್ಟೇ ಅಲ್ಲಾ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಬೇಕು ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಉತ್ತರ ಪ್ರದೇಶದಲ್ಲಿ ಗೋಹತ್ಯಾ ನಿಷೇಧ ಕಾಯ್ದೆಯದಡಿ ಬಂಧಿತನಾಗಿದ್ದ ವ್ಯಕ್ತಿಯೊಬ್ಬ ಜಾಮೀನು ಕೋರಿ ಸಲ್ಲಿಸಿದ್ದ ಪ್ರಕರಣದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಅಭಿಪ್ರಾಯ ನೀಡಿದೆ. ಜಬ್ ಗಾಯೆ ಕಲ್ಯಾಣ್ ಹೋಗಾ, ತಬ್ ದೇಶ್ ಕಾ ಕಲ್ಯಾಣ್ ಹೋಗಾ(ಗೋವಿನ ರಕ್ಷಣೆ ಯಾವಾಗ ಆಗುತ್ತದೋ ಆವಾಗ ದೇಶದ ಕಲ್ಯಾಣವೂ ಆಗುತ್ತದೆ) ಎಂದು ಕೋರ್ಟ್ ಹೇಳಿದೆ.
ಗೋವಿನ ರಕ್ಷಣೆ ಮಾಡುವುದು ಯಾವುದೇ ಒಂದು ಸಮುದಾಯದ ಹೊಣೆಯಲ್ಲ. ಗೋವು ಭಾರತೀಯರ ಸಂಸ್ಕೃತಿಯಲ್ಲಿ ಅಡಕವಾಗಿದೆ. ಗೋವನ್ನು ರಕ್ಷಣೆ ಮಾಡುವುದು ಪ್ರತಿ ಭಾರತೀಯನ ಕರ್ತವ್ಯ. ಅದಕ್ಕೆ ಮತ- ಧರ್ಮದ ಭೇದ ಇಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಶೇಖರ್ ಕುಮಾರ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ನೀಡಿದ್ದು, ಗೋವಿನ ರಕ್ಷಣೆಗಾಗಿ ಭಾರತದ ಸಂಸತ್ತು ನಿರ್ಣಯ ಸ್ವೀಕರಿಸಬೇಕು. ರಾಷ್ಟ್ರೀಯ ಪ್ರಾಣಿಯೆಂದು ಗುರುತಿಸಿ, ಅದರ ರಕ್ಷಣೆಗೆ ಮೂಲಭೂತ ಹಕ್ಕು ನೀಡಬೇಕು. ಗೋವಿನ ಹತ್ಯೆ ಅಥವಾ ಹಿಂಸೆ ಮಾಡುವುದರ ವಿರುದ್ಧ ಮಸೂದೆ ತರಬೇಕು ಎಂದು ಹೇಳಿದೆ.
ಗೋಹತ್ಯೆ ನಿಷೇಧ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ಜಾವೇದ್ ಎಂಬವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಕೋರ್ಟ್ ಜಾಮೀನು ಅರ್ಜಿಯನ್ನು ನಿರಾಕರಿಸಿ, ಭಾರತದಲ್ಲಿ ಮಾತ್ರ ವಿವಿಧ ಮತ ಮತ್ತು ಧರ್ಮದ ಜನರು ವಾಸಿಸುತ್ತಾರೆ. ಆದರೆ, ಅವರೆಲ್ಲರ ನಂಬಿಕೆ ಬೇರೆ ಬೇರೆ ಇದ್ದರೂ ದೇಶಕ್ಕಾಗಿ ಎಲ್ಲರ ಅಭಿಪ್ರಾಯ ಒಂದೇ ಇರುತ್ತದೆ ಎಂದು ಹೇಳಿದರು.
            
            
            Cow is part of India's culture, should be given fundamental rights and declared national animal, the Allahabad High Court observed on Wednesday while denying bail to a person charged under the Uttar Pradesh Prevention of Cow Slaughter Act.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm