ಬ್ರೇಕಿಂಗ್ ನ್ಯೂಸ್
05-09-21 05:00 pm Headline Karnataka News Network ದೇಶ - ವಿದೇಶ
ಕೊಚ್ಚಿ, ಸೆ.5 : ಅತ್ಯಾಚಾರಕ್ಕೀಡಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತ ಯುವತಿಯೊಬ್ಬಳು ಆಸ್ಪತ್ರೆಗೆ ತೆರಳಿದ್ದ ವೇಳೆ ಹೊಟ್ಟೆ ನೋವೆಂದು ಟಾಯ್ಲೆಟ್ ಗೆ ಹೋಗಿ ಪ್ರೌಢಾವಸ್ಥೆಗೆ ಬಾರದ ಶಿಶುವನ್ನು ಹೆತ್ತು ಟಾಯ್ಲೆಟ್ ಗುಂಡಿಯಲ್ಲೇ ಬಿಟ್ಟು ಬಂದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
20 ವರ್ಷದ ಯುವಕನಿಂದ ಲೈಂಗಿಕ ಕಿರುಕುಳಕ್ಕೀಡಾಗಿದ್ದ ಅಪ್ರಾಪ್ತ ಯುವತಿ ಕಳೆದ ಬುಧವಾರ ತಾಯಿ ಜೊತೆ ಕೊಚ್ಚಿಯಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿದ್ದಳು. ಆಸ್ಪತ್ರೆಯಲ್ಲಿ ಟೆಸ್ಟಿಂಗ್ ತೆರಳಿದ್ದಾಗಲೇ ಯುವತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಾಯಿಯನ್ನು ಬಿಟ್ಟು ಹುಡುಗಿ ಟಾಯ್ಲೆಟಿಗೆ ತೆರಳಿದ್ದಳು. ಅಲ್ಲಿದ್ದಾಗಲೇ ಭ್ರೂಣಾವಸ್ಥೆಯಲ್ಲಿದ್ದ ಶಿಶು ತಾಯಿ ಹೊಟ್ಟೆಯಿಂದ ಹೊರಬಂದಿದ್ದು, ಯುವತಿ ಅದನ್ನು ಫ್ಲಷ್ ಮಾಡಿ ಟಾಯ್ಲೆಟ್ ಗುಂಡಿಗೆ ಹೋಗುವಂತೆ ಮಾಡಿದ್ದಾಳೆ. ಆದರೆ, ಅದು ಹೋಗದೇ ಅಲ್ಲಿಯೇ ಬಾಕಿಯಾಗಿತ್ತು. ಹುಡುಗಿ ಹಾಗೆಯೇ ಮರಳಿದ್ದು, ಆಸ್ಪತ್ರೆ ಸ್ಕ್ಯಾನಿಂಗ್ ಸೆಂಟರಿಗೆ ತೆರಳಿದ್ದಳು.
ಆನಂತರ ಸ್ವಲ್ಪ ಹೊತ್ತಲ್ಲಿ ಬೇರೆ ಪೇಶಂಟ್ ಒಬ್ಬರು ಟಾಯ್ಲೆಟ್ ತೆರಳಿದ್ದಾಗ, ಅಲ್ಲಿ ನವಜಾತ ಶಿಶುವಿನ ರೀತಿಯ ಭ್ರೂಣ ಕಂಡುಬಂದಿದ್ದು, ಆಸ್ಪತ್ರೆ ಸಿಬಂದಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಬಂದಿದ್ದು, ಸಿಸಿಟಿವಿ ಆಧರಿಸಿ ಚೆಕ್ ಮಾಡಿದಾಗ ಅಪ್ರಾಪ್ತ ಯುವತಿ ಟಾಯ್ಲೆಟ್ ಹೋಗಿದ್ದನ್ನು ತಿಳಿದು ಆಕೆಯನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ನಡೆಸಿದಾಗ ತನಗೆ ಹೆರಿಗೆಯಾಗಿದ್ದನ್ನು ಪೊಲೀಸರಲ್ಲಿ ಒಪ್ಪಿಕೊಂಡಿದ್ದಾಳೆ.
ಆಬಳಿಕ 20 ವರ್ಷದ ಯುವಕ ತನ್ನ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾಳೆ. ಆಕೆಯ ತಾಯಿ ನೀಡಿದ ದೂರಿನಂತೆ, ವಯನಾಡ್ ಜಿಲ್ಲೆಯ ಮೂಲದ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
A minor rape survivor -- who was pregnant -- delivered a premature baby inside the washroom of a private hospital in Kerala’s Kochi, police said, adding that she, however, flushed down the newborn. As per reports, the minor girl was allegedly raped by a 20-year-old youth. A minor rape survivor -- who was pregnant -- delivered a premature baby inside the washroom of a private hospital in Kerala’s Kochi, police said, adding that she, however, flushed down the newborn.
02-05-26 06:35 pm
HK News Staffer
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
02-05-26 08:26 pm
HK News Staffer
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
02-05-26 08:58 pm
HK News Staffer
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
02-05-26 08:35 pm
HK News Staffer
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm