ಬ್ರೇಕಿಂಗ್ ನ್ಯೂಸ್
05-09-21 05:00 pm Headline Karnataka News Network ದೇಶ - ವಿದೇಶ
ಕೊಚ್ಚಿ, ಸೆ.5 : ಅತ್ಯಾಚಾರಕ್ಕೀಡಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತ ಯುವತಿಯೊಬ್ಬಳು ಆಸ್ಪತ್ರೆಗೆ ತೆರಳಿದ್ದ ವೇಳೆ ಹೊಟ್ಟೆ ನೋವೆಂದು ಟಾಯ್ಲೆಟ್ ಗೆ ಹೋಗಿ ಪ್ರೌಢಾವಸ್ಥೆಗೆ ಬಾರದ ಶಿಶುವನ್ನು ಹೆತ್ತು ಟಾಯ್ಲೆಟ್ ಗುಂಡಿಯಲ್ಲೇ ಬಿಟ್ಟು ಬಂದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
20 ವರ್ಷದ ಯುವಕನಿಂದ ಲೈಂಗಿಕ ಕಿರುಕುಳಕ್ಕೀಡಾಗಿದ್ದ ಅಪ್ರಾಪ್ತ ಯುವತಿ ಕಳೆದ ಬುಧವಾರ ತಾಯಿ ಜೊತೆ ಕೊಚ್ಚಿಯಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿದ್ದಳು. ಆಸ್ಪತ್ರೆಯಲ್ಲಿ ಟೆಸ್ಟಿಂಗ್ ತೆರಳಿದ್ದಾಗಲೇ ಯುವತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಾಯಿಯನ್ನು ಬಿಟ್ಟು ಹುಡುಗಿ ಟಾಯ್ಲೆಟಿಗೆ ತೆರಳಿದ್ದಳು. ಅಲ್ಲಿದ್ದಾಗಲೇ ಭ್ರೂಣಾವಸ್ಥೆಯಲ್ಲಿದ್ದ ಶಿಶು ತಾಯಿ ಹೊಟ್ಟೆಯಿಂದ ಹೊರಬಂದಿದ್ದು, ಯುವತಿ ಅದನ್ನು ಫ್ಲಷ್ ಮಾಡಿ ಟಾಯ್ಲೆಟ್ ಗುಂಡಿಗೆ ಹೋಗುವಂತೆ ಮಾಡಿದ್ದಾಳೆ. ಆದರೆ, ಅದು ಹೋಗದೇ ಅಲ್ಲಿಯೇ ಬಾಕಿಯಾಗಿತ್ತು. ಹುಡುಗಿ ಹಾಗೆಯೇ ಮರಳಿದ್ದು, ಆಸ್ಪತ್ರೆ ಸ್ಕ್ಯಾನಿಂಗ್ ಸೆಂಟರಿಗೆ ತೆರಳಿದ್ದಳು.
ಆನಂತರ ಸ್ವಲ್ಪ ಹೊತ್ತಲ್ಲಿ ಬೇರೆ ಪೇಶಂಟ್ ಒಬ್ಬರು ಟಾಯ್ಲೆಟ್ ತೆರಳಿದ್ದಾಗ, ಅಲ್ಲಿ ನವಜಾತ ಶಿಶುವಿನ ರೀತಿಯ ಭ್ರೂಣ ಕಂಡುಬಂದಿದ್ದು, ಆಸ್ಪತ್ರೆ ಸಿಬಂದಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಬಂದಿದ್ದು, ಸಿಸಿಟಿವಿ ಆಧರಿಸಿ ಚೆಕ್ ಮಾಡಿದಾಗ ಅಪ್ರಾಪ್ತ ಯುವತಿ ಟಾಯ್ಲೆಟ್ ಹೋಗಿದ್ದನ್ನು ತಿಳಿದು ಆಕೆಯನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ನಡೆಸಿದಾಗ ತನಗೆ ಹೆರಿಗೆಯಾಗಿದ್ದನ್ನು ಪೊಲೀಸರಲ್ಲಿ ಒಪ್ಪಿಕೊಂಡಿದ್ದಾಳೆ.
ಆಬಳಿಕ 20 ವರ್ಷದ ಯುವಕ ತನ್ನ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾಳೆ. ಆಕೆಯ ತಾಯಿ ನೀಡಿದ ದೂರಿನಂತೆ, ವಯನಾಡ್ ಜಿಲ್ಲೆಯ ಮೂಲದ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
A minor rape survivor -- who was pregnant -- delivered a premature baby inside the washroom of a private hospital in Kerala’s Kochi, police said, adding that she, however, flushed down the newborn. As per reports, the minor girl was allegedly raped by a 20-year-old youth. A minor rape survivor -- who was pregnant -- delivered a premature baby inside the washroom of a private hospital in Kerala’s Kochi, police said, adding that she, however, flushed down the newborn.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
25-07-26 07:34 pm
HK News Staffer
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
ಮತ್ತೆ ಪ್ರತಿಭಟನೆಗೆ ಬಂದ್ರೆ ಜೇಬಿನಲ್ಲಿ 50 ಗ್ರಾಂ ಡ...
23-07-26 06:26 pm
25-07-26 07:32 pm
HK News Staffer
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
ನೀಟ್ ಪರೀಕ್ಷೆ ; ಮಂಗಳೂರಿನಲ್ಲೂ ಮೊಳಗಿದ ವಿದ್ಯಾರ್ಥಿ...
24-07-26 10:37 pm
Surathkal Brdige, Thokottu, Mangalore: ಸುರತ್ಕ...
23-07-26 10:27 pm
25-07-26 07:36 pm
HK News Staffer
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm
Astra Group Fraud, Lanchu Lal, Mangalore: ‘ಅಸ...
24-07-26 05:30 pm