ಬ್ರೇಕಿಂಗ್ ನ್ಯೂಸ್
            
                        08-09-21 02:04 pm Headline Karnataka News Network ದೇಶ - ವಿದೇಶ
            ಕಾಬೂಲ್, ಸೆ.8: ಅಫ್ಘಾನಿಸ್ತಾನದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ದೇಶಾದ್ಯಂತ ಷರೀಯತ್ ಕಾನೂನನ್ನು ಜಾರಿಗೊಳಿಸುವುದಾಗಿ ಪ್ರಕಟಿಸಿದ್ದಾರೆ. 20 ವರ್ಷಗಳ ಹಿಂದೆ ತಾಲಿಬಾನ್ ಸರಕಾರದಲ್ಲಿ ಅಳವಡಿಸಿದ್ದ ಷರೀಯತ್ ಕಾನೂನನ್ನೇ ದೇಶದ ಎಲ್ಲ ವಿಭಾಗದಲ್ಲಿಯೂ ಜಾರಿಗೊಳಿಸುವುದಾಗಿ ಹೊಸ ಸರಕಾರ ಹೇಳಿಕೊಂಡಿದೆ.
ಯಾರು ಕೂಡ ತಮ್ಮ ಭವಿಷ್ಯದ ಬಗ್ಗೆ ಚಿಂತೆ ಮಾಡುವ ಅಗತ್ಯ ಇಲ್ಲ. ನಮ್ಮ ಮೊದಲ ಆದ್ಯತೆ ಈಗಿರುವ ಎಲ್ಲ ರೀತಿಯ ಸಮಸ್ಯೆಗಳನ್ನು ಸರಿಪಡಿಸುವುದೇ ಆಗಿರುತ್ತದೆ. ಆದರೆ, ಇವೆಲ್ಲವನ್ನೂ ಷರೀಯತ್ ಕಾನೂನು ಪ್ರಕಾರವೇ ನಾವು ವ್ಯವಹರಿಸಲಿದ್ದೇವೆ. ಆದರೆ, 20 ವರ್ಷಗಳ ಸುದೀರ್ಘ ಹೋರಾಟದಲ್ಲಿ ವಿದೇಶಿಗರನ್ನು ಇಲ್ಲಿಂದ ಹೊರ ಹಾಕುವುದು ಮುಖ್ಯ ಗುರಿಯಾಗಿತ್ತು. ದೇಶದಲ್ಲಿ ಸ್ಥಿರ ಸರಕಾರ ರಚನೆ, ಸೆಂಟ್ರಲ್ ಇಸ್ಲಾಮಿಕ್ ಸಿಸ್ಟಮ್ ಜಾರಿಗೆ ತರಲಿದ್ದೇವೆ. ಇದರ ಪ್ರಕಾರ, ದೇಶದ ಎಲ್ಲ ವಿಭಾಗದ ಆಡಳಿತ ವ್ಯವಸ್ಥೆ ಮತ್ತು ಅದರ ನಿಯಮಗಳು ಷರೀಯತ್ ಕಾನೂನು ಪ್ರಕಾರವೇ ಇರಲಿದೆ ಎಂದು ತಾಲಿಬಾನ್ ಸಂಘಟನೆಯ ಸುಪ್ರೀಂ ಲೀಡರ್ ಎಂದು ಹೇಳಲಾಗುತ್ತಿರುವ ಮೌಲವಿ ಹೈಬತುಲ್ಲಾ ಅಖುಂಡಝ ಹೊಸ ಸರಕಾರದ ನೀತಿ ವ್ಯವಸ್ಥೆಯನ್ನು ಪ್ರಕಟಿಸಿದ್ದಾನೆ.


ತಾಲಿಬಾನ್ ಸಂಘಟನೆಯ ನೀತಿ ನಿರ್ಧಾರಕ ಮಂಡಳಿ ರೆಹ್ ಬಾರಿ ಶೂರ ಇದರ ಪ್ರಮುಖನಾಗಿರುವ ಮುಲ್ಲಾ ಮಹಮ್ಮದ್ ಹಸನ್ ಅಖುಂಡ್ ಪ್ರಧಾನಿ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿರುವ ಈವರೆಗೂ ಅಧ್ಯಕ್ಷ ಪದವಿಗೇರಲಿದ್ದಾನೆ ಎಂದು ಹೇಳಲಾಗಿದ್ದ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಿ ಸ್ಥಾನದಲ್ಲಿ ಇರಲಿದ್ದಾನೆ ಎಂದು ತಾಲಿಬಾನ್ ವಕ್ತಾರ ಝಬೀವುಲ್ಲಾ ಮುಜಾಹಿದ್ ಹೇಳಿಕೆ ನೀಡಿದ್ದಾನೆ. 33 ಮಂದಿ ಸಚಿವರನ್ನು ಒಳಗೊಂಡ ಹೊಸ ಸರಕಾರವನ್ನು ತಾಲಿಬಾನ್ ಅಸ್ತಿತ್ವಕ್ಕೆ ತಂದಿದೆ. ಆದರೆ, ಜಾಗತಿಕ ಉಗ್ರರೆಂದು ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಮತ್ತು ಹಕ್ಕಾನಿ ನೆಟ್ವರ್ಕ್ ನಲ್ಲಿ ಸಕ್ರಿಯರಾಗಿರುವ ಉಗ್ರರಿಗೆ ಸರಕಾರದಲ್ಲಿ ಪ್ರಮುಖ ಸ್ಥಾನಗಳನ್ನು ನೀಡಲಾಗಿದೆ.
            
            
            The Taliban have also issued a policy statement to assure the Afghans that “no one should be worried about the future" and also added that they will follow Sharia law for all matters.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm