ಬ್ರೇಕಿಂಗ್ ನ್ಯೂಸ್
09-09-21 05:45 pm Headline Karnataka News Network ದೇಶ - ವಿದೇಶ
ಕಾಬೂಲ್, ಸೆ.9: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದಲ್ಲಿ ಮಹಿಳೆಯರು ಕ್ರಿಕೆಟ್ ಆಡುವಂತಿಲ್ಲ. ಬಾಸ್ಕೆಟ್ ಬಾಲ್, ವಾಲಿಬಾಲ್ ಇನ್ನಿತರ ಹೊರಾಂಗಣದಲ್ಲಿ ಆಡುವ ಯಾವುದೇ ಆಟಗಳನ್ನು ಆಡುವಂತಿಲ್ಲ. ತಾಲಿಬಾನ್ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಮತಾಂಧರ ಬಣ್ಣ ಹೊರಬರುತ್ತಿದ್ದು, ಮಹಿಳೆಯರ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನಗಳು ಹೊರಬರುತ್ತಿವೆ.
ಈ ಬಗ್ಗೆ ಆಸ್ಟ್ರೇಲಿಯಾದ ಮೀಡಿಯಾ ಸಂಸ್ಥೆಗೆ ಸಂದರ್ಶನ ನೀಡಿರುವ ಅಫ್ಘಾನ್ ನೂತನ ಸರಕಾರದ ಸಚಿವ ಅಹ್ಮದುಲ್ಲಾ ವಾಸಿಕ್, ಅಫ್ಘಾನಿಸ್ತಾನದ ಮಹಿಳೆಯರು ಕ್ರಿಕೆಟ್ ಆಡಬೇಕಾದ ಅಗತ್ಯ ಇಲ್ಲ. ಹೀಗಾಗಿ ಕ್ರಿಕೆಟ್ ಸೇರಿದಂತೆ ಹೊರಾಂಗಣದಲ್ಲಿ ಆಡುವ ಆಟಗಳನ್ನು ಆಡುವಂತಿಲ್ಲ. ಅದರಿಂದ ಮಹಿಳೆಯರ ದೇಹ ಹೊರಗಿನವರಿಗೆ ಕಾಣುತ್ತದೆ ಎಂದು ಹೇಳಿದ್ದಾನೆ.


ಮಹಿಳೆಯರು ಕ್ರಿಕೆಟ್ ಆಟದಲ್ಲಿ ತೊಡಗಿದರೆ, ಅವರ ಮುಖ ಮತ್ತು ದೇಹವನ್ನು ಇತರರು ನೋಡುತ್ತಾರೆ. ಇಸ್ಲಾಂನಲ್ಲಿ ಮಹಿಳೆಯರನ್ನು ಈ ರೀತಿ ಪರ ಪುರುಷರು ನೋಡುವುದು ನಿಷಿದ್ಧ. ಈಗಿನ ಮೀಡಿಯಾ ಯುಗದಲ್ಲಿ ಮಹಿಳೆಯರ ಆಟದ ವಿಡಿಯೋ, ಫೋಟೋಗಳು ಹೊರಜಗತ್ತಿಗೆ ಬರುತ್ತವೆ, ಅದನ್ನು ಜನರು ನೋಡುತ್ತಾರೆ. ಅದಕ್ಕಾಗಿ ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಮತ್ತು ಇಸ್ಲಾಂ ರಾಷ್ಟ್ರದಲ್ಲಿ ಮಹಿಳೆಯರ ದೇಹ ಕಾಣುವ ರೀತಿಯ ಕ್ರಿಕೆಟ್ ಇನ್ನಿತರ ಆಟಗಳನ್ನು ನಿಷೇಧ ವಿಧಿಸಲಾಗುವುದು ಎಂದಿದ್ದಾನೆ. ಅಫ್ಘಾನಿಸ್ತಾನದಲ್ಲಿ ಮಹಿಳಾ ಕ್ರಿಕೆಟ್ ತಂಡ, ಬಾಸ್ಕೆಟ್ ಬಾಲ್ ತಂಡಗಳಿದ್ದು, ಕಳೆದ 20 ವರ್ಷಗಳಲ್ಲಿ ಹಲವು ಬಾರಿ ಸಾಧನೆಗಳನ್ನು ಮೆರೆದಿದ್ದರು. ಆದರೆ, ತಾಲಿಬಾನ್ ಆಡಳಿತದಲ್ಲಿ ಇವೆಲ್ಲದಕ್ಕೂ ನಿಷೇಧ ಹಾಕಿದ್ದು, ಕ್ರೀಡಾ ಜಗತ್ತಿನಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯರೆಲ್ಲ ಮನೆಯಲ್ಲೇ ಉಳಿಯುವಂತಾಗಿದೆ.
ವಾರದ ಹಿಂದಷ್ಟೇ ಶಾಲೆ, ಕಾಲೇಜುಗಳಲ್ಲಿ ಯುವತಿಯರು ಮತ್ತು ಯುವಕರು ಪ್ರತ್ಯೇಕವಾಗಿ ತರಗತಿಯಲ್ಲಿ ಕುಳಿತುಕೊಳ್ಳಬೇಕು. ಅದಕ್ಕಾಗಿ ತರಗತಿಯ ನಡುವೆ ಹೆಚ್ಚುವರಿ ಪರದೆ ಹಾಕಬೇಕು ಎಂದು ತಾಲಿಬಾನಿಗಳು ಹೇಳಿದ್ದರು. ಅಲ್ಲದೆ, ಯುವತಿಯರು ಮುಖವನ್ನು ಮುಚ್ಚಿಕೊಂಡು, ಕೈಕಾಲುಗಳನ್ನೂ ಪೂರ್ತಿಯಾಗಿ ಮುಚ್ಚುವಂತೆ ಬಟ್ಟೆ ಧರಿಸಬೇಕು. ಯುವತಿಯರಿಗೆ ಮಹಿಳಾ ಶಿಕ್ಷಕಿಯರೇ ಕಲಿಸಬೇಕು ಎಂದು ಆದೇಶ ಮಾಡಿದ್ದರು.
Afghan women, including the country's national women's cricket team, will be prohibited from participating in sports under the new Taliban regime, the Taliban said on Wednesday. Ahmadullah Wasiq, the deputy chairman of the Taliban's culture commission, claimed in an interview with Australian media that women's sport was neither appropriate nor required.
07-04-26 07:26 pm
HK News Staffer
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ; ಬಳ್ಳಾರಿ,...
07-04-26 12:37 pm
ಇನ್ನೆರಡು ವರ್ಷ ಸಿದ್ದರಾಮಯ್ಯ ಅವರೇ ಸಿಎಂ, ಹೈಕಮಾಂಡ್...
06-04-26 08:51 pm
ದಟ್ಟ ಕಾಡಿನ ಮಧ್ಯೆ ದಾರಿ ತಪ್ಪಿದ್ದ ಶರಣ್ಯ ಕಡೆಗೂ ಪತ...
05-04-26 10:45 pm
07-04-26 10:44 pm
HK News Staffer
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
Pakistan News, Fuel Crisis: ಇಂಧನ ಬಿಕ್ಕಟ್ಟು ;...
07-04-26 08:01 pm
ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಪ್ರಜ್ಞಾಹೀನ...
07-04-26 11:45 am
ಟ್ರಂಪ್ ವಾರ್ನಿಂಗ್ ಗೆ ಇರಾನ್ ಟಕ್ಕರ್ ; ವಿದ್ಯುತ್ ಸ...
07-04-26 11:42 am
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
07-04-26 10:15 pm
HK News Staffer
Arif Murder Case, Mangalore: ಟ್ಯಾಬ್ಲೆಟ್ ಆರೀಫ್...
07-04-26 06:18 pm
ಚಿಕ್ಕಮಗಳೂರು ; ಭದ್ರಾ ನದಿಗೆ ಹಾರಿ ಶಿವಮೊಗ್ಗದ ನರ್ಸ...
07-04-26 04:04 pm
ಪೊಲೀಸ್ ಕಸ್ಟಡಿಯಲ್ಲಿದ್ದ ತಂದೆ-ಮಗನಿಗೆ ಚಿತ್ರಹಿಂಸೆ...
07-04-26 10:08 am
ತಮಿಳಿನ ಖ್ಯಾತ ಕಿರುತೆರೆ ನಟಿ ಸುಭಾಷಿಣಿ ಬಾಲಸುಬ್ರಹ್...
06-04-26 05:40 pm