ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಮಾನ ತುರ್ತು ಭೂಸ್ಪರ್ಶ ಸೌಲಭ್ಯ ; ಭಾರತದಲ್ಲಿ ಮೊದಲ ಪ್ರಯೋಗ !

10-09-21 10:26 pm       Headline Karnataka News Network   ದೇಶ - ವಿದೇಶ

ಭಾರತದ ವಾಯುಪಡೆಯ ವಿಮಾನ ಒಂದನ್ನು ಇದೇ ಮೊದಲ ಬಾರಿಗೆ ರಾಜಸ್ಥಾನದ ಜಲೋರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಸಾಮಾನ್ಯ ರಸ್ತೆಯಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ.

ನವದೆಹಲಿ, ಸೆ.10 : ಭಾರತದ ವಾಯುಪಡೆಯ ವಿಮಾನ ಒಂದನ್ನು ಇದೇ ಮೊದಲ ಬಾರಿಗೆ ರಾಜಸ್ಥಾನದ ಜಲೋರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಸಾಮಾನ್ಯ ರಸ್ತೆಯಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ. ಭಾರತದಲ್ಲಿ ವಿಮಾನವನ್ನು ಹೆದ್ದಾರಿಯಲ್ಲಿ ಲ್ಯಾಂಡ್ ಮಾಡಿದ್ದು ಇದೇ ಮೊದಲು. 
 
ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಏರ್ ಚೀಫ್ ಮಾರ್ಷಲ್ ಆರ್‍ಕೆಎಸ್ ಭದೌರಿಯಾ ಅವರ ಸಮ್ಮುಖದಲ್ಲಿ ಯುದ್ಧ ವಿಮಾನಗಳಾದ ಸುಖೋಯ್ ಸು-30 ಎಂಕೆಐ ಮತ್ತು ಸಿ-130 ಜೆ ಸೂಪರ್ ಹರ್ಕ್ಯುಲಸ್ ವಿಮಾನವನ್ನು ಜಲೋರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಅಗತ್ಯಕ್ಕೆ ಅನುಸರಿಸುವ ಫೀಲ್ಡ್ ಲ್ಯಾಂಡಿಂಗ್ ಮಾಡಲಾಯಿತು.

ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರು ರಾಜಸ್ಥಾನದ ಬಾರ್ಮರ್‍ ನಲ್ಲಿ ರಾಷ್ಟ್ರೀಯ ಹೆದ್ದಾರಿ 925 ರ ಸತ್ತಾ-ಗಾಂಧವ್ ರಸ್ತೆಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ್ದು ನೂತನ ರೀತಿಯ ತುರ್ತು ಭೂಸ್ಪರ್ಶ ಪ್ರಕ್ರಿಯೆಗೆ ಸಾಕ್ಷಿಯಾದರು. 

ಭಾರತ ದೇಶದಲ್ಲಿ ವಿಮಾನವೊಂದು ತುರ್ತು ಭೂಸ್ಪರ್ಶಕ್ಕಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಬಳಸುವುದು ಇದೇ ಮೊದಲ ಬಾರಿಯಾಗಿದೆ. ಈ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಈ ರಸ್ತೆ ಸಹಾಯಕ ಮಿಲಿಟರಿ ವಾಯುನೆಲೆಯಾಗಿ ಕಾರ್ಯ ನಿರ್ವಹಿಸಲು ಸಂಪೂರ್ಣ ಸಿದ್ಧವಾಗಿದೆ ಎಂಬುದು ದೃಢಪಟ್ಟಿದೆ. 

Union Defence Minister Rajnath Singh, Roadways Minister Nitin Gadkari and Air Chief Marshal RKS Bhadauria were on Thursday onboard a C-130J Super Hercules transport aircraft that completed the first 'emergency field landing' on a national highway (NH-925) in Jalore, Rajasthan, as part of a readiness drill by the Armed Forces. Videos of the emergency landing drill, as the aircraft safely touched down on the road, were widely shared on social media platforms.