ಬ್ರೇಕಿಂಗ್ ನ್ಯೂಸ್
06-10-21 06:31 pm Mangaluru Correspondent ದೇಶ - ವಿದೇಶ
ನವದೆಹಲಿ, ಅ.6: 15 ವರ್ಷಕ್ಕಿಂತ ಹೆಚ್ಚು ವಯಸ್ಸಾದ ವಾಹನಗಳನ್ನು ರಸ್ತೆಗಿಳಿಸಿದರೆ, ಎಂಟು ಪಟ್ಟು ದಂಡ ವಿಧಿಸುವ ಬಗ್ಗೆ ಕೇಂದ್ರ ಸರಕಾರ ಹೊಸ ಕಾನೂನು ತರುತ್ತಿದೆ. ಮುಂದಿನ ವರ್ಷ ಎಪ್ರಿಲ್ ತಿಂಗಳಿಂದಲೇ ಹೊಸ ಕಾನೂನು ಬರಲಿದ್ದು, ಈ ಬಗ್ಗೆ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರದಿಂದ ಎಲ್ಲ ರಾಜ್ಯಗಳಿಗೂ ನೋಟೀಫಿಕೇಶನ್ ಹೊರಡಿಸಲಾಗಿದೆ.
ಹೊಸ ಕಾನೂನು ಪ್ರಕಾರ, 15 ವರ್ಷಗಳ ಹಿಂದಿನ ಕಾರನ್ನು ರಿನೀವಲ್ ಮಾಡಿಸಲು ನಿಗದಿತ ಶುಲ್ಕದ ಎಂಟು ಪಟ್ಟು ಮೊತ್ತವನ್ನು ಪ್ರಾಧಿಕಾರಕ್ಕೆ ಕೊಡಬೇಕಾಗುತ್ತದೆ. ಬಸ್, ಲಾರಿ ಇನ್ನಿತರ ಘನ ವಾಹನಗಳ ಮಾಲೀಕರು ಕೂಡ ಇದೇ ಮಾದರಿಯಲ್ಲಿ ತಮ್ಮ ವಾಹನಗಳ ಲೈಸನ್ಸ್ ರಿನೀವಲ್ ಮಾಡಿಸಲು ಎಂಟು ಪಟ್ಟು ದಂಡ ತೆರಬೇಕಾಗುತ್ತದೆ.
ಕಾರಿನ ಲೈಸನ್ಸ್ ನವೀಕರಣ ಶುಲ್ಕ ಈಗ 600 ರೂ. ಇದ್ದರೆ, ಅದು ಇನ್ನು 5 ಸಾವಿರ ರೂ. ಆಗಲಿದೆ. ದ್ವಿಚಕ್ರ ವಾಹನಗಳ ಪರವಾನಗಿ ನವೀಕರಣಕ್ಕೆ 300 ರೂ. ಇದ್ದುದು ಒಂದು ಸಾವಿರಕ್ಕೆ ಏರಿಕೆಯಾಗಲಿದೆ. ಬಸ್, ಲಾರಿ ಇನ್ನಿತರ ಘನ ವಾಹನಗಳ ಫಿಟ್ ನೆಸ್ ಸರ್ಟಿಫಿಕೇಟ್ ಪಡೆಯಲು 12,500 ರೂ. ತೆರಬೇಕು. ಈಗ ಘನ ವಾಹನಗಳಿಗೆ ವಾರ್ಷಿಕ ಫಿಟ್ನೆಸ್ ಶುಲ್ಕ 1500 ಇದೆ. ಕ್ಯಾಬ್ ಇನ್ನಿತರ ಬಾಡಿಗೆ ವಾಹನಗಳ ನವೀಕರಣ ಶುಲ್ಕವೂ ಸದ್ಯ 1000 ಇರುವುದು ಮುಂದಕ್ಕೆ ಏಳು ಪಟ್ಟು ಹೆಚ್ಚಲಿದೆ.
ವಿದೇಶಿ ಕಾರುಗಳ ಲೈಸನ್ಸ್ ನವೀಕರಣ ಶುಲ್ಕ ಈಗ 5000 ಇರುವುದನ್ನು ಎಂಟು ಪಟ್ಟು ಹೆಚ್ಚಿಸಲಾಗಿದ್ದು, 40 ಸಾವಿರಕ್ಕೆ ಏರಿಕೆಯಾಗಲಿದೆ. ಹಳೆಯ ವಾಹನಗಳ ಬಳಕೆ ತಗ್ಗಿಸಲು ಕೇಂದ್ರ ಸರಕಾರ ಹೊಸ ಕಾನೂನು ತಂದಿದ್ದು, ಆಮೂಲಕ ಪರಿಸರ ಮಾಲಿನ್ಯ ತಗ್ಗಲಿದೆ ಎನ್ನುವ ಲೆಕ್ಕಾಚಾರ ಇಟ್ಟುಕೊಂಡಿದೆ. ಇದಲ್ಲದೆ, ಹಳೆ ವಾಹನಗಳ ಲೈಸನ್ಸ್ ನವೀಕರಣವನ್ನು ವಿಳಂಬಗೊಳಿಸಿದಲ್ಲಿ ತಿಂಗಳಿಗೆ ಹೆಚ್ಚುವರಿಯಾಗಿ 300 ರೂ.ನಂತೆ ಮತ್ತೊಂದು ಹೊರೆಯೂ ಬೀಳಲಿದೆ.
ಆದರೆ, ಸರಕಾರದ ಹೊಸ ಮಾರ್ಗಸೂಚಿ ರಾಜಧಾನಿ ದೆಹಲಿಯ ಜನರಿಗೆ ಯಾವುದೇ ಪರಿಣಾಮ ಬೀರಲ್ಲ. ಅಲ್ಲಿ ಈಗಾಗ್ಲೇ ಹತ್ತು ವರ್ಷ ಆಗಿರುವ ಡೀಸೆಲ್ ವಾಹನಗಳು ಮತ್ತು 15 ವರ್ಷ ಕಳೆದಿರುವ ಪೆಟ್ರೋಲ್ ವಾಹನಗಳನ್ನು ನಿಷೇಧ ಮಾಡಲಾಗಿದೆ.
Starting from April next year, vehicle owners will have to shell out Rs 5,000 for renewal of registration of the cars older than 15 years, which is eight times more than what they currently pay. The road transport and highways ministry has issued a notification for the renewal of the certificate of registration of old vehicles and this new rule is part of the government's overall plan to roll out the National Automobile Scrappage Policy.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm