ದುರ್ಗಾ ವಿಸರ್ಜನೆ ವೇಳೆ ಜನರ ಮೇಲೆ ಹರಿದ ಕಾರು ; ನಾಲ್ವರು ಸಾವು 

15-10-21 10:13 pm       Headline Karnataka News Network   ದೇಶ - ವಿದೇಶ

ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯ ಪಥಲ್‌ಗಾಂವ್‌ ಎಂಬಲ್ಲಿ ದುರ್ಗಾ ಮೂರ್ತಿಯನ್ನು ವಿಸರ್ಜಿಸಲು ಹೊರಟಿದ್ದ ವೇಳೆ ಜನರ ಮೇಲೆ ವಾಹನ ಹರಿದು ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 

ರಾಂಚಿ, ಅ.15: ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯ ಪಥಲ್‌ಗಾಂವ್‌ ಎಂಬಲ್ಲಿ ದುರ್ಗಾ ಮೂರ್ತಿಯನ್ನು ವಿಸರ್ಜಿಸಲು ಹೊರಟಿದ್ದ ವೇಳೆ ಜನರ ಮೇಲೆ ವಾಹನ ಹರಿದು ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 

ಘಟನೆಯಲ್ಲಿ ಗಾಯಗೊಂಡ 16 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 1.30ರಿಂದ 2 ಗಂಟೆಯ ನಡುವೆ ಘಟನೆ ನಡೆದಿದೆ. ಹೆಚ್ಚಿನ ಸಂಖ್ಯೆಯ ಜನರು ನವರಾತ್ರಿಯಲ್ಲಿ ಪೂಜಿಸಿದ ದುರ್ಗಾ ಮೂರ್ತಿಯನ್ನು ವಿಸರ್ಜಿಸಲು ನದಿಯ ಕಡೆಗೆ ಹೋಗುತ್ತಿದ್ದರು. ಈ ಮಧ್ಯೆ, ಹಿಂದಿನಿಂದ ವೇಗವಾಗಿ ಬಂದ ಕಾರು ಜನರ ಮೇಲೆ ಹರಿದಿದೆ. ಘಟನೆಯಿಂದ ಕೋಪಗೊಂಡ ಗುಂಪು ಕಾರು ಚಾಲಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದೆ. ಕಾರಿನಲ್ಲಿ ಗಾಂಜಾ ತುಂಬಿತ್ತೆಂದು ಜನರು ಆರೋಪಿಸಿದ್ದಾರೆ. 

ಕೋಪಗೊಂಡ ಜನರು ಪಥಲ್‌ಗಾಂವ್‌ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಜಶ್ಪುರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮಾಹಿತಿ ಪ್ರಕಾರ, ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

FOur  person were killed and 20 others injured after a speeding car ran over a group of people during the Goddess Durga idol immersion procession at Pathalgaon in Chhattisgarh's Jashpur district on Friday. According to the details, the accident occurred in the Bazarpara area in Pathalgaon.