ಬ್ರೇಕಿಂಗ್ ನ್ಯೂಸ್
22-11-21 06:04 pm Headline Karnataka News Network ದೇಶ - ವಿದೇಶ
ಚೆನ್ನೈ, ನ.22: ಇತ್ತೀಚೆಗೆ ಅಮೆರಿಕದ ಚಿಕಾಗೋದಲ್ಲಿ ಭಾರತೀಯ ಮೂಲದ ಖಾದಿ ವಸ್ತ್ರ ಭಂಡಾರವನ್ನು ಆರಂಭಿಸಿ ಎರಡು ದಿನಗಳ ಹಿಂದಷ್ಟೇ ಚೆನ್ನೈಗೆ ಮರಳಿದ್ದ ಬಹುಭಾಷಾ ನಟ ಕಮಲ್ ಹಾಸನ್ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಕೋವಿಡ್ ಪಾಸಿಟಿವ್ ಆಗಿರುವುದನ್ನು ಕಮಲಹಾಸನ್ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.
ಕೆಮ್ಮು ಇನ್ನಿತರ ಕೋವಿಡ್ ಲಕ್ಷಣಗಳನ್ನು ಹೊಂದಿರುವ ನಟ ಕಮಲಹಾಸನ್ ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಮಲಹಾಸನ್, ವಿಕ್ರಮ್ ಕನಗರಾಜನ್ ನಿರ್ದೇಶನದ ತಮಿಳು ಚಿತ್ರ ಮತ್ತು ವಿಜಯ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ತಮಿಳು ಬಿಗ್ ಬಾಸ್ ಸೀಸನ್ –5 ಅನ್ನು ನಡೆಸಿಕೊಡುತ್ತಿದ್ದಾರೆ. ಅಮೆರಿಕದಿಂದ ಹಿಂತಿರುಗಿದ ಬಳಿಕ ಮಾತನಾಡಿದ್ದ ಕಮಲ್, ಕೆಲವರು ನಾನು ಅಮೆರಿಕದಲ್ಲಿದ್ದರಿಂದ ಈ ವಾರದ ಬಿಗ್ ಬಾಸ್ ಸೀಸನಿಂದ ಮಿಸ್ ಆಗಲಿದ್ದಾರೆ ಅಂದ್ಕೊಂಡಿದ್ದರು. ಆದರೆ ನಾನು ಯಾವತ್ತೂ ಮಿಸ್ ಮಾಡಿಕೊಳ್ಳುವ ಪ್ರವೃತ್ತಿಯನ್ನು ಹೊಂದಿಲ್ಲ ಎಂದಿದ್ದರು.
ಆದರೆ, ಅದರ ಮರುದಿನ ಅಂದರೆ ನ.22ರಂದು ತನ್ನ ಟ್ವಿಟರ್ ನಲ್ಲಿ ಕೋವಿಡ್ ಪಾಸಿಟಿವ್ ಎಂದು ಹೇಳಿಕೊಂಡಿದ್ದು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿರುವುದಾಗಿ ಹೇಳಿದ್ದಾರೆ. ಅಮೆರಿಕದಿಂದ ಹಿಂತಿರುಗಿದ ಬಳಿಕ ಸ್ವಲ್ಪ ಕೆಮ್ಮು ಆಗಿತ್ತು. ಹಾಗಾಗಿ ಟೆಸ್ಟ್ ಮಾಡಿದ್ದೆ. ಟೆಸ್ಟ್ ನಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ನಾನು ಚೆನ್ನೈನ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿದ್ದೇನೆ. ಜನರು ಕೋವಿಡ್ ನಮ್ಮಿಂದ ದೂರವಾಗಿದೆ ಎಂದು ಅಂದ್ಕೊಳ್ಳುವುದು ಬೇಡ. ಕೋವಿಡ್ ಬಗ್ಗೆ ಮುಂಜಾಗ್ರತೆ ವಹಿಸಿಕೊಳ್ಳಬೇಕು ಎಂದು ತಮಿಳಿನಲ್ಲಿ ಟ್ವೀಟ್ ಮಾಡಿದ್ದಾರೆ.
ವಾರದ ಹಿಂದೆ ಅಮೆರಿಕದ ಚಿಕಾಗೋ ನಗರದಲ್ಲಿ ಕಾಸ್ಟ್ಯೂಮ್ ಡಿಸೈನರ್ ಅಮೃತಾ ರಾಮ್ ಜೊತೆಗೂಡಿ ಕೆಎಚ್ ಹೌಸ್ ಖದ್ದರ್ ಎನ್ನುವ ಹೆಸರಲ್ಲಿ ಖಾದಿ ವಸ್ತ್ರಗಳ ಮಳಿಗೆಯನ್ನು ತೆರೆದಿದ್ದಾರೆ. ಖಾದಿ ವಸ್ತ್ರಗಳನ್ನು ಅಮೆರಿಕದಲ್ಲಿ ಪರಿಚಯಿಸಲು ಖಾದಿ ಬ್ರಾಂಡಿನ ಮಳಿಗೆಯನ್ನು ಆರಂಭಿಸಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಕಮಲ್ ಹಾಸನ್, ಚಿಕಾಗೋ ಸಮೃದ್ಧ ಸಂಸ್ಕೃತಿ ಮತ್ತು ಇತಿಹಾಸವನ್ನು ಹೊಂದಿರುವ ಸ್ಪೆಷಲ್ ಆಗಿರುವ ಸಿಟಿ. ದೇಸಿ ಸಂಸ್ಕೃತಿ ಇಲ್ಲಿಯೂ ಜನರಲ್ಲಿ ಬೆಳೆಯಬೇಕು. ನಮ್ಮ ಬ್ರಾಂಡ್ ಜನರಿಗೆ ತಲುಪಲು ಸೂಕ್ತ ನಗರವನ್ನು ನಾವು ಆಯ್ದುಕೊಂಡಿದ್ದೇವೆ ಎನ್ನುವ ಭರವಸೆ ಇದೆ. ಉತ್ತರ ಅಮೆರಿಕಾದಲ್ಲೇ ಇಲ್ಲಿನ ಜನ ಅತಿ ಹೆಚ್ಚು ವಸ್ತ್ರ, ಉಡುಪುಗಳ ಬಗ್ಗೆ ಹೆಚ್ಚು ಗಮನ ಹೊಂದಿದ್ದಾರೆ ಎಂದು ಹೇಳಿದ್ದರು.
Makkal Needhi Maiam president and actor Kamal Haasan on Monday said he has tested positive for COVID-19 and has been admitted to a hospital.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 09:25 pm
Mangalore Correspondent
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm