ಬ್ರೇಕಿಂಗ್ ನ್ಯೂಸ್
14-12-21 12:11 pm HK Desk news ದೇಶ - ವಿದೇಶ
ಕಾಸರಗೋಡು, ಡಿ.14 : ಕಾಸರಗೋಡು ಬ್ಲಾಕ್ ಪಂಚಾಯತ್ ಬಿಜೆಪಿ ಸದಸ್ಯೆಯೊಬ್ಬರಿಗೆ ಉಗ್ರವಾದ ಮತ್ತು ಲವ್ ಜಿಹಾದ್ ಬೆಂಬಲಿಸಿ ಬರೆದ ಕರಪತ್ರಗಳನ್ನು ಪೋಸ್ಟ್ ನಲ್ಲಿ ಕಳಿಸಲಾಗಿದ್ದು, ಆತಂಕ ವ್ಯಕ್ತವಾಗಿದೆ.
ಬದಿಯಡ್ಕ ಸಮೀಪದ ಪೆರಡಾಲ ಡಿವಿಶನ್ ಪ್ರತಿನಿಧಿಸುವ ಬಿಜೆಪಿಯ ಕೆ.ಎಂ.ಅಶ್ವಿನಿ ಅವರಿಗೆ ಈ ರೀತಿಯ ವಿಕೃತ ಪೋಸ್ಟ್ ಮಾಡಲಾಗಿದ್ದು, ಆಕೆಯ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಇಂಗ್ಲಿಷ್, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಬರೆದಿರುವ ಕರಪತ್ರಗಳನ್ನು ಪೋಸ್ಟ್ ಮೂಲಕ ಅಶ್ವಿನಿ ಅವರ ವಿಳಾಸಕ್ಕೆ ಕಳಿಸಲಾಗಿತ್ತು. ಅಶ್ವಿನಿ ಕರಪತ್ರಗಳನ್ನು ಬದಿಯಡ್ಕ ಠಾಣೆಗೆ ಒಪ್ಪಿಸಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಶ್ವಿನಿ ಅವರು ನೀರ್ಚಾಲು ಸಮೀಪದ ಓಣಿಯಡ್ಕ ಎಂಬಲ್ಲಿ ವಾಸವಿದ್ದಾರೆ. ಈಕೆಯ ವಿಳಾಸಕ್ಕೆ ಪೋಸ್ಟ್ ನಲ್ಲಿ ಕರಪತ್ರಗಳನ್ನು ಕಳುಹಿಸಲಾಗಿತ್ತು. ಕಳುಹಿಸಿದವರ ವಿಳಾಸ ಕುರಾನ್ ಎಜುಕೇಶನ್, ಪೋಸ್ಟ್ ಬಾಕ್ಸ್ ನಂಬರ್ 58, ಮಂಜೇರಿ, ಮಲಪ್ಪುರಂ ಎಂದು ಬರೆಯಲಾಗಿತ್ತು.
ಒಂದು ಕರಪತ್ರದಲ್ಲಿ ಭೂಮಿ ತಿರುಗುವುದನ್ನು ಹೇಗೆ ನಿಲ್ಲಿಸುವುದು ಎಂಬ ಬಗ್ಗೆ ಉಪದೇಶದ ವಾಕ್ಯಗಳಿವೆ. ತಮಿಳು, ಇಂಗ್ಲಿಷ್, ಅರೇಬಿಕ್ ಭಾಷೆಯಲ್ಲಿ ಉಗ್ರವಾದ ಮತ್ತು ಲವ್ ಜಿಹಾದ್ ಪರವಾಗಿ ಬರೆಯಲಾಗಿದೆ. ಕರಪತ್ರದ ಕೆಳಗಡೆ ಮುಹಿಯುದ್ದೀನ್ ಮೊಹಮ್ಮದ್ ಇರುಂಬುಝಿ ಎಂಬ ಹೆಸರನ್ನೂ ಬರೆಯಲಾಗಿದೆ. ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿರುವ ಮಂದಿಗೆ ನನ್ನ ವಿಳಾಸ ಸಿಕ್ಕಿದ್ದು ಹೇಗೆ ಎಂದು ಅಶ್ವಿನಿ ಅಚ್ಚರಿಗೆ ಒಳಗಾಗಿದ್ದಾರೆ. ಇದರ ಹಿಂದೆ ಉಗ್ರವಾದ ಬೆಂಬಲಿಸುವ ಸ್ಥಳೀಯರ ಕೈವಾಡ ಇರುವ ಶಂಕೆಯನ್ನು ಅಶ್ವಿನಿ ವ್ಯಕ್ತಪಡಿಸಿದ್ದಾರೆ.
A member of Kasargod block panchayat has received three pamphlets by post, the contents of which support t terrorism and Love Jihad. K M Ashwini from the BJP who represents Peradala division in the block panchayat received these pamphlets. She has since handed them over to the Badiadka police station. The police have registered a case and begun an investigation.
02-05-25 10:00 pm
Bangalore Correspondent
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 10:47 pm
Mangalore Correspondent
Mangalore Suhas Shetty Murder, Shobha Karandl...
02-05-25 09:26 pm
B Y Vijayendra, Suhas Shetty Murder, Mangalor...
02-05-25 06:44 pm
Brijesh Chowta, NIA, Suhas Shetty Murder: ಸುಹ...
02-05-25 06:31 pm
Mangalore Suhas Shetty Murder, ADGP Hitendra:...
02-05-25 03:10 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm