ಬ್ರೇಕಿಂಗ್ ನ್ಯೂಸ್
14-12-21 12:11 pm HK Desk news ದೇಶ - ವಿದೇಶ
ಕಾಸರಗೋಡು, ಡಿ.14 : ಕಾಸರಗೋಡು ಬ್ಲಾಕ್ ಪಂಚಾಯತ್ ಬಿಜೆಪಿ ಸದಸ್ಯೆಯೊಬ್ಬರಿಗೆ ಉಗ್ರವಾದ ಮತ್ತು ಲವ್ ಜಿಹಾದ್ ಬೆಂಬಲಿಸಿ ಬರೆದ ಕರಪತ್ರಗಳನ್ನು ಪೋಸ್ಟ್ ನಲ್ಲಿ ಕಳಿಸಲಾಗಿದ್ದು, ಆತಂಕ ವ್ಯಕ್ತವಾಗಿದೆ.
ಬದಿಯಡ್ಕ ಸಮೀಪದ ಪೆರಡಾಲ ಡಿವಿಶನ್ ಪ್ರತಿನಿಧಿಸುವ ಬಿಜೆಪಿಯ ಕೆ.ಎಂ.ಅಶ್ವಿನಿ ಅವರಿಗೆ ಈ ರೀತಿಯ ವಿಕೃತ ಪೋಸ್ಟ್ ಮಾಡಲಾಗಿದ್ದು, ಆಕೆಯ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಇಂಗ್ಲಿಷ್, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಬರೆದಿರುವ ಕರಪತ್ರಗಳನ್ನು ಪೋಸ್ಟ್ ಮೂಲಕ ಅಶ್ವಿನಿ ಅವರ ವಿಳಾಸಕ್ಕೆ ಕಳಿಸಲಾಗಿತ್ತು. ಅಶ್ವಿನಿ ಕರಪತ್ರಗಳನ್ನು ಬದಿಯಡ್ಕ ಠಾಣೆಗೆ ಒಪ್ಪಿಸಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಶ್ವಿನಿ ಅವರು ನೀರ್ಚಾಲು ಸಮೀಪದ ಓಣಿಯಡ್ಕ ಎಂಬಲ್ಲಿ ವಾಸವಿದ್ದಾರೆ. ಈಕೆಯ ವಿಳಾಸಕ್ಕೆ ಪೋಸ್ಟ್ ನಲ್ಲಿ ಕರಪತ್ರಗಳನ್ನು ಕಳುಹಿಸಲಾಗಿತ್ತು. ಕಳುಹಿಸಿದವರ ವಿಳಾಸ ಕುರಾನ್ ಎಜುಕೇಶನ್, ಪೋಸ್ಟ್ ಬಾಕ್ಸ್ ನಂಬರ್ 58, ಮಂಜೇರಿ, ಮಲಪ್ಪುರಂ ಎಂದು ಬರೆಯಲಾಗಿತ್ತು.
ಒಂದು ಕರಪತ್ರದಲ್ಲಿ ಭೂಮಿ ತಿರುಗುವುದನ್ನು ಹೇಗೆ ನಿಲ್ಲಿಸುವುದು ಎಂಬ ಬಗ್ಗೆ ಉಪದೇಶದ ವಾಕ್ಯಗಳಿವೆ. ತಮಿಳು, ಇಂಗ್ಲಿಷ್, ಅರೇಬಿಕ್ ಭಾಷೆಯಲ್ಲಿ ಉಗ್ರವಾದ ಮತ್ತು ಲವ್ ಜಿಹಾದ್ ಪರವಾಗಿ ಬರೆಯಲಾಗಿದೆ. ಕರಪತ್ರದ ಕೆಳಗಡೆ ಮುಹಿಯುದ್ದೀನ್ ಮೊಹಮ್ಮದ್ ಇರುಂಬುಝಿ ಎಂಬ ಹೆಸರನ್ನೂ ಬರೆಯಲಾಗಿದೆ. ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿರುವ ಮಂದಿಗೆ ನನ್ನ ವಿಳಾಸ ಸಿಕ್ಕಿದ್ದು ಹೇಗೆ ಎಂದು ಅಶ್ವಿನಿ ಅಚ್ಚರಿಗೆ ಒಳಗಾಗಿದ್ದಾರೆ. ಇದರ ಹಿಂದೆ ಉಗ್ರವಾದ ಬೆಂಬಲಿಸುವ ಸ್ಥಳೀಯರ ಕೈವಾಡ ಇರುವ ಶಂಕೆಯನ್ನು ಅಶ್ವಿನಿ ವ್ಯಕ್ತಪಡಿಸಿದ್ದಾರೆ.
A member of Kasargod block panchayat has received three pamphlets by post, the contents of which support t terrorism and Love Jihad. K M Ashwini from the BJP who represents Peradala division in the block panchayat received these pamphlets. She has since handed them over to the Badiadka police station. The police have registered a case and begun an investigation.
16-12-25 03:08 pm
Bangalore Correspondent
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
16-12-25 06:33 pm
HK News Desk
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
16-12-25 10:25 pm
Mangalore Correspondent
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
16-12-25 10:35 pm
Mangalore Correspondent
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am